ಬಿಲ್ಲವರ ಅಸೋಶಿಯೇಶನ್‌ನಿಂದ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ


Team Udayavani, Sep 5, 2017, 4:14 PM IST

02mum08B.jpg

ಮುಂಬಯಿ:  ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಿದ್ಯಾ ಉಪಸಮಿತಿ ವತಿಯಿಂದ ವಾರ್ಷಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಸೆ.2ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಶ್ರೀ ನಾರಾಯಣ ಸಭಾಗೃಹದಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ರಮೇಶ್‌ ಕೋಟಿ, ಗೌರವ ಅತಿಥಿಗಳಾಗಿ ಭಾರತ್‌ ಕೋ.ಅಪರೇಟಿವ್‌ ಬ್ಯಾಂಕ್‌ (ಮುಂಬಯಿ) ಲಿಮಿಟೆಡ್‌ ಇದರ ನಿರ್ದೇಶಕ‌ ಭಾಸ್ಕರ ಎಂ. ಸಾಲ್ಯಾನ್‌ ಮತ್ತು ಸಮಾಜ ಸೇವಕಿ ನ್ಯಾ| ಕವಿತಾ ಆರ್‌.ಕೋಟಿ ಉಪಸ್ಥಿತರಿದ್ದು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ಮಹೇಶ್‌ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್‌, ವೇದಿಕೆಯಲ್ಲಿ ಆಸೀನರಾಗಿದ್ದು ಅತಿಥಿಗಳು ನೆರೆದ ಮಕ್ಕಳ ದತ್ತು ಸ್ವೀಕಾರ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಸ್ತಾಂತರಿಸಿ ಅಭಿನಂದಿಸಿದರು.

ಆರಂಭದಲ್ಲಿ ಪ್ರೇರಣಾ ಮಾತುಗಾರ ಸಾಮುದಾಯಿಕ ತರಬೇತುದಾರ  ರಾಕೇಶ್‌ ಶೆಟ್ಟಿ ಅವರು “ಸ್ವಯಂ ವಿಶ್ವಾಸ’ ವಿಚಾರಿತ ಕಾರ್ಯಗಾರ ನಡೆಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಜಾಗತಿಕ ಅರಿವು ಮೈಗೂಡಿಸಿ ಕೊಳ್ಳಬೇಕು. ಬದ್ಧತೆಯನ್ನು ರೂಪಿಸಿಕೊಂಡಾಗ ಭವ್ಯವಾದ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಆಧುನಿಕ ಜಗತ್ತಿನ ಜ್ಞಾನವನ್ನು ಕ್ರೋಢೀಕರಿಸಿಕೊಳ್ಳಿರಿ ಎಂದರು. ಅಖೀಲೇಶ್‌ ಅಂಚನ್‌ ಅವರು ಮಾಹಿತಿ ಕಾರ್ಯಗಾರ ನಡೆಸಿದರು.

ಭಾಸ್ಕರ ಎಂ.ಸಾಲ್ಯಾನ್‌ ಮಾತನಾಡಿ 490 ಮಕ್ಕಳನ್ನು ದತ್ತಿಯಾಗಿ ಸ್ವೀಕರಿಸಿ ಪ್ರೋತ್ಸಾಹಿಸು ವುದು ಸ್ತುಹ್ಯರ್ಹ. ಶಿಕ್ಷಣದಿಂದಲೇ ದೇಶದ ಸರ್ವೋನ್ನತಿ ಸಾಧ್ಯ. ಆಸಕ್ತಿವುಳ್ಳ ಮಕ್ಕಳಿಗೆ ಆರ್ಥಿಕತೆ ಅಡ್ಡಿಯಾಗಬಾರದು. ಅವರಲ್ಲಿನ ಪ್ರತಿಭೆ ಇಂತಹ ಕಾರ್ಯಕ್ರಮಗಳ ಮುಖೇನ ಪ್ರಕಾಶಮಾನವಾಗಬೇಕು. ಪಡೆದ ಪ್ರಯೋಜನದಿಂದ ಸಂಸ್ಥೆಗೆ ಏನೂ ಮರುಕಳಿಸದಿರಿ.ಆದರೆ, ಕಲಿಯುವ ಭವಿಷ್ಯತ್ತಿನ ಮಕ್ಕಳಿಗೆ ನಿಮ್ಮ ಗಳಿಕೆಯ ಸಹಾಯ ಹಸ್ತವನ್ನಿತ್ತು ಋಣ ಪೂರೈಸಿ ಎಂದರು.

ಜಯ ಸಿ.ಸುವರ್ಣ ಮಾತನಾಡಿ,  ಅಂದು 10 ಸಾವಿರ ಕೊಡುತ್ತಿದ್ದ ಅಸೋಸಿಯೇಶನ್‌ ಇಂದು ಕೋಟ್ಯಾಂತರ ಮೊತ್ತ ನೀಡಿ ಪ್ರೋತ್ಸಾಹಿಸುತ್ತಿದೆ.  ಬಿಲ್ಲವರಲ್ಲಿ ಸಾಕ್ಷರತಾ ಸಂಖ್ಯೆ  ಕಡಿಮೆಯಾಗಿರುವುದು ಖೇದಕರ. ಮನುಷ್ಯನಿಗೆ ಜ್ಞಾನದ ಅವಶ್ಯವಿದ್ದು ಇದಕ್ಕಾಗಿ ವಿದ್ಯಾರ್ಜನೆಯಿಂದ ಸ್ವತಂತ್ರÂರಾಗುವ ಅವಶ್ಯಕತೆ ಯಿದ್ದು, ಬಿಲ್ಲವರ ಅಸೋಸಿಯೇಶನ್‌ ಅದನ್ನು ಪರಿಣಾಮಕಾರಿಯಾಗಿ ರೂಢಿಸಿದೆ ಎಂದು ತಿಳಿಸಿದರು.

ನಿತ್ಯಾನಂದ ಡಿ.ಕೋಟ್ಯಾನ ಅಧ್ಯಕ್ಷೀಯ ಭಾಷಣಗೈದು ಆರೋಗ್ಯವಿದ್ದರೆ ಶಿಕ್ಷಣ. ಸುಶಿಕ್ಷಿತರಾದರೆ ಸ್ವಾಸ್ಥ್ಯತೆ. ಇದಕ್ಕೆ ಪೂರಕವಾಗಿ ಬಿಲ್ಲವರ ಅಸೋಸಿಯೇಶನ್‌ ಶ್ರಮಿಸುತ್ತಿದೆ. ಶಿಕ್ಷಣದ ಜೊತೆ ಸಮುದಾಯದ ಒಲವು ಕೂಡಾ ಸಹಜವಾಗಿ ಮಾಡಬೇಕು. ಆ ಮೂಲಕ ಸಮುದಾಯವನ್ನು ಮುನ್ನಡೆಸಲು ನಾಯಕತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾ ಉಪ ಸಮಿತಿ ಸದಸ್ಯರಾದ ರವೀಂದ್ರ ಎ.ಅಮೀನ್‌, ಪ್ರೇಮಾ ಆರ್‌.ಕೋಟ್ಯಾನ್‌, ರವಿರಾಜ್‌ ಕಲ್ಯಾಣRರ್‌, ಸದಾನಂದ ಅಮೀನ್‌, ಧನಂಜಯ ಎಸ್‌.ಕೋಟ್ಯಾನ್‌, ಎಂ.ಆನಂದ್‌ ಪೂಜಾರಿ, ಮೋಹನ್‌ ಡಿ.ಪೂಜಾರಿ, ಗಣೇಶ್‌ ಎಚ್‌. ಬಂಗೇರ, ದಿನೇಶ್‌ ಅಮೀನ್‌,  ಗೋಪಾಲ್‌ ಪಾಲನ್‌ ಇನ್ನಿತರರು ಉಪಸ್ಥಿತರಿದ್ದು,ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಹಿಸಿಸಿದರು. ಡಾ| ನಿತೇಶ್‌ ಕರ್ನಿರೆ ಪುರಸ್ಕೃತರ  ಪರವಾಗಿ ವಂದಿಸಿದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ಗೊಂಚಲು ಕೃತಿ ಪ್ರಕಟಿಸಿದ ಪ್ರಭಾ ಎನ್‌.ಪಿ ಸುವರ್ಣ ಅವರಿಗೆ ಜಯ ಸಿ.ಸುವರ್ಣ ಅವರು ಪುಷ್ಪ ಗೌರವನ್ನಿತ್ತು ಗೌರವಿಸಿದರು.

ವಿಭೂತಿ ಆರ್‌.ಕಲ್ಯಾಣ್‌ಪುರ್‌ ಪ್ರಾರ್ಥನೆ ಹಾಡಿದರು. ವಿದ್ಯಾಉಪ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ವಿ.ಬಂಗೇರ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್‌ ಅತಿಥಿಗಳನ್ನು ಪರಿಚಯಿಸಿ, ಕಾರ್ಯ ಕ್ರಮ ನಿರೂಪಿಸಿದರು.  

ಜೊತೆ ಕೋಶಾಧಿಕಾರಿ ಧನಂಜಯ ಎಸ್‌.ಕೋಟ್ಯಾನ್‌ ಅವರು ದತ್ತು ಸ್ವೀಕೃತ, ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ವಿದ್ಯಾ ಉಪ ಸಮಿತಿ ಕಾರ್ಯದರ್ಶಿ ವಿಶ್ವನಾಥ ತೋನ್ಸೆ ವಂದಿಸಿದರು.    ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.