ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ:ಶ್ರೀ ಶನೀಶ್ವರ ಮಹಾಪೂಜೆ
Team Udayavani, Feb 25, 2018, 4:09 PM IST
ಡೊಂಬಿವಲಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಡೊಂಬಿವಲಿ ಶಾಖೆಯ ವತಿಯಿಂದ ಶ್ರೀ ಶನೀಶ್ವರ ಮಹಾಪೂಜೆಯು ಫೆ. 10 ರಂದು ಶಾಖೆಯ ಕಚೇರಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ 1 ರಿಂದ ರತ್ನಾಕರ ಬಂಗೇರ ಇವರ ಕಲಶ ಶೃಂಗಾರಗೈಯುವುದರ ಮೂಲಕ ಕಾರ್ಯಕ್ರಮವು ಪ್ರಾರಂಭಗೊಂಡಿತು. ಶಾಖೆಯ ಕೋಶಾಧಿಕಾರಿ ಹರಿಶ್ಚಂದ್ರ ಮೆಂಡನ್ ದಂಪತಿ ಕಲಶ ಪ್ರತಿಷ್ಠಾಪನೆಗೈದರು. ಶಾಖೆಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಶೇಖರ್ ಮೆಂಡನ್ ದೇವರ ಪ್ರಾರ್ಥನೆಗೈದು ಶನಿಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.
ಮಧ್ಯಾಹ್ನ 1.30 ರಿಂದ ರಾತ್ರಿ 7.30 ರವರಗೆ ಶ್ರೀ ಶನಿಗ್ರಂಥ ಪಾರಾಯಣ ನಡೆಯಿತು. ಶನಿಗ್ರಂಥ ಪಾರಾಯಣದಲ್ಲಿ ಕೇಶವ ಎಸ್. ಬಂಗೇರ, ಪ್ರೇಮಾ ಅಮೀನ್, ಗೀತಾ ಶೇಖರ್ ಮೆಂಡನ್, ನಾರಾಯಣ ಸುವರ್ಣ, ರಾಜೇಶ್ ಕೋಟ್ಯಾನ್, ಸತೀಶ್ ಪೂಜಾರಿ, ಸುರೇಶ್ ಶೆಟ್ಟಿ ಶೃಂಗೇರಿ, ಅಣ್ಣಪ್ಪ ಮೊಗವೀರ, ಜಗದೀಶ್ ಶೆಟ್ಟಿ, ಸಿ. ಲಕ್ಷ¾ಣ್, ದಿನೇಶ್ ಕೋಟ್ಯಾನ್, ಹರಿಶ್ಚಂದ್ರ ಕಾಂಚನ್, ಲೋಕೇಶ್ ಸಾಲ್ಯಾನ್, ಸಂಜೀವ ಬಂಗೇರ ಮೊದಲಾದವರು ಸಹಕರಿಸಿದರು.
ಅರ್ಥ ವಿವರಣೆಯಲ್ಲಿ ಶೇಖರ್ ಮೆಂಡನ್, ಕಿಶೋರ್ ಸಾಲ್ಯಾನ್, ಯಶೋಧಾ ಜಯರಾಮ ಕುಕ್ಯಾನ್, ರತ್ನಾಕರ ಬಂಗೇರ, ಸುರೇಶ್ ಕರ್ಕೇರ, ಗಂಗಾಧರ ಕರ್ಕೇರ, ಸೋಮನಾಥ್ ಪೂಜಾರಿ, ಜಗನ್ನಾಥ ಪೂಜಾರಿ ಅವರು ಪಾಲ್ಗೊಂಡರು. ರಾತ್ರಿ 7.30 ರಿಂದ ಭಜನ ಕಾರ್ಯಕ್ರಮ, ಮಹಾಮಂಗಳಾರತಿ ನೆರವೇರಿತು.
ಶೇಖರ್ ಮೆಂಡನ್ ಇವರು ಪೂಜೆಯ ಪರವಾಗಿ ಪ್ರಾರ್ಥನೆಗೈದರು. ಶನೀಶ್ವರ ಮಹಾಪೂಜೆ ಮತ್ತು ಅನ್ನದಾನಕ್ಕೆ ಭಕ್ತಾದಿಗಳು ಸಹಕರಿಸಿದರು.
ನೂರಾರು ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಶಾಖೆಯ ಉಪ ಕಾರ್ಯಾಧ್ಯಕ್ಷ ಸುರೇಶ್ ಕರ್ಕೇರ, ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಸಿ. ಲಕ್ಷ¾ಣ್ ಇವರ ನೇತೃತ್ವದಲ್ಲಿ ಶನೀಶ್ವರ ಪೂಜೆಯು ಯಶಸ್ವಿಯಾಗಿ ನಡೆಯಿತು.
ಶಾಖೆಯ ಮಹಿಳಾ ವಿಭಾಗದ ಕಾರ್ಯಕರ್ತರು ಹಾಗೂ ಸದಸ್ಯರು, ಪ್ರಧಾನ ಶಾಖೆಯ ಕಾರ್ಯಕರ್ತರು, ಶಾಖೆಯ ಆಡಳಿತ ಸಮಿತಿ, ಮಹಿಳಾ ವಿಭಾಗ, ಸದಸ್ಯರು, ಮೊಗವೀರ ಗಾರ್ಡ್ಗಳು, ಹಿತೈಷಿಗಳು, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಬಾಂಧವರು ಪಾಲ್ಗೊಂಡು ಮಹಾಪೂಜೆಯ ಯಶಸ್ಸಿಗೆ ಸಹಕರಿಸಿದರು. ಶಾಖೆಯ ಕಾರ್ಯಾಧ್ಯಕ್ಷ ಯಧುವೀರ ಪುತ್ರನ್ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಕೇಶವ ಎಸ್. ಬಂಗೇರ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್