ವಿಪಕ್ಷ  ಬಿಜೆಪಿಯಿಂದ ಸಭಾತ್ಯಾಗ; ಆಡಳಿತ ಪಕ್ಷದ ಸಮರ್ಥನೆ


Team Udayavani, Apr 1, 2017, 12:53 PM IST

3103kpk12.jpg

ಪುತ್ತೂರು: ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸದೇ ಕಾನೂನು ಬಾಹಿರವಾಗಿ ಸಭೆ ಆಯೋಜಿಸಿರು ವುದನ್ನು ಮತ್ತು ವಿವಿಧ ಸಭೆಗೆ ಸಲ್ಲಿಸಿದ ಆಕ್ಷೇಪ ಗಳನ್ನು ದಾಖಲಿಸದೆ ಏಕಪಕ್ಷೀಯ ಧೋರಣೆ ತಳೆದಿರುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ವಿದ್ಯಾಮಾನ ಶುಕ್ರವಾರದ ನಗರಸಭಾ ಸಾಮಾನ್ಯ ಸಭೆಯಲ್ಲಿ  ನಡೆಯಿತು.

ನಗರಸಭಾ ಸಾಮಾನ್ಯ ಸಭೆ ಅಧ್ಯಕ್ಷೆ ಜಯಂತಿ ಬಲಾ°ಡು ಅಧ್ಯಕ್ಷತೆಯಲ್ಲಿ ನಗರ ಸಭಾಂಗಣದಲ್ಲಿ ನಡೆಯಿತು.ಅಜೆಂಡಾ ವಿಷಯ ಪ್ರಸ್ತಾವನೆ ವೇಳೆ ಮಾತ ನಾಡಿದ ಸದಸ್ಯ ರಾಜೇಶ್‌ ಬನ್ನೂರು, ಫೆ. 9 ಮತ್ತು 10ರಂದು ನಡೆದ ಸಭೆಯ ನಡಾವಳಿಗಳನ್ನು ಈ ಸಭೆಯಲ್ಲಿ ಯಾಕೆ ಮಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಪುರಸಭಾ ಆ್ಯಕ್ಟ್‌ನಲ್ಲಿ ನಡಾವಳಿ ಮಂಡನೆ ಕುರಿತು ಸ್ಪಷ್ಟವಾಗಿ ಉಲ್ಲೇಖವಿದ್ದರೂ, ನಗರಸಭೆ ಆಡಳಿತ ಅದನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು

ಉತ್ತರಿಸಿದ ಆಡಳಿತ ಪಕ್ಷ ಸದಸ್ಯ ಎಚ್‌. ಮಹಮ್ಮದ್‌ ಆಲಿ ಮಾತನಾಡಿ, ಆಕ್ಷೇಪಣೆ ದಾಖಲಿಸಿಕೊಳ್ಳುವುದು, ಮತ ಹಾಕುವ ನಿರ್ಣಯ ಕೈಗೊಳ್ಳುವುದು ಅಧ್ಯಕ್ಷರ ಪರ ಮಾಧಿಕಾರ. ಅದನ್ನು ಸದಸ್ಯರು ಬಲವಂತವಾಗಿ ಮಾಡಿ ಸುವಂತಿಲ್ಲ. ಈ ಹಿಂದೆ ಬಿಜೆಪಿ ಆಡಳಿತಾ ವಧಿಯಲ್ಲೂ ಕೂಡ ಆಕ್ಷೇಪ ದಾಖಲಿಸಿ ಕೊಳ್ಳದ ಉದಾಹರಣೆಗಳಿವೆ ಎಂದು ಸಮರ್ಥಿಸಿದರು.ಸದಸ್ಯ ಜೀವಂಧರ್‌ ಜೈನ್‌ ಮಾತನಾಡಿ, ನ. 23, 25, ಡಿ.9, 30ರಂದು ನಡೆದ ಸಾಮಾನ್ಯ ಮತ್ತು ವಿಶೇಷ ಸಾಮಾನ್ಯ ಸಭೆಗೆ ನಮ್ಮ ಆಕ್ಷೇಪ ದಾಖಲಿಸಿದ್ದೇವೆ. 

ಮಾ. 9, 10ರ ಸಭೆಯ ಲ್ಲಿಯು ಹಿಂದಿನ ನಡಾವಳಿ ಮಂಡಿಸಿಲ್ಲ. ಈ ಎಲ್ಲದರ ಬಗ್ಗೆ ಆಕ್ಷೇಪ ಸಲ್ಲಿಸಿದ್ದರೂ ದಾಖ ಲಿಸಿಲ್ಲ. ಮತ ಹಾಕುವ ನಿರ್ಣಯಕ್ಕೂ ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಇಂದಿನ ಸಭೆಯನ್ನು ರದ್ದು ಮಾಡುವಂತೆ ಅವರು ಆಗ್ರಹಿಸಿದರು.

ಆರೋಪ-ಪ್ರತ್ಯಾರೋಪ
ಶುಕ್ರವಾರದ ಸಭೆಯ ನಾಲ್ಕು ಅಜೆಂಡಾಗಳಿಗೆ ವಿಪಕ್ಷ ಸದಸ್ಯರು ಅಧ್ಯಕ್ಷರಿಗೆ ಆಕ್ಷೇಪ ಪತ್ರವನ್ನು ಸಲ್ಲಿಸಿದರು. ಆದರೆ ಅಧ್ಯಕ್ಷರು ಹಿಂಬರೆಹದ ಪ್ರತಿಗೆ ಸಹಿ ಹಾಕದೆ ಇರುವುದಕ್ಕೆ ಗರಂ ಆದ ರಾಜೇಶ್‌ ಬನ್ನೂರು, ಜೀವಂಧರ್‌ ಜೈನ್‌, ವಿನಯ ಭಂಡಾರಿ, ರಮೇಶ್‌ ರೈ ಮೊದಲಾದವರು, ಏಕಪಕ್ಷೀಯ ಧೋರಣೆ ಪ್ರದರ್ಶಿಸುತ್ತಿದ್ದೀರಿ. ಆಕ್ಷೇಪ ಪತ್ರದ ಪ್ರತಿಗೆ ಸಹಿ ಹಾಕಿ ನೀಡುವುದು ನಿಯಮ. ಅದನ್ನು ಉಲ್ಲಂಘಿಸಿದ್ದೀರಿ ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಆಡಳಿತ ಅವಧಿಯಲ್ಲಿ ಹೇಗೆ ಆಡಳಿತ ನಡೆದಿದೆ ಎನ್ನುವುದು ನಮಗೆ ಚೆನ್ನಾಗಿಗೊತ್ತಿದೆ ಎಂದು ಸಮರ್ಥಿಸಿದ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಕೆಲ ಕಾಲ ಆರೋಪ-ಪ್ರತ್ಯಾರೋಪಗಳಲ್ಲಿ ಸಭೆ ಮುಳುಗಿ ಹೋಗಿತ್ತು. ಧಿಕ್ಕಾರವೂ ಮೊಳಗಿತ್ತು.

ಕಾನೂನು ಹೋರಾಟ
ಆಡಳಿತ ಪಕ್ಷದ ಸದಸ್ಯ ಎಚ್‌.ಮಹಮ್ಮದ್‌ ಆಲಿ ಮಾತನಾಡಿ, ಬಿಜೆಪಿ ಅವಧಿಯಲ್ಲಿನ  ಆಡಳಿತ ಭ್ರಷ್ಟಾಚಾರದ ದಾಖಲೆ ನಮ್ಮ ಬಳಿ ಇದೆ. ಅದನ್ನು ಹೊರ ತಂದು ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು, ತನಿಖೆ ಮಾಡಿಸಿ. ನಮ್ಮದೇನೂ ಆಕ್ಷೇಪ ಇಲ್ಲ. ನಿಮ್ಮ ಅವಧಿಯ ಅವ್ಯವಹಾರ ನಮ್ಮ ಬಳಿ ಇದೆ. ನೀವು ಕಾನೂನು ಹೋರಾಟ ಮಾಡಿ ಎಂದು ಅವರು ಉತ್ತರಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಕೆಲ ಕಾಲ ಸಭೆ ಗದ್ದಲದ ಗೂಡಾಯಿತು.

ಸ್ಥಾಯೀ ಸಮಿತಿಗೆ ಆಯ್ಕೆ ಚರ್ಚೆ
ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಗೆ ಪಟ್ಟಿ ನೀಡಲಾಗಿದ್ದರೂ ಆಯ್ಕೆ ಮಾಡಿಲ್ಲ. ಮುಂದೂಡಲಾಗಿದೆ ಎಂಬ ಉತ್ತರ ನೀಡಿದ್ದೀರಿ ಎಂದು ಬಿಜೆಪಿ ಸದಸ್ಯರು ಆರೋಪಿಸಿದಾಗ, ಆಯ್ಕೆ ಬಗ್ಗೆ ಕುಳಿತು ಚರ್ಚಿಸಲು ನೀವು ತಯಾರಿಲ್ಲ. ಹೀಗಾಗಿ ಆಯ್ಕೆ ನಡೆದಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷತೆ ಆಸೆ ನಮಗಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸಮರ್ಥಿಸಿದರು. ಈ ವಿಚಾರದಲ್ಲಿ ಸಭೆಯಲ್ಲಿ ದೀಫì ಚರ್ಚೆ ಮುಂದುವರಿಯಿತು.

ಶಾಸಕರ ಆಗಮನ: ಸದಸ್ಯರ ನಿರ್ಗಮನ
ಬಿಜೆಪಿ ಸದಸ್ಯರು ಸಭಾ ಬಹಿಷ್ಕಾರಕ್ಕೆ ಮುಂದಾದ ವೇಳೆಯಲ್ಲಿ ಸಭೆಗೆ ಆಗಮಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬಹಿಷ್ಕಾರದ ಬದಲು ವಿಷಯ ತಿಳಿಸುವಂತೆ ಸೂಚಿಸಿದರು. ರಾಜೇಶ್‌ ಬನ್ನೂರು ನಗರಸಭೆ ಆಡಳಿತದ ಏಕಪಕ್ಷೀಯ ಧೋರಣೆ ತಳೆದಿದೆ ಎಂದು ವಿವರಿಸಿದರು. ಇದಕ್ಕೆ ಮರು ಉತ್ತರ ನೀಡಲು ಆಡಳಿತ ಪಕ್ಷದ ಸದಸ್ಯ ಎಚ್‌. ಮಹಮ್ಮದ್‌ ಆಲಿ ಮುಂದಾದಾಗ ಅದಕ್ಕೆ ಬಿಜೆಪಿ ಸದಸ್ಯರು ಸಹಮತ ಸೂಚಿಸದೆ, ಸಭೆ ಯಿಂದ ನಿರ್ಗಮಿಸಿದರು. ಅನಂತರ ಶಾಸಕರ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಮುಂದುವರಿಯಿತು.ಪೌರಾಯುಕ್ತೆ ರೂಪಾ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಗೌಡ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಅನುದಾನ ಮೀಸಲಲ್ಲಿ ತಾರತಮ್ಯ: ಆಕ್ಷೇಪ; ಸಮರ್ಥನೆ
ಎಸ್‌ಪಿಸಿ-ಟಿಎಸ್‌ಪಿಯಲ್ಲಿನ 1.5 ಕೋ.ರೂ. ಅನುದಾನದಲ್ಲಿ 75 ಲಕ್ಷ ರೂ. ಅನುದಾನವನ್ನು ಅಧ್ಯಕ್ಷರ ವಾರ್ಡ್‌ಗೆ ಮೀಸಲಿರಿಸಲಾಗಿದೆ. ಇದು ಉಳಿದ ಸದಸ್ಯ ವಾರ್ಡ್‌ಗಳ ಕಡಗಣನೆಗೆ ಉದಾ ಹರಣೆಯಾಗಿದ್ದು, ಈ ತಾರತಮ್ಯ ನೀತಿಗೆ ಉತ್ತರಿಸುವಂತೆ ಸದಸ್ಯರಾದ ರಾಜೇಶ್‌ ಬನ್ನೂರು, ಜೀವಂಧರ್‌ ಜೈನ್‌, ರಾಮಣ್ಣ ಗೌಡ, ವಾಣಿಶ್ರೀಧರ್‌ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮಹಮ್ಮದ್‌ ಆಲಿ, ತಾರತಮ್ಯ ಮಾಡಿಲ್ಲ. ಎಸ್‌ಸಿ-ಎಸ್‌ಟಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದು, ಬಲಾ°ಡು ವಾರ್ಡ್‌ನ ರಸ್ತೆಗೆ ಅಷ್ಟು ಮೊತ್ತದ ಹಣ ಅಗತ್ಯ ಇದ್ದ ಕಾರಣ ಈ ಹಣ ಮೀಸಲಿಡಲಾಗಿದೆ. ಎಲ್ಲ ವಾರ್ಡ್‌ಗಳ ಕಾಲನಿ ಸಂಪರ್ಕ ರಸ್ತೆಗೆ ಹಣ ಇಡಲಾಗಿದೆ ಎಂದರು. ಈ ಉತ್ತರ ಸಮರ್ಥ ನಿಯಲ್ಲ ಎಂದು ವಿಪಕ್ಷ ಸದಸ್ಯರು ವಿರೋಧ ಸೂಚಿಸಿದರು.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.