ಭಾರತ್ ಬ್ಯಾಂಕ್: ಸೇವಾ ನಿವೃತ್ತರಾದ ಸಿಬಂದಿಯ ವಿದಾಯಕೂಟ
Team Udayavani, Sep 6, 2018, 12:32 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಂಚಾಲಕತ್ವದ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ವಿವಿಧ ಶಾಖೆಗಳ ಮೂವರು ಸಿಬಂದಿಗಳು ಸೇವಾ ನಿವೃತ್ತರಾದರು.
ಭಾರತ್ ಬ್ಯಾಂಕ್ ಡೊಂಬಿವಲಿ ಶಾಖೆಯ ಸಹಾಯಕ ಪ್ರಬಂಧಕ ರಮೇಶ್ ಎ. ಪೂಜಾರಿ, ಕೇಂದ್ರ ಕಚೇರಿಯ ಸಹಾಯಕ ಪ್ರಬಂಧಕ ಡಾ| ಈಶ್ವರ್ ಅಲೆವೂರು, ವಿರಾರ್ ಪಶ್ಚಿಮ ಶಾಖೆಯ ಸಿಬಂದಿ ಪ್ರವೀಣ್ ಎಸ್. ಕರ್ಕೇರ ಅವರು ತಮ್ಮ ಸೇವೆಯಿಂದ ನಿವೃತ್ತರಾಗಿದ್ದು, ನಿವೃತ್ತ ಸಿಬಂದಿಗಳು ಕ್ರಮವಾಗಿ 33, 32, 30 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಈ ಮೂವರ ವಿದಾಯಕೂಟ ಕಾರ್ಯಕ್ರಮವು ಆ. 31 ರಂದು ಗೋರೆಗಾಂವ್ನ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಸಿ. ಆರ್. ಮೂಲ್ಕಿ ಅವರು ನಿವೃತ್ತ ಸಿಬಂದಿಗಳಿಗೆ ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಶುಭಹಾರೈಸಿದರು. ನಿವೃತ್ತ ಸಿಬಂದಿಗಳ ಕಾರ್ಯ ವಿಶೇಷತೆಯನ್ನು ಉಪ ಮಹಾಪ್ರಬಂಧಕ ಸತೀಶ್ ಬಂಗೇರ ಅವರು ವಿವರಿಸಿ ಶ್ಲಾಘಿಸಿದರು. ನಿವೃತ್ತ ಸಿಬಂದಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಾಪ್ರಬಂಧಕರಾದ ವಿದ್ಯಾನಂದ ಎಸ್. ಕರ್ಕೇರ, ದಿನೇಶ್ ಬಿ. ಸಾಲ್ಯಾನ್, ಸುರೇಶ್ ಎಸ್. ಸಾಲ್ಯಾನ್, ನಿತ್ಯಾನಂದ ಕಿರೋಡಿಯನ್ ಅಲ್ಲದೆ ಉನ್ನತಾಧಿಕಾರಿಗಳಾದ ಪ್ರಭಾಕರ ಸುವರ್ಣ, ಮಹೇಶ್ ಕೋಟ್ಯಾನ್, ಸತೀಶ್ ಬಂಗೇರ, ಜನಾದìನ ಪೂಜಾರಿ, ಮಂಜುಳಾ ಸುವರ್ಣ, ವಿಶ್ವನಾಥ ಪೂಜಾರಿ, ಆಡಿಟ್ ಸಲಹೆಗಾರ ಶೋಭಾ ದಯಾನಂದ್, ಸಹಾಯಕ ಪ್ರಬಂಧಕರು, ಸಿಬಂದಿಗಳು, ಭಾರತ್ ಬ್ಯಾಂಕ್ ವೆಲ್ಫೆàರ್ ಅಸೋಸಿಯೇಶನ್ ಮತ್ತು ಯೂನಿಯನ್ನ ಪ್ರತಿನಿಧಿಗಳು ಉಪಸ್ಥಿತರಿದ್ದು ನಿವೃತ್ತರಿಗೆ ಶುಭಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ