ಮುಂಬಯಿ ವಿವಿ ಕನ್ನಡ ವಿಭಾಗ: ಕವಿ ಸಮಯ
Team Udayavani, May 5, 2018, 3:35 PM IST
ಮುಂಬಯಿ: ವಿಶ್ವ ಪುಸ್ತಕ ದಿನದ ಶುಭಾವಸರದಲ್ಲಿ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ವಿದ್ಯಾನಗರಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಕವಿ ಸಮಯ ಕಾರ್ಯಕ್ರಮವು ಜರಗಿತು.
ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್. ಉಪಾಧ್ಯ ಅವರು ಮಾತನಾಡುತ್ತ, ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯವು ಬಹು ಶ್ರೀಮಂತಿಕೆಯಿಂದ ಕೂಡಿದೆ. ಕಥೆ, ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಸಂಶೋಧನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಿಂದ ಸಾಹಿತ್ಯಕ್ಕೆ ಕನ್ನಡದ ಹಿರಿ-ಕಿರಿಯ ಬರಹಗಾರರು ಶಕ್ತಿ ತುಂಬಿದ್ದಾರೆ. ಕಾವ್ಯ ಕಾಮನ ಬಿಲ್ಲು ಇದ್ದ ಹಾಗೆ. ಅದೊಂದು ಮಿಂಚು ಇದ್ದಂತೆ. ಓದುಗನ ಅಂತರಂಗವನ್ನು ಕೆದಕುವ ಕಾವ್ಯವೇ ನಿಜವಾದ ಕಾವ್ಯವಾಗಬಲ್ಲದು. ಇತ್ತೀಚೆಗೆ ನಾವೆಲ್ಲ ತುಂಬ ಮಾತನಾಡುತ್ತೇವೆ. ಬರೆಯುವುದು ಮಾತ್ರ ಕಡಿಮೆ. ಬರವಣಿಗೆ ಎಚ್ಚರಿಕೆಯಿಂದ ಆಗುವಂತಹದು. ಸತತ ಓದು, ಪರಿಶ್ರಮ ಇದ್ದರೆ ಲೇಖಕನು ಸುಲಭವಾಗಿ ಸಾಹಿತ್ಯ ರಚನೆ ಮಾಡಲು ಸಾಧ್ಯ. ಮುಂಬಯಿ ಯುವ ಬರಹಗಾರರಿಗೆ ಚಿತ್ತಾಲ, ಬಲ್ಲಾಳ, ಜಯಂತ ಕಾಯ್ಕಿಣಿ ಮೊದಲಾದ ಹಿರಿಯ ಲೇಖಕರು ಮಾದರಿಯಾಗಿದ್ದಾರೆ. ಬೇರೆ ಸಾಹಿತಿಗಳ ಕೃತಿಗಳನ್ನು ಓದದೆ ಕೃತಿ ರಚನೆ ಸಾಧ್ಯವಾಗದು ಎಂದು ತಿಳಿಸಿದರು.
ದಾಕ್ಷಾಯಣಿ ಯಡವಳ್ಳಿ ಅವರು ಜಾನಪದ ಹಾಡುಗಳನ್ನು ಹಾಡಿದರು. ಶಾರದಾ ಅಂಬೆಸಂಗ ಅವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಮೃತಾ ಶೆಟ್ಟಿ, ಲಕ್ಷಿ¾à ಹೆರೂರ, ಜಯಕರ ಪಾಲನ್, ಶೈಲಜಾ ಹೆಗಡೆ, ಉದಯ ಶೆಟ್ಟಿ, ರಮಾ ಉಡುಪ, ಜಯಾ ಸಾಲಿಯಾನ್, ಮಧುಸೂದನ್ ರಾವ್, ಸುರೇಖಾ ದೇವಾಡಿಗ, ಶಿವರಾಜ ಎಂ.ಜಿ., ದಿನಕರ ಚಂದನ್, ಕುಮುದಾ ಆಳ್ವ ಉಪಸ್ಥಿತರಿದ್ದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದುರ್ಗಪ್ಪ ಕೋಟಿಯವರ್ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?