ಅಸಲ್ಫಾ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟನೆ


Team Udayavani, Dec 12, 2018, 5:14 PM IST

1112mum07.jpg

ಮುಂಬಯಿ: ನಾವು ಹುಟ್ಟಿ ಬೆಳೆದು ಸಾಧಕರಾಗಿ ಮೆರೆಯಲು ಪ್ರೇರಣಾಶಕ್ತಿಯಾದ ಕನ್ನಡ ಭಾಷೆಯ ಉಳಿವು ನಮ್ಮ ಪರ ಕರ್ತವ್ಯವಾಗಿದೆ. ಇದು ನಮ್ಮರಾಜ್ಯ ಭಾಷೆಯಾಗಿದ್ದು, ಎಂಟನೇ ಪರಿಚ್ಛೇದದಲ್ಲಿ ಮೇರು ಭಾಷೆಯಾಗಿ ವಿಶ್ವಾದ್ಯಂತ ಪಸರಿಸಿ ಕಂಗೊಳಿಸುತ್ತಿದೆ. ಹೊರನಾಡಿನಲ್ಲಿ ಇಂತಹ ಕನ್ನಡದ ಭಾಷೆ ಬಗ್ಗೆ ಕೀಳರಿಮೆ ಸಲ್ಲದು. ಒಳನಾಡ ಕರ್ನಾಟಕ ಬಿಟ್ಟರೆ, ಹೊರನಾಡ ಮಹಾರಾಷ್ಟ್ರದಾದ್ಯಂತ ಲಕ್ಷಾಂತರ ಕನ್ನಡಿಗರಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಸಂಘ ಅಸಲ್ಪಾ ಇಂತಹ ಸಂಸ್ಥೆಗಳ ಕೊಡುಗೆಯೂ ಅನುಪಮವಾಗಿದೆ. ಆದ್ದರಿಂದ ವ್ಯವ ಹಾರಿಕವಾಗಿ ಅಲ್ಲದಿದ್ದರೂ ಬದುಕಿನ ಭಾಗವಾಗಿ ಮಕ್ಕಳಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಪಾಲಕರು, ಶಿಕ್ಷಕರು ಪ್ರಯತ್ನಿಸಬೇಕು ಎಂದು ನಾಡಿನ ಕನ್ನಡಾಭಿಮಾನಿ, ಕರ್ನಾಟಕ ಸಂಘ ಅಸಲ್ಪಾ ಇದರ ಅಧ್ಯಕ್ಷ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಕರೆ ನೀಡಿದರು.

ಘಾಟ್ಕೊàಪರ್‌ ಪಶ್ಚಿಮದ ಅಸ ಲ್ಪಾದ ಎನ್‌ಎಸ್‌ಎಸ್‌ ರಸ್ತೆಯ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿಯನ್ನು  ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘಸಂಸ್ಥೆ,  ಶಾಲೆಗಳನ್ನು ಆರಂಭಿಸುವುದು ಅತೀ ಸುಲಭ. ಆದರೆ ಸಮಯಕ್ಕನುಸಾರವಾಗಿ ಪರಿವರ್ತಿಸುತ್ತಾ ಮುನ್ನಡೆಸುವುದು ಬಹಳ ಕಷ್ಟ. ಅಸಲ್ಪಾ  ಕ್ಷೇತ್ರದಲ್ಲಿ 1965 ರಲ್ಲಿ ಆರಂಭವಾದ ಕನ್ನಡ ಶಾಲೆಯಲ್ಲಿ  ಸುಮಾರು 800 ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.  ಶಾಲೆಯಲ್ಲಿ ಇಂದು ಕೇವಲ 75 ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದಾರೆ. ಕಟ್ಟಡದಲ್ಲಿ ನಾಲ್ಕು ತರಗತಿಗಳು ಸುಮಾರು 2000 ಚದರಡಿಯ ಶಾಲಾ ಕಟ್ಟಡವನ್ನು ವಿದ್ಯಾ ಕೇಂದ್ರವನ್ನಾಗಿಸಿಯೇ ಉಳಿಸಿಕೊಳ್ಳಬೇಕಾದರೆ  ಕನ್ನಡ ಮಾಧ್ಯಮ ದೊಂದಿಗೆ ಇಂಗ್ಲೀಷ್‌ ಮಾಧ್ಯಮ ಶಾಲೆ ಆರಂಭಿಸಿದರೆ ಕಟ್ಟಡವು ತುಳು ಕನ್ನಡಿಗರ ಅಧೀನ ದಲ್ಲಿಯೇ ಇರಲು ಸಾಧ್ಯವಿದೆ ಎಂದರು.

ಕ್ಷೇತ್ರದ ನಗರ ಸೇವಕ ಕಿರಣ್‌ ಲಾಂಡೆY ಅವರು ಅತಿಥಿಯಾಗಿ  ಮಾತನಾಡಿ,  ತಾನು ಬಾಲ್ಯದಲ್ಲಿ ತುಂಟಾಟ ಮಾಡುತ್ತಾ ಬೆಳೆದ ಈ ವಠಾರದ ಅಭಿವೃದ್ಧಿಗಾಗಿ ಸಹಕಾರ ನೀಡುವೆ ಎಂದು  ಭರವಸೆ ನೀಡಿದರು. ನಿಧಿ ಸಂಗ್ರಹಕ್ಕಾಗಿ ಬಿಡುಗಡೆ ಮಾಡಲಾದ ಲಕ್ಕೀಡಿಪ್‌ ಉದ್ದೇಶವನ್ನು ವಿವರಿಸಿ ಇನ್ನೂ ಮೂರು ವರ್ಗಗಳ ಸುಶೋಭಿಕರಣದ ಕಾರ್ಯವನ್ನು ಶೀಘ್ರದಲ್ಲಿ ಮಾಡಲು ಸಹಕರಿಸ ಬೇಕು. ಸಂಘದ ಕನ್ನಡ ಶಾಲೆಯ ಕಟ್ಟಡದಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆಯನ್ನು ಆರಂಭಿಸುವರೇ ಮುಂಬುನ ಆಸಕ್ತ ಮತ್ತು ನುರಿತ  ವಿದ್ಯಾಭಿಮಾನಿ ಆಡಳಿತಗಾರರು ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಬಹುದು ಎಂದು ಕಾರ್ಯದರ್ಶಿ ಎಂ. ಪದ್ಮನಾಭ ಸಫಲಿಗ ವಿನಂತಿಸಿದರು.

ಕನ್ನಡ ಶಾಲೆಯ ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಂಘದ ಉಪಾಧ್ಯಕ್ಷೆ ಯಶೋಧಾ ಬಟ್ಟಪಾಡಿ ಕಾರ್ಯ ಕರ್ತರ ಪರಿಶ್ರಮವನ್ನು ಶ್ಲಾಘಿಸಿದರು. ಅಧ್ಯಕ್ಷ ಸುರೇಶ್‌ ಭಂಡಾರಿ ಅವರ ನೇತೃತ್ವದಲ್ಲಿ ಈ ವಿದ್ಯಾಭವನದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಪ್ರಕ್ರಿಯೆ ಶೀಘ್ರಗತಿಯಲ್ಲಿ ಆಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸರಸ್ವತಿ ಮಾತೆಗೆ ಪೂಜೆ ನೆರವೇರಿಸಿ ದೀಪ ಪ್ರಜ್ವಲಿಸಿ  ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪುಟ್ಟ ಮಕ್ಕಳ ಹಸ್ತದಿಂದ ಅಧ್ಯಕ್ಷರು ಲಕ್ಕಿ ಕೂಪನ್‌ ಡ್ರಾಗೊಳಿಸಿ ವಿಜೇತರ ಹೆಸರುಗಳನ್ನು ಪ್ರಕಟಿಸಿ ಶುಭ ಹಾರೈಸಿದರು. ಹಾಗೂ ಧನ ಸಂಗ್ರಹದ ಕಾರ್ಯದಲ್ಲಿ  ಶ್ರಮಿಸಿದ ಕಾರ್ಯಕರ್ತರು, ನವೀ ಕರಣ ಕಾರ್ಯದಲ್ಲಿ ಸಹಕರಿಸಿದ  ಸುಧಾಕರ್‌ ಶೆಟ್ಟಿ, ಸತೀಶ್‌ ಶೆಟ್ಟಿ, ವಿಶ್ವನಾಥ ದೊಡ್ಮನೆ, ರಾಜವರ್ಮ ಜೈನ್‌, ಶ್ರೀಕಾಂತ್‌ ಸಫಲಿಗ ಅವರನ್ನು  ಪುಷ್ಪಗುಚ್ಚವನ್ನಿತ್ತು ಸಮ್ಮಾನಿಸಿದರು. ಪದ್ಮನಾಭ ಸಫಲಿಗ ಕಾರ್ಯ ಚಟುವಟಿಕೆಗಳನ್ನು ಸ್ಥೂಲವಾಗಿ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ   ಜಯರಾಂ ಜಿ. ರೈ   ಸ್ವಾಗತಿಸಿ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.