ನಕ್ಸಲರು ಭೇಟಿ ಇತ್ತ ಕುಟುಂಬದ ಕಣ್ಣೀರ ಕಥೆ


Team Udayavani, Feb 8, 2018, 8:15 AM IST

38.jpg

ಸುಬ್ರಹ್ಮಣ್ಯ: ಅಂದು ನಾನು ಎಲ್ಲರಿಗೂ ಬೇಕಾಗಿದ್ದೆ; ಆದರೆ ಇಂದು ನನ್ನ ಆವಶ್ಯಕತೆ ಯಾರಿಗೂ ಇಲ್ಲ. ಸೂಟುಬೂಟು ಸದ್ದಿನ ಜತೆ ಅಂದು ಮನೆ ಬಾಗಿಲು ಬಡಿದ ಅಧಿಕಾರಿಗಳು, ಜನಪ್ರತಿನಿಧಿ ಗಳು ಆ ಬಳಿಕ ನನ್ನನ್ನು ಮರತೇ ಬಿಟ್ಟಿದ್ದಾರೆ. ಈ ರೀತಿ ಅಸಹಾಯಕತೆ, ಅಳಲು ತೋಡಿ ಕೊಂಡಿದ್ದು ಸುಬ್ರಹ್ಮಣ್ಯ ಪಳ್ಳಿಗದ್ದೆ ನಿವಾಸಿ ಬೆಳಿಯಪ್ಪ ಗೌಡ. ಇವರ ಮನೆಗೆ ಏಳು ವರ್ಷದ ಹಿಂದೆ ನಕ್ಸಲರು ಭೇಟಿ ಇತ್ತಿದ್ದರು. ಪಶ್ಚಿಮ ಘಟ್ಟದ ವಿವಿಧೆಡೆಗಳಲ್ಲಿ ಇತ್ತೀಚೆಗಿನ ಕೆಲವು ದಿನಗಳಲ್ಲಿ ಶಂಕಿತ ನಕ್ಸಲರ ಚಲನವಲನ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಬೆಳಿಯಪ್ಪ ಗೌಡರು ತಮ್ಮ ದುಗುಡ ಹಂಚಿಕೊಂಡರು.  

2012ರಲ್ಲಿ ಪಳ್ಳಿಗದ್ದೆಯಲ್ಲಿದ್ದ ಇವರ ಮನೆಗೆ ಒಂಬತ್ತು ಮಂದಿ ಶಸ್ತ್ರಧಾರಿ ನಕ್ಸಲರು ಭೇಟಿ ಇತ್ತಿದ್ದರು. ಅದು ಈ ಭಾಗಕ್ಕೆ ನಕ್ಸಲರ ಮೊದಲ ಪ್ರವೇಶ. ಬೆಳಿಯಪ್ಪ ಗೌಡರ ಮನೆಯಿಂದ ಆಹಾರ ಸಾಮಗ್ರಿ ಹಾಗೂ ಮಾಹಿತಿ ಪಡೆದುಕೊಂಡಿದ್ದ ನಕ್ಸಲರು, ತಾವು ಬಂದ ವಿಚಾರವನ್ನು ಬೇರೆ ಯಾರಿಗೂ ಹೇಳಬಾರದು ಎಂದು ತಾಕೀತು ಮಾಡಿದ್ದರು. ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಒಡ್ಡಿದ್ದರು. ಆ ಬಳಿಕ ನಕ್ಸಲ್‌ ಭೇಟಿ ವಿಚಾರ ಬಹಿರಂಗಗೊಂಡು ಈ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆ ಯೋಧರು ಶೋಧ ಕಾರ್ಯಾಚರಣೆ ನಡೆಸಿದ್ದರು.

ಹುಸಿಯಾದ ಭರವಸೆ
ಘಟನೆಯ ಬಳಿಕ ಎಎನ್‌ಎಫ್ ಯೋಧರು, ಅಧಿಕಾರಿಗಳು ಬೆಳಿಯಪ್ಪ ಗೌಡರ ಮನೆಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಕುಟುಂಬಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದರು. ಆದರೆ ಮುಂದೆ ಅದ್ಯಾವುದೂ ಈಡೇರಲಿಲ್ಲ. 

ಮನೆ ನೆಲಸಮ ಬೆದರಿಕೆ
ಪಳ್ಳಿಗದ್ದೆಯ ಮೂಲ ಮನೆ ಹಾಗೂ ಕೃಷಿ ಭೂಮಿ ತ್ಯಜಿಸಿದ ಬಳಿಕ ಬೆಳಿಯಪ್ಪ ಗೌಡರು ಕುಲ್ಕುಂದ ಬಳಿ ಮೂಸೆಕುಂಞಿ ಅವರ ವಶದಲ್ಲಿದ್ದ, ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದ ಗೋಮಾಳದ 0.5 ಸೆಂಟ್ಸ್‌ ಜಾಗವನ್ನು ಸಾಲವಾಗಿ ಪಡೆದ 1 ಲಕ್ಷ ರೂ. ಬೆಲೆ ತೆತ್ತು ಖರೀದಿಸಿದರು. ಸಾಲ ಮಾಡಿ ಜಾಗ ಖರೀದಿಸಿ ಮನೆ ಕಟ್ಟಿದಾಗ ಸ್ಥಳೀಯ ಅಧಿಕಾರಿಗಳು ಅದಕ್ಕೆ ಅಡ್ಡಗಾಲು ಹಾಕಿದರು. ಮನೆ ತೆರವುಗೊಳಿಸುವಂತೆ, ಇಲ್ಲವಾದರೆ ನೆಲಸಮ ಮಾಡುವುದಾಗಿ ಬೆದರಿಸಿದರು. ಮೆಸ್ಕಾಂನವರು ವಿದ್ಯುತ್‌ ಸಂಪರ್ಕದ ವಯರ್‌ಗಳನ್ನು ಕಿತ್ತು ಹಾಕಿ ತೊಂದರೆ ನೀಡಿದರು. ಪಳ್ಳಿಗದ್ದೆಯಲ್ಲಿ ಇವರಿಗಿದ್ದ 40 ಸೆಂಟ್ಸ್‌ ಜಾಗ ಹಡಿಲು ಬಿದ್ದಿದೆ, ಮನೆ ಸಂಪೂರ್ಣ ನೆಲಸಮಗೊಂಡಿದೆ.

ಬಡತನದ ಜೀವನ; ಮುಗಿಯದ ಬವಣೆ
ಪತಿ-ಪತ್ನಿಯದು ಕೂಲಿ ಕೆಲಸ. ಮನೆಯಲ್ಲಿ ತೀರದ ಬಡತನವಿದೆ. ಜಾಗ ಖರೀದಿಸಲು ಮಾಡಿದ ಸಾಲ ತೀರಿಸುವುದಕ್ಕಾಗಿ ಬೆಳಿಯಪ್ಪ ಗೌಡರ ಮಗ ಶಾಲೆ ಬಿಟ್ಟು ಖಾಸಗಿ ಕೆಲಸಕ್ಕೆ ಸೇರಿದ್ದಾನೆ. ಹಿರಿಯ ಪುತ್ರಿ ಖಾಸಗಿ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೊಬ್ಟಾಕೆ ಪಿಯುಸಿ ಕಲಿತಿದ್ದಾಳೆ. ಹಿರಿಯ ಪುತ್ರಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನೌಕರಿ ನೀಡುವ ಸಲುವಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳೇ ಶಿಫಾರಸು ಪತ್ರ ನೀಡಿದ್ದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ.

ನಕ್ಸಲ್‌ ಭೇಟಿ, ಶೋಧ ಕಾರ್ಯಾಚರಣೆಯ ಬಳಿಕ ಈ ಕುಟುಂಬಕ್ಕೆ ಸರಕಾರ ಜಿಲ್ಲಾಡಳಿತದ ಮೂಲಕ ರಕ್ಷಣೆ, ನಿವೇಶನ, ಸವಲತ್ತು, ಭದ್ರತೆ ಒದಗಿಸುವ ಭರವಸೆ ನೀಡಿತ್ತು. ಕೆಲವು ದಿನ ಅಧಿಕಾರಿಗಳು, ಪೊಲೀಸರ ಬೂಟುಗಳು, ವಾಹನಗಳು ಇವರ ಮನೆ ಪರಿಸರದಲ್ಲಿ ಸದ್ದು ಮಾಡಿದ್ದು ಬಿಟ್ಟರೆ ರಕ್ಷಣೆಯೂ ಇಲ್ಲ, ಬದುಕಿಗೆ ನೆಲೆಯೂ ಇಲ್ಲವಾಗಿದೆ. ಕಾರ್ಕಳ ನಕ್ಸಲ್‌ ನಿಗ್ರಹ ದಳ ಅಧೀಕ್ಷಕರು ಈ ಕುಟುಂಬಕ್ಕೆ ಅತಿ ಆವಶ್ಯಕವಾಗಿ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ, ಜಿ.ಪಂ. ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ಮತ್ತು ಎ.ಸಿ. ಅವರು ಕ್ರಮಕ್ಕಾಗಿ ತಹಶೀಲ್ದಾರ್‌ ಅವರ ಕಚೇರಿಗೆ ಸೂಚಿಸಿದ್ದರೂ ಇದುವರೆಗೆ ಪ್ರಯೋಜನ ಆಗಿಲ್ಲ.

ಏಳು ವರ್ಷಗಳ ಅಲೆದಾಟ
ಈಗಿನ ಮನೆಗೆ ಹಕ್ಕುಪತ್ರ ನೀಡುವಂತೆ ಬೆಳಿಯಪ್ಪ ಗೌಡರು ಐದು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಹಕ್ಕುಪತ್ರ ಮಂಜೂರಾತಿಗೆ ಹಾಗೂ ಇತರ ಸೌಲಭ್ಯಕ್ಕಾಗಿ ಒಟ್ಟು ಏಳು ವರ್ಷಗಳಿಂದ ವಿವಿಧ ಇಲಾಖೆಗಳ ಕಚೇರಿಗಳಿಗೆ ಓಡಾಟ ನಡೆಸಿದ್ದಾರೆ. ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ನಡೆಸಿದರೂ ಇಲ್ಲಿಯ ತನಕ ಯಾವ ಸೌಲಭ್ಯವೂ ದೊರಕಿಲ್ಲ. ವಾರದ ಹಿಂದೆಯಷ್ಟೇ ತಾಲೂಕು ದಂಡಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಹೇಳಿಕೊಂಡಾಗ ಹಕ್ಕುಪತ್ರಕ್ಕೆ ಮತ್ತೂಮ್ಮೆ ಅರ್ಜಿ ಕೊಡಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ. ಬದುಕಿನಲ್ಲಿ ಎದುರಾಗುವ ಸವಾಲಿಗೆ ಅಂಜಿ ಸೋಲುವವರೇ ಜಾಸ್ತಿ. ಅಂತಹ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿಯೂ ಇಂದು ಕಣ್ಣೀರಿನಲ್ಲಿ ಕೈತೊಳೆಯಬೇಕಾದ ದುಃಸ್ಥಿತಿ ಬೆಳಿಯಪ್ಪ ಗೌಡರದು. ಒಂದೆಡೆ ನಕ್ಸಲ್‌, ಇನ್ನೊಂದೆಡೆ ಆಡಳಿತ ಹೀಗೆ ಇಕ್ಕೆಡೆಗಳಿಂದಲೂ ತುಳಿತಕ್ಕೆ ಒಳಪಟ್ಟ ಈ ಕುಟುಂಬದ ನೆರವಿಗೆ ಸರಕಾರ, ಜಿಲ್ಲಾಡಳಿತ ಸ್ಪಂದಿಸಬೇಕಿದೆ. 

ಸಂತ್ರಸ್ತರು ಕಚೇರಿಗೆ ಆಗಮಿಸಿ ಅಹವಾಲು ಹೇಳಿಕೊಂಡಿದ್ದಾರೆ. ಕೆಲವು ದಾಖಲೆಗಳ ಆವಶ್ಯಕತೆಯಿದೆ. ವಾಸವಿರುವ ಮನೆಯ ಭಾವಚಿತ್ರ ಸಹಿತ ದಾಖಲೆ ತರಲು ಸೂಚಿಸಿದ್ದೇವೆ. ನಿವೇಶನದ ಹಕ್ಕುಪತ್ರ ನೀಡಲು ಬದ್ಧರಿದ್ದೇವೆ.
– ಕುಂಞಮ್ಮ, ಸುಳ್ಯ ತಹಶೀಲ್ದಾರ್‌

ಜಾಗದ ರೆಕಾರ್ಡ್‌ಗಾಗಿ ಐದು ವರ್ಷಗಳಿಂದ ಡಿ.ಸಿ. ಕಚೇರಿ, ಎ.ಸಿ. ಕಚೇರಿ, ತಹಶೀಲ್ದಾರ್‌ ಕಚೇರಿ, ಕಂದಾಯ ಕಚೇರಿ, ಗ್ರಾ.ಪಂ.ಗಳಿಗೆ ತೆರಳಿ ಸೋತಿದ್ದೇನೆ. ಶಾಸಕರ ಸಹಿತ ಎಲ್ಲ ಜನಪ್ರತಿನಿಧಿ ಗಳನ್ನೂ ಭೇಟಿಯಾಗಿದ್ದೇನೆ. ನ್ಯಾಯ ಸಿಕ್ಕಿಲ್ಲ.
ಸಂತ್ರಸ್ತ ಬೆಳಿಯಪ್ಪ ಪಳ್ಳಿಗದ್ದೆ

ಬಾಲಕೃಷ್ಣ ಭೀಮಗುಳಿ 

ಟಾಪ್ ನ್ಯೂಸ್

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.