ನೂತನ ಅನುಭವ ನೀಡಿದ ಶ್ರೀ ಶನಿಪೂಜಾ ಸಹಿತ ತಾಳಮದ್ದಳೆ


Team Udayavani, Jul 19, 2017, 3:53 PM IST

17-Mum03.jpg

ಕಳೆದ ಶತಮಾನದ ಆರಂಭದಿಂದ ಮುಂಬಯಿ ಮಹಾನಗರದಲ್ಲಿ ವಿಶೇಷವಾಗಿ ಫೋರ್ಟ್‌ ವಿಭಾಗದಲ್ಲಿ ಶನಿಮಹಾಪೂಜೆಯು ಜರಗುತ್ತಿತ್ತು. ಬಯಲು ಸೀಮೆಯ ಕವಿ ಚಿನ್ಮಯ ದಾಸರು ರಚಿಸಿದ ಯಕ್ಷಗಾನ ಶನಿಮಹಾತೆ¾ಯೆ ಇದಕ್ಕೆ ಆಧಾರ ಗ್ರಂಥವಾಗಿದೆ. ಅದರಲ್ಲಿ ವಿವರಿಸಿದ ಪೂಜಾ ವಿಧಾನವೇ ಶನಿಪೂಜೆಗೆ ಆಧಾರ. ವೈದಿಕರು ವಿರಚಿಸುವ ನವಗ್ರಹ ಶಾಂತಿ, ಶನಿಶಾಂತಿಗಳಿಗೆ ಮತ್ತು ಈ ಶನಿಪೂಜಾ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಶನಿದೇವರ ಫೋಟೊ ಇಟ್ಟು ಸರಳ ವಿಧಾನದಿಂದ ಪೂಜಾ ವಿಧಿಗಳನ್ನು ಮಾಡಿ ಅನಂತರ ಗ್ರಂಥ ದಲ್ಲಿನ ಹಾಡುಗಳನ್ನು ಒಬ್ಬರು ಹಾಡುವುದು, ಇನ್ನೊಬ್ಬರು ಅದರ ಅರ್ಥ ಹೇಳುವುದು. ಅದು ಪ್ರವಚನ ರೂಪದಲ್ಲಿ ತುಳು ಭಾಷೆಯಲ್ಲಿಯೇ ಅರ್ಥ ವಿವರಣೆ ನೀಡಿ, ಕೊನೆಗೆ ಮಂಗಳವಾಗಿ ಪ್ರಸಾದ ವಿತರಣೆಯಲ್ಲಿ ಕಾರ್ಯಕ್ರಮ ಮುಗಿಯುತ್ತಿತ್ತು. ಇದು ಇಡೀ ರಾತ್ರಿಯ ಕಾರ್ಯಕ್ರಮವಾಗಿತ್ತು.

ಆದರೆ ಪ್ರಸ್ತುತ ಕಾಲ ಬದಲಾಗಿದೆ. ಚಿನ್ಮಯ ದಾಸರ ಕೃತಿಯ ಎರಡು ಪುಟ ಓದಿ ಅನಂತರ ಯಕ್ಷಗಾನ ತಾಳಮದ್ದಳೆ ಕ್ರಮದಲ್ಲಿ ಜರಗಲು ಪ್ರಾರಂಭವಾಯಿತು. ಮೊದಲು ಹಿಮ್ಮೇಳ ಅನಂತರ ಯಕ್ಷಗಾನದ ಅರ್ಥಧಾರಿ ಕಲಾವಿದರು ಶನಿ ಪೂಜೆಯಲ್ಲಿ ಭಾಗವಹಿಸಲು ಪ್ರಾರಂಭವಾದದ್ದು ಈಗ ಇತಿಹಾಸ. 

ತಾಳಮದ್ದಳೆಗೆ ಸೀತಾ ನದಿ ಗಣಪಯ್ಯ ಶೆಟ್ಟಿ ವಿರಚಿತ ಪ್ರಸಂಗ  ಉಪಯೋಗಿಸಲ್ಪಡು ತ್ತಿತ್ತು. ಈ ಪ್ರಸಂಗ ಚಿನ್ಮಯ ದಾಸರ ಕೃತಿಯ ಆಧಾರದಿಂದಲೇ ರಚನೆಗೊಂಡಿದ್ದರೂ ಯಕ್ಷಗಾನ ಬಯಲಾಟಕ್ಕೆ ಅನುಕೂಲವಾಗುವಂತೆ ಇದರ ರಚನೆಯಾಗಿರುತ್ತದೆ.

ಆದರೆ ಶನಿಪೂಜಾ ಮಂಡಳಿ ಪಕ್ಷಿಕೆರೆ ತಂಡದ ಕಲಾವಿದರು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಯೋಜನೆಯಲ್ಲಿ ಜೂ. 24 ರಿಂದ ಜು. 1 ರ ವರೆಗೆ ನಗರ ಹಾಗೂ ಉಪನಗರಗಳಲ್ಲಿ ಆರು ಶನಿಪೂಜಾ ಸಹಿತ ತಾಳಮದ್ದಳೆಯನ್ನು ಆಯೋಜಿಸಿ ಮುಂಬಯಿ ಕಲಾಭಿಮಾನಿಗಳಿಗೆ ವಿನೂತನ ಅನುಭನವವನ್ನು ನೀಡಿತ್ತು. ಪಕ್ಷಿಕೆರೆ ಶನಿಪೂಜೆಯ ಬಗ್ಗೆ ಹೇಳುವುದಾದರೆ ಅವರ ಪೂಜಾ ವಿಧಿ ವಿಧಾನಗಳು ಶ್ರೀ ಸತ್ಯನಾರಾಯಣ ಕಥಾ ಪೂಜೆಯನ್ನು ಹೋಲುತ್ತಿದ್ದರೆ, ಪ್ರಸಂಗದಲ್ಲಿ ನಂದಿ ಶೆಟ್ಟಿ, ರಾಮಗಾಣಿಗರಿಗೆ ಹೆಚ್ಚಿನ ಅವಕಾಶದಿಂದ ಹಾಸ್ಯವೇ ಪ್ರಧಾನವಾಯಿತು.

ವಿಕ್ರಮಾದಿತ್ಯ,  ಚಂದ್ರಸೇನನ ನಿರೂಪಣೆ, ಸರಪಾಡಿ ಅಶೋಕ್‌ ಶೆಟ್ಟಿ ಅವರ ಶನಿಯ ಪಾತ್ರವೂ ಉತ್ತಮವಾಗಿತ್ತು. ಕುದುರೆ ವ್ಯಾಪಾರಿಯಾಗಿ ಬಂದ ಶನಿದೇವನ ಪಾತ್ರ ಸಭಿಕರನ್ನು ನಡೆಗಡಲಲ್ಲಿ ತೇಲಿಸುವುದರಲ್ಲಿ ಯಶಸ್ವಿಯಾದರೂ ಶನಿದೇವರು ಕುದುರೆ ವ್ಯಾಪಾರಿ ಯಾಗಿ ಬಂದಿರುವುದು ವಿನಃ ಅನ್ಯ ಧರ್ಮ ಪ್ರಶಂಸೆಗೆ ಅಲ್ಲ ಎಂಬು ದಾಗಿ ರಾಜಾಜ್ಞೆಯಾದ ಕೂಡಲೆ  ಎಳನೀರು ಮತ್ತು ಫಲವಸ್ತುಗಳ ಅರ್ಪಣೆ, ಸಭೆಗೆ ಬಾಳೆ ಹಣ್ಣು ವಿತರಣೆ ಹಾಗೆಯೇ ಕೂಷ್ಮಾಂಡ ಫಲದಾನ ಎಂದಾಕ್ಷಣ ವೀಳ್ಯದೆಲೆಯಲ್ಲಿ ಹಸಿ ಅಡಿಕೆ ಮತ್ತು ನೂರು ರೂ. ದಕ್ಷಿಣೆ ಸಮೇತ ಎಲ್ಲ ಕಲಾವಿದರಿಗೆ ದಾನ ಮಾಡಿದ ದೃಶ್ಯ, ದೀಪಕರಾಗ ಹಾಡಿದಾಗ ನೂರಾರು ಹಣತೆಯಲ್ಲಿ ದೀಪಪ್ರಜ್ವಲಿಸುವ ದೃಶ್ಯ ಇವೆಲ್ಲವೂ ಮುಂಬಯಿ ಶನಿಭಕ್ತರಿಗೆ ವಿಶೇಷ ಅನುಭವವನ್ನು ನೀಡಿತು.

ಆದರೆ ಇದೆಲ್ಲ ಅಗತ್ಯವೆನಿಸು ವುದಿಲ್ಲ. ಹಾಗಾಗಿ ಇದು ಅನು ಕರಣೀಯವೂ ಅಲ್ಲ ಎಂದು ನನ್ನ ಅಭಿಪ್ರಾಯ. ಡೊಂಬಿವಲಿಯಲ್ಲಿ ನಡೆದ ಶನಿಪೂಜಾ ಸಹಿತ ತಾಳ ಮದ್ದಳೆಯಲ್ಲಿ ಭಾಗವತೆ ಅಮೃತಾ ಅಡಿಗ ಅವರು ಅತ್ಯುತ್ತಮವಾಗಿ ಭಾಗವತಿಕೆ ಮಾಡಿದರು. ಅದ ರಲ್ಲೂ ಚಿನ್ಮಯ ದಾಸರ ಕೃತಿಯ ಪದ್ಯವನ್ನೇ ಅವರು ಹಾಡಿ ಮುಗಿಸಿದ್ದು ವಿಶೇಷತೆಯಾಗಿತ್ತು. ಯಕ್ಷಗಾನದ ಎಲ್ಲ ಪ್ರಭೇದಗಳಿಗೆ ಮುಂಬಯಿಯಲ್ಲಿ ಸ್ವಾಗತವಿದೆ. ಇನ್ನು ಮುಂದಿನ ದಿನಗಳಲ್ಲಿ ಮೂರು ತಾಳಮದ್ದಳೆ ತಂಡಗಳು, ಮೂರು ಯಕ್ಷಗಾನ ಮೇಳಗಳು, ಜತೆಗೆ ಬಡಗುತಿಟ್ಟಿನ ಎರಡು ಮೇಳಗಳ ಕಾರ್ಯಕ್ರಮಗಳು ಮುಂಬಯಿ ಮತ್ತು ಉಪನಗರಗಳಲ್ಲಿ ಜರಗಲಿದ್ದು, ಎಲ್ಲಾ ಪ್ರದರ್ಶನಗಳಿಗೂ ಇಲ್ಲಿನ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂಬು  ದು ನನ್ನ ಆಶಯ.

ಕೊಲ್ಯಾರು ರಾಜು ಶೆಟ್ಟಿ.

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.