ಸಮನ್ವಯ ಬೆಂಗಳೂರು ತಂಡದ  ನಾಟಕಕ್ಕೆ ಪ್ರಶಸ್ತಿ


Team Udayavani, Sep 16, 2018, 4:59 PM IST

1409mum02.jpg

ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿರುವ 21ನೇ ಅಖೀಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ  ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

ಪ್ರಸ್ತುತ ವರ್ಷ  ಒಟ್ಟು 12 ತಂಡಗಳು ಭಾಗವಹಿಸಿದ್ದವು ಅದರಲ್ಲಿ ಮುಂಬಯಿಯ ಎರಡು ಹಾಗೂ ಕರ್ನಾಟಕದಿಂದ ಹತ್ತು ತಂಡಗಳಿದ್ದವು. 

ತೀರ್ಪುಗಾರರಾಗಿ ಸಾಸ್ವೆಗಳ್ಳಿ ಸತೀಶ್‌,  ವಸಂತ ಬನ್ನಾಡಿ, ವಿದ್ದು ಉಚ್ಚಿಲ್‌ ಸಹಕರಿಸಿದರು. ನಾಟಕ ಸ್ಪರ್ಧೆ ಮುಗಿದ ನಂತರ  ಮನೋರಂಜನ ಅಂಗವಾಗಿ ಗಾಯಕ ಶ್ರೀ ರಾಮಚಂದ್ರ ಹಡಪದ ಅವರಿಂದ ಭಾವ – ರಂಗ ಗಾಯನದ ಕಾರ್ಯಕ್ರಮ ಜರಗಿತು.

ಅತ್ಯುತ್ತಮ ನಾಟಕ ಪ್ರಥಮ ದಿ. ಕೆ. ಕೆ. ಸುವರ್ಣ ಸ್ಮಾರಕ 15 ಸಾವಿರ ರೂ. ನಗದು ಬಹುಮಾನವನ್ನು ಸಮನ್ವಯ, ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕ ಪಡೆಯಿತು. ಅತ್ಯುತ್ತಮ ನಾಟಕ ದ್ವಿತೀಯ ದಿ. ಕೆ. ಜೆ. ರಾವ್‌ ಸ್ಮಾರಕ 10 ಸಾವಿರ ರೂ. ನಗದು ಬಹುಮಾನವನ್ನು ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ತಂಡದ ನಾಟಕ ದಶಾನನ ಸ್ವಪ್ನ ಸಿದ್ಧಿ ನಾಟಕ ಗಳಿಸಿತು.  ಅತ್ಯುತ್ತಮ ನಾಟಕ ತೃತೀಯ ಸದಾನಂದ ಸುವರ್ಣ ದತ್ತಿನಿಧಿ 5 ಸಾವಿರ ರೂ. ಗಳ  ಪುರಸ್ಕಾರವನ್ನು ಭೂಮಿಕಾ ಹಾರಾಡಿ ತಂಡದ ವೃತ್ತದ ವೃತ್ತಾಂತ ನಾಟಕ ಗಳಿಸಿತು.

ಅತ್ಯುತ್ತಮ ರಂಗ ವಿನ್ಯಾಸ ಸಮನ್ವಯ ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕ ಪ್ರಥಮ,  ಸುಮನಸಾ ಕೊಡವೂರು ತಂಡದ ರಥಯಾತ್ರೆ ನಾಟಕ ದ್ವಿತೀಯ, ರಂಗ ಮಿಲನ  ಮುಂಬಯಿ ಇದರ ಸಂಸಾರ ನಾಟಕ, ಅತ್ಯುತ್ತಮ ಸಂಗೀತ ಸುಮನಸಾ ಕೊಡವೂರು ತಂಡದ  ರಥಯಾತ್ರೆ ನಾಟಕ ಪ್ರಥಮ, ನಮ ತುಳುವೆರ್‌ ಕಲಾ ಸಂಘಟನೆ, ಮುದ್ರಾಡಿ ಇದರ ದಶಾನನ ಸ್ವಪ್ನಸಿದ್ಧಿ ದ್ವಿತೀಯ, ಸಮನ್ವಯ ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕ ತೃತೀಯ ಬಹುಮಾನ ಪಡೆಯಿತು.

ಅತ್ಯುತ್ತಮ ಬೆಳಕು ಸಂಯೋಜನೆಯಲ್ಲಿ ಸಮನ್ವಯ  ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕಕ್ಕೆ ಪ್ರಥಮ,  ಸುಮನಸಾ ಕೊಡವೂರು ಇವರ ರಥಯಾತ್ರೆ ದ್ವಿತೀಯ, ನಮ ತುಳುವೆರ್‌ ಕಲಾಸಂಘಟನೆ ಮುದ್ರಾಡಿ  ದಶಾನನ ಸ್ವಪ್ನಸಿದ್ಧಿ ತೃತೀಯ, ಅತ್ಯುತ್ತಮ ವೇಷ ಭೂಷಣ ಸಮನ್ವಯ  ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ಪ್ರಥಮ, ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಇವರ ದಶಾನನ ಸ್ವಪ್ನಸಿದ್ದಿ ತೃತೀಯ ಬಹುಮಾನ ಪಡೆಯಿತು.

ಅತ್ಯುತ್ತಮ ಪ್ರಸಾಧನ ಜಿಪಿಐಈಆರ್‌  ಮೈಸೂರು ಇವರ ಅಶ್ವತ್ಥಾಮ ಪ್ರಥಮ, ಬೆಂಗಳೂರು ಏಶಿಯನ್‌ ಥೇಟರ್‌ ಇವರ ಬೂಟುಗಾಲಿನ ಸದ್ದು ದ್ವಿತೀಯ ಹಾಗೂ ಭೂಮಿಕಾ ಹಾರಾಡಿ ಇವರ ವೃತ್ತದ ವೃತ್ತಾಂತ ಮತ್ತು ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಇವರ ದಶಾನನ ಸ್ವಪ್ನಸಿದ್ಧಿ ನಾಟಕ ತೃತೀಯ ಬಹುಮಾನ ಗಳಿಸಿತು.

ಸುರೇಂದ್ರ ಕುಮಾರ್‌ ಮಾರ್ನಾಡ್‌ ಪ್ರಾಯೋಜಿತ ವಿ. ಗಜಾನನ ಯಾಜಿ ಸ್ಮಾರಕ ನಗದು ಬಹುಮಾನವನ್ನು ಅತ್ಯುತ್ತಮ ಅತ್ಯುತ್ತಮ ಬಾಲ ನಟ ಸುಮನಸಾ ಕೊಡವೂರು ತಂಡದ ರಥಯಾತ್ರೆ ನಾಟಕದ  ಪುರೋಹಿತನ ಮಗ – ಮಾಸ್ಟರ್‌  ಮುರುಗೇಶ್‌ ಪ್ರಥಮ, ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಇವರ ದಶಾನನ ಸ್ವಪ್ನ ಸಿದ್ಧಿ ನಾಟಕತದ ಬಾಲ ರಾಮೂ – ತೇಜಸ್ವಿ ದ್ವಿತೀಯ, ವನಸುಮ ಕಟಪಾಡಿ ಇವರ  ಪೂರ್ವಿ ಕಲ್ಯಾಣಿ ನಾಟಕದ ಬಾಲಕ – ದೃಶ್ಯ ಕೊಡಗು ತೃತೀಯ ಬಹುಮಾನ ಪಡೆದರು.

ಮುಂಬಯಿಗೆ ಸೀಮಿತವಾಗಿರುವ ಭಾರತಿ ಕೊಡ್ಲಿàಕರ್‌ ಸ್ಮಾರಕ ಅತ್ಯುತ್ತಮ ನಟಿ ಪ್ರಶಸ್ತಿಯನ್ನು   ರಂಗ ಮಿಲನ ತಂಡದ ಶುಭಾಂಗಿ ಶೆಟ್ಟಿ ಅವರು ಪಡೆದರು. ಅತ್ಯುತ್ತಮ ಪೋಷಕ ನಟಿಯಾಗಿ ಸಮನ್ವಯ  ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕದ  ಲಕ್ಷ್ಮಿ ಪಾತ್ರಧಾರಿ – ಮಹಾಸತಿ ಗೌಡ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬೆಂಗಳೂರು ಏಶಿಯನ್‌ ಥೇಟರ್‌ ತಂಡದ ಬೂಟುಗಾಲಿನ ಸದ್ದು  ನಾಟಕದ ನಲ್ಲ ಚೋಮ ಪಾತ್ರಧಾರಿ ಪ್ರದೀಪ್‌ ಅವರು ಪಡೆದರು.

ಅತ್ಯುತ್ತಮ ನಟಿ ಪ್ರಥಮ ರೂ. 1500 ನಗದು ಕಮಲಾಕ್ಷ ಸರಾಫ್‌ ಪ್ರಾಯೋಜಿತ ಬಹುಮಾನವನ್ನು  ಸಮನ್ವಯ ಬೆಂಗಳೂರು ತಂಡದ  ಬೂಟು ಬಂದೂಕುಗಳ ಮಧ್ಯೆ ನಾಟಕದ  ಶಿವವ್ವ ಪಾತ್ರಧಾರಿ ಮೀನಾ ಶಿವಕುಮರ್‌, ಅತ್ಯುತ್ತಮ ನಟಿ ದ್ವಿತೀಯ ಬಹುಮಾನವನ್ನು ಬೆಂಗಳೂರು ಏಶಿಯನ್‌ ಥೇಟರ್‌ ತಂಡದ ಬೂಟುಗಾಲಿನ ಸದ್ದು ನಾಟಕದ ಮಂಗಮ್ಮ ಪಾತ್ರಧಾರಿ ಸಿತಾರಾ, ಅತ್ಯುತ್ತಮ ನಟಿ ತೃತೀಯ ಬಹುಮಾನವನ್ನು ಜಿ.ಪಿ.ಐ.ಈ. ಆರ್‌. ಮೈಸೂರು ತಂಡದ ಅಶ್ವತ್ಥಾಮ ನಾಟಕದ ಪಾತ್ರಧಾರಿ ದ್ರೌಪದಿ ಪಾತ್ರಧಾರಿ ಪರಿಣಿತಾ ಅವರು ಗಳಿಸಿದರು.
ಅತ್ಯುತ್ತಮ ನಟ ಪ್ರಥಮ  ರೂ. 1500 ನಗದು ಕಮಲಾಕ್ಷ ಸರಾಫ್‌ ಪ್ರಾಯೋಜಿತ ಬಹುಮಾನವನ್ನು ನಮ ತುಳುವೆರ್‌ ಕಲಾಸಂಘಟನೆ ಮುದ್ರಾಡಿ ತಂಡದ ದಶಾನನ ಸ್ವಪ್ನಸಿದ್ಧಿ ನಾಟಕದ ರಾವಣ ಪಾತ್ರಧಾರಿ ಸುಕುಮಾರ್‌ ಮೋಹನ್‌, ದ್ವಿತೀಯ ಬಹುಮಾನವನ್ನು  ಸಮನ್ವಯ , ಬೆಂಗಳೂರು ತಂಡದ ಬೂಟುಬಂದೂಕುಗಳ ಮಧ್ಯೆ ನಾಟಕದ ಶಿವನಾಗಪ್ಪ ಪಾತ್ರಧಾರಿ ಸೋಮಶೇಖರ್‌, ಅತ್ಯುತ್ತಮ ನಟ ತೃತೀಯ ಬಹುಮಾನವನ್ನು ಭೂಮಿಕಾ ಹಾರಾಡಿ ತಂಡದ ವೃತ್ತದ ವೃತ್ತಾಂತ ನಾಟಕದ ನ್ಯಾಯಾ ಧೀಶ ಪಾತ್ರಧಾರಿ ರವಿ ಪೇತ್ರಿ  ಪಡೆದರು.

ಅತ್ಯುತ್ತಮ ನಿರ್ದೇಶನ ಪ್ರಥಮ ಪ್ರಶಸ್ತಿಯನ್ನು  ದಿ| ಆರ್‌ಡಿ. ಕಾಮತ್‌ ಸ್ಮಾರಕ ನಗದು ಪ್ರಶಸ್ತಿ/ಫಲಕವನ್ನು  ಸಮನ್ವಯ ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕದ ನಿರ್ದೇಶಕ  ಮಾಲತೇಶ್‌ ಬಡಿಗೇರ್‌, ಅತ್ಯುತ್ತಮ ನಿರ್ದೇಶನ ದ್ವಿತೀಯ ಪ್ರಶಸ್ತಿಯನ್ನು ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ತಂಡದ ದಶಾನನ ಸ್ವಪ್ನ ಸಿದ್ಧಿ ನಾಟಕದ ನಿರ್ದೇಶಕ ಮಂಜುನಾಥ್‌ ಬಡಿಗೇರ್‌, ತೃತೀಯ ಪ್ರಶಸ್ತಿಯನ್ನು ಭೂಮಿಕಾ ಹಾರಾಡಿ ತಂಡದ ವೃತ್ತದ ವೃತ್ತಾಂತ ನಾಟಕದ ನಿರ್ದೇಶಕ  ಬಿ. ಎಸ್‌. ರಾಮ್‌ ಶೆಟ್ಟಿ, ಹಾರಾಡಿ ಅವರು ಪಡೆದರು.
 

ಟಾಪ್ ನ್ಯೂಸ್

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.