ಕನ್ನಡ ವಿಭಾಗ ಮುಂಬಯಿ ವಿವಿ: ವಿಶೇಷ ಉಪನ್ಯಾಸ ಕಾರ್ಯಕ್ರಮ


Team Udayavani, Oct 3, 2017, 12:12 PM IST

30-Mum01.jpg

ಮುಂಬಯಿ: ಕನ್ನಡ ಪ್ರಜ್ಞೆ ಮತ್ತು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಬಹುತ್ವದ ಕಲ್ಪನೆಯನ್ನು ನಾನು ಇಂದಿನ ಕಾರ್ಯಕ್ರಮದಲ್ಲಿ ಕಾಣುವ ಭಾಗ್ಯ ಒದಗಿತು. ಕನ್ನಡದ ಬಗೆಗಿನ ಕಳಕಳಿ ನಮ್ಮ ಆತ್ಮದಲ್ಲಿ ಕೊರೆಯುತ್ತಿರಬೇಕು. ಯಾಕೆಂದರೆ ವಲಸೆ ಬಂದ ನಮ್ಮವರು ಕನ್ನಡ ಉಳಿಸಿ ಬೆಳೆಸುವ ತುರ್ತು ಏನೆಂಬುವುದರ ಅರಿವಿದೆ. ಸರ್ಟಿಫಿಕೇಟ್‌ನಿಂದ ಪಿಎಚ್‌.ಡಿವರೆಗೆ ಕನ್ನಡ ನಿರಂತರವಾಗಿ ಕನ್ನಡ ವಿಭಾಗದಲ್ಲಿ ಹರಿದು ಬರುತ್ತಿದೆ ಎನ್ನುವಾಗ ಅಭಿಮಾನವಾಗುತ್ತದೆ. ಸಮಗ್ರ ನೆಲೆಯಲ್ಲಿ ವಿದ್ಯಮಾನಗಳ ಮೂಲಕ ಕನ್ನಡದ ಸಾಧನೆ, ಸಾಧಕರನ್ನು ದಾಖಲೀಕರಿಸುವ ಕಾರ್ಯ ಕನ್ನಡ ವಿಭಾಗದಲ್ಲಿ ನಡೆಯುತ್ತಿದೆ. ಭಾಷೆಯ ಮೂಲಕ, ಸಂಸ್ಕೃತಿಯ ಅರಿವಿನ ಮೂಲಕ ಕನ್ನಡವನ್ನು ಕಟ್ಟಿ ಬೆಳೆಸಬೇಕು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ, ರಂಗತಜ್ಞ ಡಾ| ಭರತ್‌ ಕುಮಾರ್‌ ಪೊಲಿಪು ಅವರು ಅಭಿಪ್ರಾಯ ಪಟ್ಟರು.

ಅವರು ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ಸರ್ಟಿಫಿಕೇಟ್‌ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇದೊಂದು ಅವಿಸ್ಮರಣೀಯವಾದ ಅನುಭವದ ಕಾರ್ಯಕ್ರಮ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕನ್ನಡೇತರರು, ಕನ್ನಡ ಬಾರದವರು ಕನ್ನಡ ಕಲಿಯುತ್ತಿರುವುದು ಅಭಿಮಾನದ ವಿಷಯ. ಇದನ್ನು ಕಂಡಾಗ ಮುಂಬಯಿ ಕನ್ನಡವನ್ನು ಉಳಿಸುತ್ತಿದೆ ಬೆಳೆಸುತ್ತಿದೆ. ಕನ್ನಡಕ್ಕೆ ಅಳಿವಿಲ್ಲ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಹೊಸತಲೆಮಾರಿಗೆ ಕನ್ನಡದ ದೀಕ್ಷೆಯನ್ನು ಕೊಡುತ್ತಿರುವುದು ಹರ್ಷದಾಯಕವಾದುದು ಎಂದರು.

ಅಕ್ಷಯ ಪತ್ರಿಕೆಯ ಸಂಪಾದಕರಾದ ಡಾ| ಈಶ್ವರ ಅಲೆವೂರು ಅವರು ಮಾತನಾಡಿ, ಕನ್ನಡ ಬಾರದವರು, ಕನ್ನಡೇತರರು ದೊಡ್ಡ ಪ್ರಮಾಣದಲ್ಲಿ ಕನ್ನಡ ಕಲಿಕೆಯಲ್ಲಿ ನಿರತರಾಗಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಅಂತರ್ಭಾಷೀಯ, ಅಂತರ್ಜಾತೀಯ ವಿವಾಹಗಳು ಹೆಚ್ಚುತ್ತಿರುವುದರಿಂದ ವ್ಯವಹಾರದ ದೃಷ್ಟಿಯಿಂದಲೂ ಭಾಷೆಗಳ ಕಲಿಕೆ ಅನಿವಾರ್ಯ. ಕನ್ನಡ ವಿಭಾಗ ಉನ್ನತ ಅಧ್ಯಯನದ ಜೊತೆಗೆ ಕನ್ನಡ ಕಲಿಕಾ ತರಗತಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ಭಾಷೆ ಒಂದು ಸಂಪತ್ತು. ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಸುದೀರ್ಘ‌ ಇತಿಹಾಸವಿದೆ. ಇಲ್ಲಿ ಕನ್ನಡವನ್ನು ಕಲಿತವರು ಕರ್ನಾಟಕದ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.  ಸರಕಾರ ಉದ್ಯೋಗ ಮೀಸಲಾತಿಯನ್ನು ಕೂಡಾ ಪೋಷಿಸುತ್ತಿದೆ. ಅನುವಾದ ಕಾರ್ಯದಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು ಆಗಿರುವುದರಿಂದ ಸಂವಹನ ಸಂಪರ್ಕ ವ್ಯವಹಾರದ ದೃಷ್ಟಿಯಿಂದಲೂ ಭಾಷಾ ಕಲಿಕೆ ಪ್ರಯೋಜನಕಾರಿ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಸರ್ಟಿಫಿಕೇಟ್‌ ಕೋರ್ಸನ್ನು ನಡೆಸಿಕೊಂಡು ಬರುತ್ತಿರುವ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಕಲಿನಾ ಕ್ಯಾಂಪಸ್‌, ಶ್ಯಾಮಲಾ ಪ್ರಕಾಶ್‌ ಪನ್ವೇಲ್‌ ಕರ್ನಾಟಕ ಸಂಘ, ಶ್ರೀಪಾದ ಪತಕಿ ನವಿಮುಂಬಯಿ ಕನ್ನಡ ಸಂಘ, ಗೀತಾ ಆರ್‌.ಎಸ್‌, ಉಮಾರಾವ್‌ ಹಾಗೂ ಅನಿತಾ ಅಣುಶಕ್ತಿ ಕನ್ನಡ ಸಂಘ ಅವರ ಸಹಕಾರ ಮಹತ್ವದ್ದಾಗಿದೆ. ಇದೀಗ ಥಾಣೆಯಲ್ಲಿ ಕುಮುದಾ ಆಳ್ವ ಅವರು ಕನ್ನಡ ಕಲಿಕೆಯಲ್ಲಿ ನಿರತರಾಗಿರುವುದು ಸಂತೋಷದ ಸಂಗತಿ ಎಂದು ಕನ್ನಡ ಕಲಿತ ವಿದ್ಯಾರ್ಥಿಗಳಿಗೂ, ಮಕ್ಕಳು ಕನ್ನಡ ಕಲಿಯಲು ಪ್ರೋತ್ಸಾಹಿಸಿದ  ಪಾಲಕರಿಗೂ ಧನ್ಯವಾದ ತಿಳಿಸಿದರು.

ಮನೋರಂಜನ ಕಾರ್ಯಕ್ರಮದ ಅಂಗವಾಗಿ ಶ್ರೀಪಾದ ಪತಕಿ, ಕುಮಾರಿ ಮುನ್ಷಿ ಸುನಿಧಿ ವೇಣುಗೋಪಾಲ್‌ ಅವರು ಹಾಡು ಹಾಡಿದರು. ಆತ್ರೇಯ ಪ್ರದ್ಯುಮ್ನ ಸಂಜೀವ್‌ ಅವರಿಂದ ಕೊಳಲು ವಾದನ ನೆರವೇರಿತು. ಶಿಕ್ಷಕರಾದ ಶ್ಯಾಮಲಾ ಪ್ರಕಾಶ್‌, ಶ್ರೀಪಾದ ಪತಕಿ, ಅನಿತಾ, ಗೀತಾ ಆರ್‌.ಎಸ್‌, ಕುಮುದಾ ಆಳ್ವ ಉಪಸ್ಥಿತರಿದ್ದರು. ಸುರೇಖಾ ದೇವಾಡಿಗ, ನಳಿನಾ ಪ್ರಸಾದ್‌, ದಿನಕರ್‌ ಚಂದನ್‌, ಸುಧೀರ್‌ ದೇವಾಡಿಗ, ಸುರೇಖಾ ಶೆಟ್ಟಿ,  ಅನಿತಾ ಪೂಜಾರಿ ತಾಕೋಡೆ, ಉದಯ ಶೆಟ್ಟಿ, ಮುಕುಂದ ಶೆಟ್ಟಿ, ಲಕ್ಷಿ¾à ಪೂಜಾರಿ ಹಾಗೂ ಪಾಲಕರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.