ಕರ್ನಾಟಕ ಸಂಘ ಕಲಾವೇದಿಕೆ ಸಂಗೀತ ಕಾರ್ಯಕ್ರಮ
Team Udayavani, Nov 21, 2017, 2:15 PM IST
ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆ ಕಲಾಭಾರತಿ ಆಶ್ರಯದಲ್ಲಿ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಆಯೋಜಿಸಲಾಗಿತ್ತು.
ನ. 5ರಂದು ಪೂರ್ವಾಹ್ನ 10ರಿಂದ ಶುಭಮ್ ಮ್ಯೂಸಿಕ್ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಶಾಸ್ತ್ರೀಯ ಸಂಗೀತ ಮೈಫಲ್ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಪದ್ಮವಿಭೂಷಣ ಡಾ| ಗಂಗೂಬಾಯಿ ಹಾನಗಲ್ ಅವರ ಶಿಷ್ಯ ಅಶೋಕ ನಾಡಗೀರ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ನೆರವೇರಿತು. ಪಕ್ಕವಾದಕರಾಗಿ ಪುಷ್ಕರ ಜೋಶಿ ಅವರು ತಬಲಾದಲ್ಲಿ, ಸಂವಾದಿನಿಯಲ್ಲಿ ಸುಪ್ರಿಯಾ ಜೋಶಿ ಅವರು ಸಹಕರಿಸಿದರು.
ಅದೇ ರೀತಿ ನ. 12ರಂದುಪೂರ್ವಾಹ್ನ 10ರಿಂದ ಖಯಾಲ್ ಟ್ರಸ್ಟ್ ಅವರ ಪ್ರಾಯೋಜಕತ್ವದಲ್ಲಿ ಉಸ್ತಾದ್ ನಿಜಾಮುದ್ದೀನ್ ಖಾನ್ಸ್ಮರಣಾರ್ಥ ಶಾಸ್ತ್ರೀಯಸಂಗೀತಸ್ಮೃತಿಕಾರ್ಯಕ್ರಮವನುಆಯೋಜಿಸಲಾಗಿತ್ತು.ಪ್ರಸಿದ್ಧ ಕಲಾವಿದೆಅಪರ್ಣಾಪಣಶೀಕರ ಅವರಿಂದಶಾಸ್ತ್ರೀಯ ಗಾಯನ, ವಿಂದೋಳ್ ಮುಜುಮ್ದಾರ್ ಅವರಿಂದ ಏಕ ವ್ಯಕ್ತಿ ತಬಲಾ ವಾದನವು ನೆರೆದ ಸಂಗೀತ ರಸಿಕರನ್ನು ರಂಜಿಸಿತು.ಪಕ್ಕವಾದಕರಾಗಿ ಅಜಯ್ ಜೋಗಳೇಕರ್ ಮತ್ತು ಜ್ಞಾನೇಶ್ವರ್ ಸೋನಾವಣೆ ಹಾರ್ಮೋನಿಯಂನಲ್ಲಿ ಹಾಗೂ ತಬಲಾದಲ್ಲಿ ಭೂಷಣ್ ಪರಚುರೆ ಅವರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘದ ವತಿಯಿಂದ ಕಲಾವಿದರುಗಳನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಿಭಾಗಗಳ ಪದಾಧಿಕಾರಿಗಳು, ಸದಸ್ಯರು, ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ