ದೇವಾಡಿಗ ಸಂಘ ಮುಂಬಯಿ: ವಾರ್ಷಿಕ ವಿಹಾರ ಕೂಟ
Team Udayavani, Nov 1, 2018, 4:47 PM IST
ಮುಂಬಯಿ: ದೇವಾಡಿಗ ಸಂಘ ಮುಂಬಯಿ ವತಿಯಿಂದ ವಿವಿಧ ಪ್ರಾದೇಶಿಕ ಸಮನ್ವಯ ಸಮಿತಿಗಳ ಕೂಡುವಿಕೆಯಲ್ಲಿ ವಾರ್ಷಿಕ ವಿಹಾರಕೂಟವು ಗೋವಾದಲ್ಲಿ ಅ. 26 ರಿಂದ ಅ. 28ರ ವರೆಗೆ ನಡೆಯಿತು.
ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಸಂಯೋಜನೆಯಲ್ಲಿ ಸ್ನೇಹ ಮಿಲನದೊಂದಿಗೆ ವಿಹಾರಕೂಟಲು ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮವು ಸಿಟಿ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮನಾಥ್ ದೇವಾಡಿಗ ಹಾಗೂ ಸಮಿತಿಯ ಯುವ ಘಟಕದ ಕಾರ್ಯದರ್ಶಿ ನಿತೀಶ್ ದೇವಾಡಿಗ ಅವರ ನೇತೃತ್ವದಲ್ಲಿ ನಡೆಯಿತು.
ವಿಹಾರಕೂಟದಲ್ಲಿ ಮೊದಲ ದಿನ ಗೋವಾದಲ್ಲಿನ ಇತಿಹಾಸ ಪ್ರಸಿದ್ಧ ಮಾರದೊಳ್ ಮಾಹಲಸಾ ನಾರಾಯಣಿ, ಶಾಂತಾದುರ್ಗಾ, ಮಂಗೇಶಿ ದೇವಸ್ಥಾನಗಳಲ್ಲಿ ದೇವಿ ದರ್ಶನ ಪಡೆದು ಸಂಜೆ ದೋಣಿ ವಿಹಾರದಲ್ಲಿ ಭಾಗವಹಿಸಲಾಯಿತು. ಮರುದಿನ ಗೋವಾ ದಲ್ಲಿನ ಆಕರ್ಷಣೀಯ ಆಘುವಾ ಕೋಟೆ, ಕಾಲಂಗೋಟು., ಅಂಜುನ್, ಮಿರಾಮಾರು, ವಾಗತುರು ಬೀಚ್ಗೆ ತೆರಳಲಾಯಿತು.
ಸಂಘದ ಅಧ್ಯಕ್ಷರಾದ ರವಿ ಎಸ್. ದೇವಾಡಿಗ, ಮಾಜಿ ಅಧ್ಯಕ್ಷರಾದ ಗೋಪಾಲ್ ಎಂ. ಮೊಲಿ, ಹಿರಿಯಡ್ಕ ಮೋಹನಾªಸ್ , ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ, ಜತೆ ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಆರ್. ಮೊಲಿ, ಕಾರ್ಯದರ್ಶಿ ಪೂರ್ಣಿಮಾ ಡಿ. ದೇವಾಡಿಗ, ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್, ನ್ಪೋರ್ಟ್ಸ್ ಕ್ಲಬ್ನ ಸುರೇಶ್ ಆರ್. ದೇವಾಡಿಗ, ಸಿಟಿ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಎಲ್. ದೇವಾಡಿಗ, ಕಾರ್ಯದರ್ಶಿ ಸುಜಯಾ ವಿ. ದೇವಾಡಿಗ, ನವಿ ಮುಂಬಯಿಯ ವಲಯಾಧ್ಯಕ್ಷ ಆನಂದ್ ಕೆ. ಶೇರಿಗಾರ್, ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಎ. ಶೇರಿಗಾರ್, ಮೀರಾರೋಡ್ ವಲಯಾಧ್ಯಕ್ಷ ನಾಗರಾಜ್ ದೇವಾಡಿಗ, ಕಾರ್ಯದರ್ಶಿ ಪ್ರಶಾಂತ್ ದೇವಾಡಿಗ, ಯುವ ವಿಭಾಗದ ಮಾಜಿ ಕಾರ್ಯಾದ್ಯಕ್ಷ ದೀಕ್ಷಿತ್ ದೇವಾಡಿಗ ಅವರು ಉಪಸ್ಥಿತರಿದ್ದರು.
ಅಲ್ಲದೆ ದೇವಾಡಿಗ ಸಂಘ ಮುಂಬಯಿ ಇದರ ಡೊಂಬಿವಲಿ, ಥಾಣೆ, ಬೊರಿವಲಿ, ಚೆಂಬೂರು, ಮೀರಾರೋಡ್, ನವಿ ಮುಂಬಯಿ, ಜೋಗೇಶ್ವರಿ, ಆಸಲ್ಫಾ, ಸಿಟಿ ಮತ್ತು ಭಾಂಡೂಪ್ ಪ್ರಾದೇಶಿಕ ಸಮಿತಿಗಳ ಸದ್ಯಸರು, ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ