ಪುಣೆ ಹವ್ಯಕ ಸಂಘದಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
Team Udayavani, Feb 22, 2019, 3:20 PM IST
ಪುಣೆ: ಹವ್ಯಕ ಸಂಘ ಪುಣೆ ವತಿಯಿಂದ ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಫೆ. 17ರಂದು ಪುಣೆಯ ಕರ್ವೆನಗರದ ಎಂ. ಎಸ್. ಭಟ್. ಅವರ ದುರ್ಗಾ ಸದನದಲ್ಲಿ ನಡೆದ ಸಭೆಯಲ್ಲಿ ಪುಲ್ವಾಮದಲ್ಲಿ ಪಾಕಿಸ್ಥಾನದ ಪಿತೂರಿಯಿಂದ ನಡೆದ ನರರಾಕ್ಷಸರ ಪೈಶಾಚಿಕ ಕೃತ್ಯವನ್ನು ಸಂಘ ಬಲವಾಗಿ ಖಂಡಿಸಿದ್ದಲ್ಲದೆ ಸೇರಿದ್ದ ಸದಸ್ಯರೆಲ್ಲರೂ ಪುಷ್ಪನಮನವನ್ನು ಸಲ್ಲಿಸಿ ಮೌನ ಪ್ರಾರ್ಥನೆಯ ಮೂಲಕ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ರಾಮಚಂದ್ರಾಪುರ ಮಠದ ಪುಣೆ ವಲಯಾಧ್ಯಕ್ಷರಾದ ಮದಂಗಲ್ಲು ಆನಂದ ಭಟ್ ಅವರು, ದೇಶದ ಗಡಿ ಕಾಯುವ ಯೋಧರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಅವರಿಂದಾಗಿಯೇ ನಾವು ದೇಶದಲ್ಲಿ ನಿರ್ಭಯವಾಗಿ ಜೀವಿಸಲು ಸಾಧ್ಯ. ಅಂತಹ ವೀರಯೋಧರು ನರಹಂತಕ ಹೇಡಿಗಳ ದುಷ್ಕೃತ್ಯಕ್ಕೆ ಬಲಿಯಾಗಿದ್ದು ದುರದೃಷ್ಟ ಕರವಾಗಿದ್ದು ಈ ಘಟನೆಯನ್ನು ನಾವೆಲ್ಲರೂ ಬಲವಾಗಿ ಖಂಡಿಸುವುದಲ್ಲದೆ ಮುಂದೆ ಇಂಥ ಘಟನೆಗಳು ನಡೆಯದಿರಲಿ ಎಂಬ ಪ್ರಾರ್ಥನೆ ಯೊಂದಿಗೆ ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ ಎಂದರು.
ರಾಮಚಂದ್ರಾಪುರ ಮಠದ ಪುಣೆ ವಲಯದ ಗುರಿಕ್ಕಾರ ಶರತ್ ಭಟ್ ಅತ್ರಿವನ ಮಾತನಾಡಿ,
ದೇಶ ಕಾಯುವ ಯೋಧರ ಬಗ್ಗೆ ನಮಗೆಲ್ಲರಿಗೂ ಅಪಾರವಾದ ಅಭಿಮಾನವಿದೆ. ನಿವೃತ್ತ ವೀರಯೋಧರಾದ ಇ. ವಿ. ಶಾಮರಾಜ್ ಇವರನ್ನು ನಾವು ಹತ್ತಿರದಿಂದ ಬಲ್ಲವ ರಾಗಿದ್ದು ಅವರ ಮನೋಬಲ, ಆತ್ಮ ಸ್ಥೈರ್ಯ, ದೇಶಪ್ರೇಮ, ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಫೆ. 14ರಂದು ಭಯೋ ತ್ಪಾದಕರ ಕುತಂತ್ರಕ್ಕೆ ನಮ್ಮ ಯೋಧರು ಬಲಿಯಾಗಿದ್ದು ದೇಶವಾಸಿಗಳಾದ ನಾವೆಲ್ಲರೂ ವೀರ ಹುತಾತ್ಮ ಯೋಧರ ದುಃಖದಲ್ಲಿ ಸಹಭಾಗಿಗಳಾಗಿದ್ದೇವೆ. ಇಂಥ ನೀಚಕೃತ್ಯವನ್ನು ನಾವೆಲ್ಲರೂ ಖಂಡಿಸುತ್ತೇವೆ.
ಅಗಲಿದ ವೀರಯೋಧರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು.
ಈ ಸಂದರ್ಭ ಸೇರಿದ್ದ ಸದಸ್ಯರೆಲ್ಲರೂ ರಾಮತಾರಕ ಮಂತ್ರ ಹಾಗೂ ಭಜನಾ ರಾಮಾಯಣವನ್ನು ಸಾಮೂಹಿಕವಾಗಿ ಪಠಿಸಿ ಸೇನೆಗೆ ಧೈರ್ಯ, ಸ್ಥೈರ್ಯಕ್ಕಾಗಿ ಪ್ರಾರ್ಥಿಸಲಾಯಿತು. ಸಭೆಯಲ್ಲಿ ಕಾರ್ಯಕ್ರಮ ಸಂಯೋಜಕ ಹಿರಿಯರಾದ ಮಹಾಬಲ ಭಟ್, ಕಾರ್ಯದರ್ಶಿ ಶ್ಯಾಮಸುಂದರ್ ಭಟ್, ಕೋಶಾಧಿಕಾರಿ ಗಣೇಶ್ ಪ್ರಸಾದ್, ಮದಂಗಲ್ಲು ಅಶೋಕ್ ಭಟ್, ವೆಂಕಟ್ರಮಣ ಭಟ್, ಕೌಶಲ್ ಭಟ್, ರಾಮಚಂದ್ರ ಭಟ್, ಶಾರದಾ ಭಟ್, ಮಹಿಳಾ ವಿಭಾಗದ ಸದಸ್ಯರಾದ ಮದಂಗಲ್ಲು ಹೇಮಾ ಎ. ಭಟ್, ಮಲ್ಲಿಕಾ ಭಟ್, ಜಯಲಕ್ಷ್ಮೀಭಟ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು