ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ 


Team Udayavani, Mar 19, 2019, 2:26 PM IST

1802mum02.jpg

ಪುಣೆ: ನ್ಯೂ ಕಬಡ್ಡಿ ಫೆಡರೇಶನ್‌ ಆಶ್ರಯದಲ್ಲಿ ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಕಬಡ್ಡಿ ಪಂದ್ಯಾಟಕ್ಕೆ ಮಾ. 15ರಿಂದ ಮಾ. 17ರ ವರೆಗೆ ಪುಣೆಯ ಬಾಲೆವಾಡಿಯ ಛತ್ರಪತಿ ಶಿವಾಜಿ ಮಹಾರಾಜ್‌ ಕ್ರೀಡಾ ಸಂಕುಲದಲ್ಲಿ ಆಟಗಾರರ ಗ್ರೇಡಿಂಗ್‌ ಮತ್ತು ಬಿಡ್ಡಿಂಗ್‌  ಪ್ರಕ್ರಿಯೆ  ನಡೆದಿದ್ದು, ಮಾ. 16ರಂದು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

ಈ ಸಂದರ್ಭ ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಇದರ ಮುಖ್ಯ ಪ್ರವರ್ತಕರಾದ ಹಾಗೂ ಎನ್‌ಕೆಎಫ್‌ ಸಂಸ್ಥೆಯ ಕಾರ್ಯದರ್ಶಿ ಎಂ. ವಿ. ಪ್ರಸಾದ್‌ ಬಾಬು ಮಾತನಾಡಿ, ದೇಶಾದ್ಯಂತ ಆಯ್ಕೆಗೊಂಡಿರುವ 170 ಆಟಗಾರರನ್ನು ಗ್ರೇಡಿಂಗ್‌ ಮತ್ತು ಬಿಡ್ಡಿಂಗ್‌ ಮೂಲಕ 8 ಫ್ರಾಂಚೈಸಿ ಮಾಲಕರಿಗೆ ವಿವಿಧ ತಂಡಗಳಲ್ಲಿ ಹಂಚುವ ಪ್ರಕ್ರಿಯೆ ನಡೆಯುತ್ತಿದ್ದು ಆಟಗಾರರನ್ನು ನಾಲ್ಕು ಶ್ರೇಣಿಗಳಲ್ಲಿ ಗುರುತಿಸಿಕೊಳ್ಳಲಾಗುವುದು. ಎ ಕೆಟಗರಿಯಲ್ಲಿ ಬರುವ ಆಟಗಾರರಿಗೆ ತಲಾ ರೂ. ಹತ್ತು ಲಕ್ಷ, ಬಿ ಕೆಟಗರಿಯಲ್ಲಿ ಬರುವ ಆಟಗಾರರಿಗೆ ರೂ. 8 ಲಕ್ಷ, ಸಿ ಕೆಟಗರಿ ಹಾಗೂ ಡಿ ಕೆಟಗರಿಯಲ್ಲಿ ಬರುವ ಆಟಗಾರರಿಗೆ ಕ್ರಮವಾಗಿ ತಲಾ ರೂ. 6 ಲಕ್ಷ ಮತ್ತು 2 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ನುಡಿದು ಶುಭ ಹಾರೈಸಿದರು .

ಪಂದ್ಯಾಟದಲ್ಲಿ ಒಟ್ಟು ಎಂಟು  ತಂಡಗಳು ಭಾಗವಹಿಸಲಿದ್ದು,  ದೇಶಾದ್ಯಂತ ಐದು ಆಯ್ಕೆ ಪ್ರಕ್ರಿಯೆಯ ಮೂಲಕ ಆಟಗಾರ ರನ್ನು ಆಯ್ಕೆಗೊಳಿಸಲಾಗಿದೆ. ಸೇಲಂ ತಮಿಳ್ನಾಡು, ಕೇರಳ, ಪಾಂಡಿಚೇರಿ, ವಿಜಯವಾಡ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್‌, ಉತ್ತರಾಖಂಡ್‌ ಹಾಗೂ ಮಹಾರಾಷ್ಟ್ರಗಳಲ್ಲಿ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಲಾಯಿತು.

ರೈಲ್ವೆಯ 22 ಆಟಗಾರರು, ಐಟಿಬಿಪಿ ಹಾಗೂ ಸಿಆರ್‌ಪಿಎಫ್‌ನಿಂದಲೂ ಆಟಗಾರ ರನ್ನು ಆಯ್ಕೆಗೊಳಿಸಲಾಗಿದೆ. ಐಐಪಿಕೆಎಲ್‌ ಇದರ ಪ್ರತಿಯೊಂದು ಪಂದ್ಯಾಟಗಳಲ್ಲಿ ಮೂರು ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿದ್ದು ಅವರಿಗೆ ತಲಾ ರೂ. ಹತ್ತು ಲಕ್ಷ ನೀಡಲಾಗುವುದು. ಇದೇ ಸಂದರ್ಭದಲ್ಲಿ ಮಹಿಳಾ ಪಂದ್ಯಾಟವನ್ನು ಇದರೊಂದಿಗೆ ನಡೆಸಲಾಗುವುದು. ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಪಂದ್ಯಾಟವನ್ನು ಒಳ
ಗೊಳ್ಳುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದ್ದು ನಮ್ಮ ಲೀಗ್‌ನ ಮೂಲಕ ಅರ್ಜುನ ಅವಾರ್ಡ್‌ ಪಡೆದ ಆಟಗಾರರು ಹಾಗೂ ಸುಮಾರು 36 ಅಂತಾರಾಷ್ಟ್ರೀಯ ಆಟಗಾರರ ತಂಡವನ್ನು ರಚಿಸಲಾಗಿದ್ದು  ಐಐಪಿಕೆಎಲ… ಯಶಸ್ವಿಯಾಗಿ ಆಯೋಜನೆಗೊಳ್ಳಲು ಇವರು ಶ್ರಮ ವಹಿಸಲಿ¨ªಾರೆ. ನಮ್ಮ ಲೀಗ್‌ನ ಮೂಲಕ ಈಗಾಗಲೇ 9 ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಆಟಗಾರರು ಪಾಲ್ಗೊಂಡಿ ¨ªಾರೆ. ಮೇ. 4ರಿಂದ ಜೂ. 8ರವರೆಗೆ ಪಂದ್ಯಾಟವನ್ನು ಆಯೋಜಿಸಲು ಬಹು ತೇಕವಾಗಿ ತೀರ್ಮಾನಿಸಲಾಗಿದ್ದು  ಅಂತಿಮ
ದಿನಾಂಕವನ್ನು ಇನ್ನಷ್ಟೇ ಅಂತಿಮ ಗೊಳಿಸಲಾಗುವುದು. ನಮ್ಮ ಪಂದ್ಯಾಟದಲ್ಲಿ ಗಳಿಸಿದ ಲಾಭಾಂಶದ ಶೇ. 20 ರಷ್ಟು ಹಣವನ್ನು ನಮ್ಮ ಆಟಗಾರರಿಗೆ ಹಂಚಲಾಗುವುದು. ಶೇ.  20 ನ್ನು ಫ್ರಾಂಚೈಸಿಗಳಿಗೆ, ಶೇ.  10ರಷ್ಟನ್ನು ನಿವೃತ್ತ ಆಟಗಾರರಿಗೆ, ಶೇ.  10ರಷ್ಟನ್ನು  ಕಬಡ್ಡಿ ಅಭಿವೃದ್ಧಿ ನಿಧಿಗಾಗಿ ಹಾಗೂ ಶೇ. 10 ರಷ್ಟನ್ನು  ಪುಲ್ವಾಮಾ ಘಟನೆಯಲ್ಲಿ ಹುತಾತ್ಮ ಯೋಧರ ಕುಟುಂಬಕ್ಕಾಗಿ ನೀಡಲಾಗುವುದು ಎನ್‌ಕೆಎಫ್‌ ಸಂಸ್ಥೆಯ ಕಾರ್ಯದರ್ಶಿ ಎಂ. ವಿ. ಪ್ರಸಾದ್‌ ಬಾಬು ತಿಳಿಸಿದರು.

ಮೊದಲಿಗೆ ತಂಡದ ಆಯ್ಕೆ ಪ್ರಕ್ರಿಯೆ ಸಮಿತಿಯ ಸದಸ್ಯರಾದ ಶಿವಛತ್ರಪತಿ ಪುರಸ್ಕೃತ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್‌ ಇದರ ಮಾಜಿ ಸಿಇಓ ಜಯ ಎ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಂತ ಕಬಡ್ಡಿ ಆಟಗಾರರಿಗೆ ಅವಕಾಶಗಳನ್ನು ಕಲ್ಪಿಸುವುದಕ್ಕಾಗಿ ಐಐಪಿಕೆಎಲ… ಪ್ರಯತ್ನಿಸುತ್ತಿದೆ. ಕಳೆದ ಒಂದು ವರ್ಷದಿಂದ ನಾವೆಲ್ಲರೂ ಇದರೊಂದಿಗೆ ಕೈಜೋಡಿಸಿದ್ದೇವೆ. ಪ್ರಸಾದ್‌ ಬಾಬುರವರು ಇದರ ಮುಖ್ಯ ಪ್ರವರ್ತಕರಾಗಿದ್ದು ಲೀಗ್‌ನ ಯಶಸ್ಸಿಗಾಗಿ ಅಪಾರವಾಗಿ ಶ್ರಮಿಸುತ್ತಿ¨ªಾರೆ. ಇಲ್ಲಿ ಫ್ರಾಂಚೈಸಿಯವರೊಂದಿಗೆ ನಾವೆಲ್ಲರೂ ಯಾವುದೇ ಭೇದ ಭಾವ ಮಾಡದೆ ಒಗ್ಗಟ್ಟಿನಿಂದ ಒಂದೇ ಕುಟುಂಬದಂತೆ ಕಬಡ್ಡಿ ಆಟವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ  ಶ್ರಮಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ  ಐಐಪಿಕೆಎಲ್‌ ಅಧ್ಯಕ್ಷರಾದ ಸರ್ವೇಶ್‌ ಕುಮಾರ್‌, ಕಾರ್ಯಾಧ್ಯಕ್ಷರಾದ ಎಂ. ಎಸ್‌. ವೆಂಕಟೇಶ್‌, ನಿರ್ದೇಶಕರಾದ ರವಿ ಕಿರಣ್‌, ಅರ್ಜುನ ಅವಾರ್ಡ್‌ ಪುರಸ್ಕೃತ ಆಟಗಾರರಾದ ರಾಜರತ್ನಂ, ಹೊನ್ನಪ್ಪ, ತೀರ್ಥರಾಜ್‌, ಅಂತಾರಾಷ್ಟ್ರೀಯ ಆಟಗಾರರಾದ ಸುಬ್ರಮಣಿ, ಜಯವಂತ್‌ ಬೋಡೆR, ತಾರಕ್‌ ರಾವಲ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. 

ಚಿತ್ರ -ವರದಿ: ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.