ಪ್ರತಿಭಾವಂತ ‘ಫೈಬರ್‌ ಕಲಾಕೃತಿ’ ರಚನೆಗಾರ ಮನೋಜ್‌


Team Udayavani, Feb 27, 2017, 12:11 PM IST

Manoj-27-02.jpg

ಬಂಟ್ವಾಳ: ಈ ಯುವಕ ಕಲಾವಿದರ ಕುಟುಂಬದ ಕುಡಿ ಅಲ್ಲ. ಕಲೆಯ ಓನಾಮವನ್ನು ತಿಳಿದವರ ಮನೆಯವರಲ್ಲ. ಆದರೆ ಪಾರಂಪರಿಕವಾಗಿ ಬಂದ ಕೃಷಿಯ ಒಡನಾಟ ಇತ್ತು. ಚಿಕ್ಕ ಬಾಲಕನಿಗೇ ಕೃಷಿ ಪರಿಕರಗಳ ತಯಾರಿಕೆಯಲ್ಲಿ ಅಮಿತ ಆಸಕ್ತಿ ಜತೆಗೂಡಿ ಬಂತು. ಅದರೊಂದಿಗೇ ತಾನೂ ಚಿತ್ರ ಕಲಾವಿದನಾಗಬೇಕೆಂಬ ಹೆಬ್ಬಯಕೆ ಸದಾ ಇತ್ತು. ಮಗನ ಈ ಆಸೆಗೆ ಪ್ರೋತ್ಸಾಹದ ನೀರೆರೆದು ಪೋಷಿಸಿದವರು ತಂದೆ ಶೀನ ಪೂಜಾರಿ ಮತ್ತು ತಾಯಿ ಮೋಹಿನಿ ಅವರು. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದಲ್ಲಿ ಜನಿಸಿದ ಈ ಯುವಕನೇ ಮನೋಜ್‌ ಕನಪಾಡಿ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಚಿತ್ರಕಲಾ ಶಿಕ್ಷಕರು ಆಸಕ್ತಿಯಿಂದ ಗೆರೆಗಳನ್ನು ಹೇಳಿಕೊಟ್ಟರು. ಹಲವು ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳೂ ಬಂದವು. ಕರಕುಶಲ ಸಾಮಗ್ರಿ, ಇನ್ನಿತರ ಕಲೆಯ ಮಾದರಿ ತಯಾರಿಸುವುದರಲ್ಲೂ ಆಸಕ್ತಿ ಬೆಳೆದು ಬಂತು. ಒಮ್ಮೆ ಕಣ್ಣಿನಿಂದ ಕಂಡದ್ದನ್ನು ಸ್ವತಃ ಮಾಡಬಲ್ಲ ಪರಿಣತಿ ತಾನಾಗಿ ಒಲಿದು ಬಂತು. ರಟ್ಟು, ಬಿದಿರು, ತಾಳೆಗರಿಗಳಿಂದ ವಿವಿಧ ಕಲಾ ವೈವಿಧ್ಯಗಳನ್ನು ತಯಾರಿಸಿದರು. (Special Photo Gallery: ಫೈಬರ್‌ನಲ್ಲಿ ಮೈದಳೆಯುವ ವಿವಿಧ ಕಲಾಕೃತಿಗಳು)


ಬದುಕು ಬದಲಿಸಿದ ಕಲೆ

ಪಿಯು ಶಿಕ್ಷಣದ ಬಳಿಕ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ವಿಧಿಯುಕ್ತವಾಗಿ ಚಿತ್ರಕಲೆಯನ್ನು ಅಭ್ಯಸಿಸಿದ ಮನೋಜ್‌ಗೆ ಈಗ 37ರ ಹರೆಯ. ಶಾಲೆಯಲ್ಲಿ ಕಲಿತ ವಿದ್ಯೆಯ ಜತೆಗೆ ಸ್ವಂತ ಪರಿಶ್ರಮದ ಫಲವಾಗಿ ಜಲವರ್ಣ ಶೈಲಿಯ ಚಿತ್ರಗಳ ರಚನೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೂ ತರಬೇತಿ ಪಡೆಯಲು ಚಿತ್ರಕಲಾ ಶಾಲೆಯ ಶಿಬಿರ ನೆರವಾಯಿತು. ಸ್ವಯಂ ಪ್ರತಿಭೆಯಿಂದ ಸ್ಪ್ರೇ ಪೈಂಟಿಂಗ್‌ನಲ್ಲೂ ನೈಪುಣ್ಯ ಗಳಿಸಿದರು. ಬಳಿಕ ಮಂಗಳೂರಿನ ಶಾರದಾ ವಿದ್ಯಾಲಯ, ಶುಭೋದಯ ವಿದ್ಯಾಲಯ ಮೂಡುಶೆಡ್ಡೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಈ ಕಲೆಗಳನ್ನು ಧಾರೆಯೆರೆದರು. ಬೇಸಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಅವರು ಮಾಹಿತಿ ಒದಗಿಸಿದರು. ಅನಂತರ ಕಲೆಯೇ ಮನೋಜ್‌ಗೆ ಬದುಕು ನೀಡಿತು. ಅಲಂಕಾರಿಕ ವಸ್ತುಗಳ ವಿನೂತನ ಶೈಲಿಯನ್ನೇ ಆರಂಭಿಸಿದರು. ಸಮಾರಂಭಗಳಿಗೆ ಆಕರ್ಷಕವಾದ ವೇದಿಕೆಗಳನ್ನು ನಿರ್ಮಿಸಿದರು. ಶೋಭಾಯಾತ್ರೆ ಇನ್ನಿತರ ಮೆರವಣಿಗೆಗಳಿಗೆ ಬೇಕಾದ ಸ್ತಬ್ಧಚಿತ್ರಗಳ ರಚನೆಯಲ್ಲೂ ಹೆಸರು ಬಂತು.


ಮನೋಜ್‌ರ ಕಲಾ ಪ್ರೌಢಿಮೆ ಅಗಾಧವಾಗಿ ತೆರೆದುಕೊಂಡದ್ದು ಫೈಬರ್‌ ಕಲಾಕೃತಿಗಳ ನಿರ್ಮಾಣದಲ್ಲಿ. ಆಳೆತ್ತರದ ಹುಲಿ ದನದಂತಹ ಪ್ರಾಣಿಗಳು, ಹೂವಿನಲ್ಲಿ ಕುಳಿತ ಜೇನ್ನೊಣ, ಎತ್ತಿನ ಗಾಡಿ, ನಾನಾ ಬಗೆಯ ಮಂದಿರಗಳು, ಪ್ರಧಾನಿ ನರೇಂದ್ರ ಮೋದಿ ಮೊದಲಾದವರ ಪ್ರತಿಮೆಗಳು, ಯಕ್ಷಗಾನ, ಹುಲಿವೇಷಗಳು ವರ್ಣಮಯವಾಗಿ ಎದ್ದು ನಿಂತು ನೈಜತೆಯನ್ನು ನಾಚಿಸಿದವು. ಮನೆ, ವಿಶ್ರಾಂತಿಧಾಮಗಳು, ಉದ್ಯಾನಗಳಿಗೆ ಬೇಕಾದ ಇಂತಹ ವಿನ್ಯಾಸಗಳ ಜತೆಗೆ ಜಲಪಾತಗಳು, ಕಾರಂಜಿಗಳು, ಸ್ಮಾರಕಗಳಿಗೆ ರಾಷ್ಟ್ರೀಯ ನಾಯಕರ ಪ್ರತಿಕೃತಿಗಳು, ಗೊಮ್ಮಟೇಶ್ವರನಂಥ ವಿಗ್ರಹಗಳು ಅವರ ಬೆರಳುಗಳಿಂದ ಸೃಷ್ಟಿಯಾಗಿವೆ.
ಮನ ಸೆಳೆಯುವ ಫೈಬರ್‌ ಮಂಟಪಗಳೂ ಎದ್ದು ನಿಂತಿವೆ. ಕಾಂಕ್ರೀಟ್‌ ಅಥವಾ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಕಲಾಕೃತಿಗಳಿಗಿಂತ ಫೈಬರ್‌ ಕಲಾಕೃತಿಗಳು ಬೇಕಾದಲ್ಲಿಗೆ ಒಯ್ಯಲು ಹಗುರವಾಗಿದ್ದು, ಅದಕ್ಕಿಂತಲೂ ಆಕರ್ಷಕವಾಗಿವೆೆಯೆಂದು ಕಂಡವರು ಮೆಚ್ಚಿಕೊಳ್ಳುತ್ತಾರೆ.


ನಿರಂತರ ದುಡಿಮೆ 

ಪುಟ್ಟ ಹಕ್ಕಿಯಿಂದ ಆರಂಭಿಸಿ ಏಳು ಅಡಿ ಎತ್ತರದ ಆನೆಯ ತನಕ ಮನೋಜ್‌ ಕಲಾಕೃತಿಯನ್ನು ತಯಾರಿಸುತ್ತಾರೆ. ಕಬ್ಬಿಣದ ತಂತಿಯಿಂದ ಪ್ರತಿಕೃತಿ ತಯಾರಿಕೆ, ಅದಕ್ಕೆ ಒಣಹುಲ್ಲಿನ ಹೊದಿಕೆ, ಆವೆ ಮಣ್ಣಿನ ಲೇಪನ, ಗೋಣಿ ನಾರೂ ಬೇಕಾಗುತ್ತದೆ. ಅಂತಿಮ ಹಂತದಲ್ಲಿ ಫೈಬರ್‌ ಹೊದಿಕೆ, ಬೇಕಾದ ಬಣ್ಣಗಳ ಲೇಪನ. ಈ ಸಲಕರಣೆಗಳಲ್ಲದೆ ಕೆಲವು ರಾಸಾಯನಿಕಗಳೂ ಬೇಕಾಗುತ್ತವೆ. ಒಂದು ಆನೆ ತಯಾರಿಕೆಗೆ 25 ದಿನಗಳು ಬೇಕು. 5 ಮಂದಿಯ ನಿರಂತರ ದುಡಿಮೆಯ ಫಲವಾಗಿ ನಿಜವಾದ ಆನೆಯನ್ನು ಬೆಚ್ಚಿ ಬೀಳಿಸುವ ಫೈಬರ್‌ ಆನೆ ಎದ್ದು ನಿಲ್ಲುತ್ತದೆ.

ತಮ್ಮ ವಿಶಿಷ್ಟ ಕಲಾಕೃತಿಗಳಿಗೆ ಸಾಕಷ್ಟು ಬೇಡಿಕೆ ಪಡೆದಿರುವ ಮನೋಜ್‌ ಅವರು ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲಿ ಕಲಾ ಕುಟೀರವನ್ನು ಸ್ಥಾಪಿಸಿ ತಯಾರಿಕೆಗಳಲ್ಲಿ ತೊಡಗಿದ್ದಾರೆ. ಇವರ ಕಲಾ ಸಾಧನೆಗೆ ಪತ್ನಿ ಸೌಮ್ಯಾ ಅವರ ಸಹಕಾರವಿದೆ. ಮಗ ಹೃತ್ವಿಕ್‌ ಜತೆ ಜೀವನ ನಡೆಸುತ್ತಿದ್ದಾರೆ. ಇವರ ಕಲಾಕೃತಿ ರಚನೆಯಲ್ಲಿ ಸಹೋದರ ಲೋಹಿತ್‌ ಕುಮಾರ್‌ ಅವರ ಸಹಕಾರವೂ ಇದೆ.

– ಎಂ. ಎನ್‌. ಕುಮಾರ್‌, ಮೆಲ್ಕಾರ್‌


ಟಾಪ್ ನ್ಯೂಸ್

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.