ಪುಣೆ ಸೌರಭ ದಾಸ ಸಾಹಿತ್ಯ ವಿದ್ಯಾಲಯದಿಂದ ದಾಸಸಾಹಿತ್ಯ ಪರೀಕ್ಷೆ
Team Udayavani, Jan 27, 2019, 3:25 PM IST
ಪುಣೆ: ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರ ಕೃಪಾಶೀರ್ವಾದದಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪುಣೆ ಪಿಂಪ್ರಿ-ಚಿಂಚಾÌಡ್ ಕೆಂದ್ರವು ಜ. 13ರಂದು ದಾಸ ಹಾಗೂ ದಾಸಶ್ರೀ ವರ್ಗದ ಪರಿಕ್ಷೆ ನಡೆಸಲಾಯಿತು.
ಶ್ರೀ ವರದೇಂದ್ರ ಮಠ ಪುಣೆ ಹಾಗೂ ರಮೇಶ ಕಾತರಕಿ ಅವರ ನಿವಾಸ ಚಿಂಚಾÌಡ್ ಈ ಎರಡು ಕೇಂದ್ರಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಜನ ಪರಿಕ್ಷೆ ಬರೆದರು. ಪಂಡಿತ್ ರುಚಿರಾಚಾರ ಬುರ್ಲಿ, ವರದೇಂದ್ರ ಮಠದ ವ್ಯವಸ್ಥಾಪಕರಾದ ಪಂಡಿತ್ ವೇಣುಗೋಪಾಲ್ ಆಚಾರ್ ಹಾಗೂ ಹಿರಿಯ ಜ್ಞಾನಿಗಳಾದ ಸಂಗೂರಾಮ ಅವರು ಪ್ರಶ್ನೆ ಪತ್ರಿಕೆಯನ್ನು ಉದ್ಘಾಟಿಸಿದರು.
ಪುಣೆ ಕೇಂದ್ರದ ವ್ಯವಸ್ಥಾಪಕರಾದ ಗೋಪಾಲ ಕಟಗೇರಿ ಅವರು ಮಾತನಾಡಿ, ದಾಸ ಸಾಹಿತ್ಯವು ಜೀವನಾನುಭವದ ಸಾಹಿತ್ಯವಾಗಿದೆ. ದಾಸ ಸಾಹಿತ್ಯದಿಂದ ಭಕ್ತಿ ಮಾರ್ಗದಿಂದ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ. ನಾವೆಲ್ಲರೂ ಗುರುಗಳ ದಾಸರಾದರೆ ಮಾತ್ರ ಭಗವಂತನು ಒಲಿಯುತ್ತಾನೆ ಎಂದರು. ವಿದ್ಯಾಲಯದ ಕಾರ್ಯಕರ್ತರಾದ ವೀಣಾ ಕಾವೇರಿ, ವಿಜಯ ಖಾಸನೀಸ್, ರಾಮಚಂದ್ರ ಸವದತ್ತಿ. ಯಜುರ್ವೇದಿ, ಪೂಜಾರ ಹಾಗೂ ರಮಾ ಕಾತರಕಿ ಎಲ್ಲರೂ ಯಶಸ್ವಿಯಾಗಿ ಪರಿಕ್ಷೆ ನಡೆಯಲು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು