ಕಾತ್ರಜ್ ಶ್ರೀ ಅಯ್ಯಪ್ಪ ಮಂದಿರ ಗಣಪತಿ ದೇವರಿಗೆ ಬೆಳ್ಳಿಯ ಮುಕುಟ
Team Udayavani, Feb 15, 2017, 3:32 PM IST
ಪುಣೆ: ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿರುವ ಸಹ ಪರಿವಾರ ಶ್ರೀ ಗಣಪತಿ ದೇವರಿಗೆ ಸುಮಾರು ಒಂದು ಲಕ್ಷಕಿಂತಲೂ ಅಧಿಕ ಬೆಲೆಬಾಳುವ ಬೆಳ್ಳಿಯ ಮುಕುಟವನ್ನು ಪುಣೆಯ ಆಶಾ ಗ್ರೂಪ್ ಆಫ್ ಹೊಟೇಲ್ಸ… ನವರು ಕುಂಭ ಸಂಕ್ರಮಣದ ಶುಭ ದಿನವಾದ ಫೆ. 12ರಂದು ಸಮರ್ಪಿಸಿದರು.
ಸಂಕ್ರಮಣದಂದು ಅಯ್ಯಪ್ಪ ಮಂದಿರದಲ್ಲಿ ಪ್ರಧಾನ ಅರ್ಚಕ ರಾದ ಹರೀಶ್ ಭಟ್ ಅವರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಜನರು ಮಂದಿರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಕಾತ್ರಜ್ ಶ್ರೀ ಅಯ್ಯಪ್ಪ ಮಂದಿರದ ಮುಖ್ಯ ಸೇವಾಕರ್ತರಲ್ಲಿ ಒಬ್ಬರಾದ ಆಶಾ ಗ್ರೂಪ್ನವರು ತಮ್ಮ ಸೇವಾ ರೂಪದಲ್ಲಿ ಈ ಮುಕುಟವನ್ನು ಶ್ರೀ ಗಣಪತಿ ದೇವರಿಗೆ ಹರೀಶ್ ಭಟ… ಅವರ ಮುಖಾಂತರ ದೇವರಿಗೆ ಅಲಂಕರಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಂದಿರದ ವಿಶ್ವಸ್ತ ಮಂಡಳಿ, ಕಾರ್ಯಕಾರಿ ಸೇವಾ ಸಮಿತಿ ಮತ್ತು ಮಹಿಳಾ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು