ಸ್ವಚ್ಛ ಪುತ್ತೂರು ಅಭಿಯಾನ
Team Udayavani, Jan 15, 2018, 3:31 PM IST
ನಗರ: ಶ್ರೀ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಪುತ್ತೂರು ಅಭಿಯಾನ ರವಿವಾರ ನಗರದ ಬಪ್ಪಳಿಗೆ ಪರಿಸರದಲ್ಲಿ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡಿರುವ ಸ್ವಚ್ಛ ಪುತ್ತೂರು ತಂಡದವರು ಸಾಮಾನ್ಯ ಕಾರ್ಯಕರ್ತರಾಗಿ ಶ್ರಮದಾನ, ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಸ್ವಚ್ಛತಾ ಅಭಿಯಾನ ಆರಂಭಕ್ಕೆ ಮೊದಲು ಶ್ರೀ ಸರಸ್ವತಿ ಸೌಹಾರ್ದ ಸಹಕಾರಿಯ ಶಾಖಾ ವ್ಯವಸ್ಥಾಪಕ ಬಿಪಿನ್ ಚಂದ್ರ ಮತ್ತು ಪುತ್ತೂರಿನ ವೈದ್ಯ ಡಾ| ಶ್ರೇಯಸ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಸ್ವಚ್ಛತ ಕಾರ್ಯ ನಡೆಸಲಾಯಿತು.
ಸಂಖ್ಯೆ ಮುಖ್ಯವಲ್ಲ
ಸ್ವಚ್ಛ ಪುತ್ತೂರು ಅಭಿಯಾನದ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಅಭಿಯಾನ 2 ನೇ ಹಂತಕ್ಕೆ ತಲುಪಿದೆ. ಇಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮುಖ್ಯವಲ್ಲ. ಸ್ವಚ್ಛತ ಕಾರ್ಯದ ಮೂಲಕ ಸಮಾಜದಲ್ಲಿ ಮೂಡಿರುವ ಜಾಗೃತಿ ಮುಖ್ಯವಾಗುತ್ತದೆ. ಎಲ್ಲಾ ವರ್ಗದವರೂ ಇದರಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಹೆಗಲು ನೀಡುತ್ತಿದ್ದಾರೆ ಎಂದರು.
ಇದು ಸ್ವಚ್ಛ ಭಾರತ ಕಲ್ಪನೆಯ ಭಾಗವಾಗಿಸ್ವಚ್ಛ ಪುತ್ತೂರು ಅಭಿಯಾನ ನಡೆಯುತ್ತಿದೆ. ಶ್ರೀ ರಾಮಕೃಷ್ಣ ಮಿಷನ್ನ ಮಂಗಳೂರು ಶಾಖಾ ಮಠದ ಶ್ರೀ ಏಕಗಮ್ಯಾನಂದಜೀ ಮಹಾರಾಜ್ ಅವರ ಪ್ರೇರಣೆ ಈ ಕಾರ್ಯದ ಯಶಸ್ಸಿನ ಮುಖ್ಯ ಭಾಗವಾಗುತ್ತದೆ ಎಂದು ಹೇಳಿದರು.
ಸ್ವಚ್ಛ ಪುತ್ತೂರು ಅಭಿಯಾನದಲ್ಲಿ ಜೆಸಿ ತರಬೇತುದಾರ ಕೃಷ್ಣಮೋಹನ್ ಪಿ.ಎಸ್., ವೈದ್ಯ ಡಾ| ಸುರೇಶ್ ಪುತ್ತೂರಾಯ, ಜಿ. ಕೃಷ್ಣ, ವಿನೋದ್ ನೆಹರುನಗರ, ಕಲ್ಲಾರೆ ಓಂಕಾರ ಫ್ರೆಂಡ್ಸ್ನ ಸುರೇಶ್, ವಿಷನ್ ಸೇವಾ ಟ್ರಸ್ಟ್ನ ಚೇತನ್ ಪುತ್ತೂರು, ದುರ್ಗಾಪರಮೇಶ್ವರ, ಬಾಲಕೃಷ್ಣ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಪಾಲ್ಗೊಂಡರು.
ಜೆಸಿಬಿ ನೀಡಿ ಸಹಕಾರ
ಸ್ವಚ್ಛ ಪುತ್ತೂರು ತಂಡವು ಸ್ವಚ್ಛತಾ ಕಾರ್ಯವನ್ನು ಅವಿರತವಾಗಿ ನಡೆಸುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿ ಗೌರಿ
ಅರ್ಥ್ಮೂವರ್ನ ಮಾಲಕ ಕೃಷ್ಣಾನಂದ ಸೂರ್ಯ ಅವರು ರವಿವಾರದ ಸ್ವಚ್ಛತಾ ಅಭಿಯಾನಕ್ಕೆ ಜೆಸಿಬಿ ಯನ್ನು ಉಚಿತವಾಗಿ ಒದಗಿಸಿಕೊಡುವ ಮೂಲಕ ಸಾಮಾಜಿಕ ಕಾಳಜಿ ತೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್