ದೇವಾಡಿಗ ಸಂಘ ಮುಂಬಯಿ: ವಾರ್ಷಿಕ ವಿಹಾರ ಕೂಟ
Team Udayavani, Nov 1, 2018, 4:47 PM IST
ಮುಂಬಯಿ: ದೇವಾಡಿಗ ಸಂಘ ಮುಂಬಯಿ ವತಿಯಿಂದ ವಿವಿಧ ಪ್ರಾದೇಶಿಕ ಸಮನ್ವಯ ಸಮಿತಿಗಳ ಕೂಡುವಿಕೆಯಲ್ಲಿ ವಾರ್ಷಿಕ ವಿಹಾರಕೂಟವು ಗೋವಾದಲ್ಲಿ ಅ. 26 ರಿಂದ ಅ. 28ರ ವರೆಗೆ ನಡೆಯಿತು.
ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಸಂಯೋಜನೆಯಲ್ಲಿ ಸ್ನೇಹ ಮಿಲನದೊಂದಿಗೆ ವಿಹಾರಕೂಟಲು ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮವು ಸಿಟಿ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮನಾಥ್ ದೇವಾಡಿಗ ಹಾಗೂ ಸಮಿತಿಯ ಯುವ ಘಟಕದ ಕಾರ್ಯದರ್ಶಿ ನಿತೀಶ್ ದೇವಾಡಿಗ ಅವರ ನೇತೃತ್ವದಲ್ಲಿ ನಡೆಯಿತು.
ವಿಹಾರಕೂಟದಲ್ಲಿ ಮೊದಲ ದಿನ ಗೋವಾದಲ್ಲಿನ ಇತಿಹಾಸ ಪ್ರಸಿದ್ಧ ಮಾರದೊಳ್ ಮಾಹಲಸಾ ನಾರಾಯಣಿ, ಶಾಂತಾದುರ್ಗಾ, ಮಂಗೇಶಿ ದೇವಸ್ಥಾನಗಳಲ್ಲಿ ದೇವಿ ದರ್ಶನ ಪಡೆದು ಸಂಜೆ ದೋಣಿ ವಿಹಾರದಲ್ಲಿ ಭಾಗವಹಿಸಲಾಯಿತು. ಮರುದಿನ ಗೋವಾ ದಲ್ಲಿನ ಆಕರ್ಷಣೀಯ ಆಘುವಾ ಕೋಟೆ, ಕಾಲಂಗೋಟು., ಅಂಜುನ್, ಮಿರಾಮಾರು, ವಾಗತುರು ಬೀಚ್ಗೆ ತೆರಳಲಾಯಿತು.
ಸಂಘದ ಅಧ್ಯಕ್ಷರಾದ ರವಿ ಎಸ್. ದೇವಾಡಿಗ, ಮಾಜಿ ಅಧ್ಯಕ್ಷರಾದ ಗೋಪಾಲ್ ಎಂ. ಮೊಲಿ, ಹಿರಿಯಡ್ಕ ಮೋಹನಾªಸ್ , ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ, ಜತೆ ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಆರ್. ಮೊಲಿ, ಕಾರ್ಯದರ್ಶಿ ಪೂರ್ಣಿಮಾ ಡಿ. ದೇವಾಡಿಗ, ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್, ನ್ಪೋರ್ಟ್ಸ್ ಕ್ಲಬ್ನ ಸುರೇಶ್ ಆರ್. ದೇವಾಡಿಗ, ಸಿಟಿ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಎಲ್. ದೇವಾಡಿಗ, ಕಾರ್ಯದರ್ಶಿ ಸುಜಯಾ ವಿ. ದೇವಾಡಿಗ, ನವಿ ಮುಂಬಯಿಯ ವಲಯಾಧ್ಯಕ್ಷ ಆನಂದ್ ಕೆ. ಶೇರಿಗಾರ್, ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಎ. ಶೇರಿಗಾರ್, ಮೀರಾರೋಡ್ ವಲಯಾಧ್ಯಕ್ಷ ನಾಗರಾಜ್ ದೇವಾಡಿಗ, ಕಾರ್ಯದರ್ಶಿ ಪ್ರಶಾಂತ್ ದೇವಾಡಿಗ, ಯುವ ವಿಭಾಗದ ಮಾಜಿ ಕಾರ್ಯಾದ್ಯಕ್ಷ ದೀಕ್ಷಿತ್ ದೇವಾಡಿಗ ಅವರು ಉಪಸ್ಥಿತರಿದ್ದರು.
ಅಲ್ಲದೆ ದೇವಾಡಿಗ ಸಂಘ ಮುಂಬಯಿ ಇದರ ಡೊಂಬಿವಲಿ, ಥಾಣೆ, ಬೊರಿವಲಿ, ಚೆಂಬೂರು, ಮೀರಾರೋಡ್, ನವಿ ಮುಂಬಯಿ, ಜೋಗೇಶ್ವರಿ, ಆಸಲ್ಫಾ, ಸಿಟಿ ಮತ್ತು ಭಾಂಡೂಪ್ ಪ್ರಾದೇಶಿಕ ಸಮಿತಿಗಳ ಸದ್ಯಸರು, ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್