ಭಾರತ್ ಬ್ಯಾಂಕ್: ಸೇವಾ ನಿವೃತ್ತರಾದ ಸಿಬಂದಿಯ ವಿದಾಯಕೂಟ
Team Udayavani, Sep 6, 2018, 12:32 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಂಚಾಲಕತ್ವದ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ವಿವಿಧ ಶಾಖೆಗಳ ಮೂವರು ಸಿಬಂದಿಗಳು ಸೇವಾ ನಿವೃತ್ತರಾದರು.
ಭಾರತ್ ಬ್ಯಾಂಕ್ ಡೊಂಬಿವಲಿ ಶಾಖೆಯ ಸಹಾಯಕ ಪ್ರಬಂಧಕ ರಮೇಶ್ ಎ. ಪೂಜಾರಿ, ಕೇಂದ್ರ ಕಚೇರಿಯ ಸಹಾಯಕ ಪ್ರಬಂಧಕ ಡಾ| ಈಶ್ವರ್ ಅಲೆವೂರು, ವಿರಾರ್ ಪಶ್ಚಿಮ ಶಾಖೆಯ ಸಿಬಂದಿ ಪ್ರವೀಣ್ ಎಸ್. ಕರ್ಕೇರ ಅವರು ತಮ್ಮ ಸೇವೆಯಿಂದ ನಿವೃತ್ತರಾಗಿದ್ದು, ನಿವೃತ್ತ ಸಿಬಂದಿಗಳು ಕ್ರಮವಾಗಿ 33, 32, 30 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಈ ಮೂವರ ವಿದಾಯಕೂಟ ಕಾರ್ಯಕ್ರಮವು ಆ. 31 ರಂದು ಗೋರೆಗಾಂವ್ನ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಸಿ. ಆರ್. ಮೂಲ್ಕಿ ಅವರು ನಿವೃತ್ತ ಸಿಬಂದಿಗಳಿಗೆ ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಶುಭಹಾರೈಸಿದರು. ನಿವೃತ್ತ ಸಿಬಂದಿಗಳ ಕಾರ್ಯ ವಿಶೇಷತೆಯನ್ನು ಉಪ ಮಹಾಪ್ರಬಂಧಕ ಸತೀಶ್ ಬಂಗೇರ ಅವರು ವಿವರಿಸಿ ಶ್ಲಾಘಿಸಿದರು. ನಿವೃತ್ತ ಸಿಬಂದಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಾಪ್ರಬಂಧಕರಾದ ವಿದ್ಯಾನಂದ ಎಸ್. ಕರ್ಕೇರ, ದಿನೇಶ್ ಬಿ. ಸಾಲ್ಯಾನ್, ಸುರೇಶ್ ಎಸ್. ಸಾಲ್ಯಾನ್, ನಿತ್ಯಾನಂದ ಕಿರೋಡಿಯನ್ ಅಲ್ಲದೆ ಉನ್ನತಾಧಿಕಾರಿಗಳಾದ ಪ್ರಭಾಕರ ಸುವರ್ಣ, ಮಹೇಶ್ ಕೋಟ್ಯಾನ್, ಸತೀಶ್ ಬಂಗೇರ, ಜನಾದìನ ಪೂಜಾರಿ, ಮಂಜುಳಾ ಸುವರ್ಣ, ವಿಶ್ವನಾಥ ಪೂಜಾರಿ, ಆಡಿಟ್ ಸಲಹೆಗಾರ ಶೋಭಾ ದಯಾನಂದ್, ಸಹಾಯಕ ಪ್ರಬಂಧಕರು, ಸಿಬಂದಿಗಳು, ಭಾರತ್ ಬ್ಯಾಂಕ್ ವೆಲ್ಫೆàರ್ ಅಸೋಸಿಯೇಶನ್ ಮತ್ತು ಯೂನಿಯನ್ನ ಪ್ರತಿನಿಧಿಗಳು ಉಪಸ್ಥಿತರಿದ್ದು ನಿವೃತ್ತರಿಗೆ ಶುಭಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ