ಬೆಳ್ತಂಗಡಿ : ಬಿಕೋ ಎನ್ನುತ್ತಿದೆ ಶತಾಯುಷಿ ತಾಲೂಕು ಕಟ್ಟಡ


Team Udayavani, Apr 4, 2018, 11:25 AM IST

4-April-7.jpg

ಬೆಳ್ತಂಗಡಿ: ಬಹುರೂಪಗಳಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗೆ ಉಪಯೋಗವಾಗುತ್ತಿದ್ದ ಶತಮಾನದ ತಾ| ಕಚೇರಿ ಕಟ್ಟಡ ಈಗ ಬಿಕೋ ಎನ್ನುತ್ತಿದೆ. 1918ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಿವಿಧ ಇಲಾಖೆಗಳನ್ನು ಮಿನಿ ವಿಧಾನಸೌಧ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಹಳೆ ಕಟ್ಟಡದ ಕತೆ ಮುಂದೇನು ಎಂಬ ಪ್ರಶ್ನೆ ಮೂಡಿದೆ.

1904ರಿಂದ ಬೆಳ್ತಂಗಡಿ ಉಪ ತಾಲೂಕಾಗಿ ಕಾರ್ಯಚಟುವಟಿಕೆ ಆರಂಭ ಆಗಿರುವುದು ಕಡತಗಳಲ್ಲಿ ತಿಳಿದು ಬರುತ್ತದೆ. ತಾಲೂಕಿನ ಕಡತಗಳಲ್ಲಿ 1904ರಲ್ಲಿ ಉಪ ತಾಲೂಕಿನ ಉಲ್ಲೇಖ ವಿದ್ದು, ಬೆಳ್ತಂಗಡಿಯಲ್ಲಿಯೇ ಈ ಕಡತಗಳು ಲಭಿಸಿವೆ. ಈ ವೇಳೆ ಸರ್ವೆ ನಡೆಸಿದ ಉಲ್ಲೇಖಗಳೂ ಕಡತಗಳಲ್ಲಿವೆ.

ಉಪ್ಪಿನಂಗಡಿ ತಾಲೂಕು
ಬ್ರಿಟೀಷರ ಕಾಲದಲ್ಲಿ ಪ್ರಮುಖ ಆಡಳಿತ ನಿರ್ವ ಹಣ ಕೇಂದ್ರವಾಗಿದ್ದ ಉಪ್ಪಿನಂಗಡಿ ತಾ| ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸರಕು ಸಾಗಾಟ ಕೇಂದ್ರವಾಗಿದ್ದ ಮಂಗಳೂರಿನಿಂದ ದೋಣಿ ಮೂಲಕ ಉಪ್ಪುನ್ನು ಇತರೆಡೆಗೆ ಸಾಗಿಸಲಾಗುತ್ತಿತ್ತು. ಅದೇ ರೀತಿ ಭತ್ತವನ್ನು ಮಂಗಳೂರಿಗೆ ಸಾಗಿಸಲಾ ಗುತ್ತಿತ್ತು. ಆದ್ದರಿಂದ ಉಪ್ಪಿ ನಂಗಡಿಗೆ ತುಳುವಿನಲ್ಲಿ ಉಬಾರ್‌ (ಉಪ್ಪು, ಬಾರ್‌) ಹೆಸರು ಬಂತು ಎಂಬ ಅಭಿಪ್ರಾಯವಿದೆ.

ಈ ವೇಳೆ ಮಂಗಳೂರು – ಪುತ್ತೂರು – ಮೈಸೂರು ಹೆದ್ದಾರಿಯಿದ್ದು, ಆಡಳಿತವನ್ನು ಸಮಗ್ರವಾಗಿ ನಿರ್ವಹಿಸಲು ತಾ| ಕೇಂದ್ರವಾಗಿ ಪುತ್ತೂರನ್ನು ಮಾಡಲಾಯಿತು. ಉಪ್ಪಿನಂಗಡಿಯಲ್ಲಿ ನೆರೆ ಬಂದು ಮಲೇರಿಯ ವ್ಯಾಪಿಸಿ, ನಿರ್ವಹಣೆ ಕಾರಣಕ್ಕಾಗಿ ತಾಲೂಕು ಕೇಂದ್ರವನ್ನು ಬದಲಾಯಿಸಲಾಗಿತ್ತು.

ಉಪ ತಾ|ನಲ್ಲಿ 186 ಗ್ರಾಮ
ಬೆಳ್ತಂಗಡಿ ಉಪತಾಲೂಕಿನಲ್ಲಿ ಸುಮಾರು 186 ಗ್ರಾಮಗಳು ಇದ್ದವು. 1924 – 25ರ ಸುಮಾರಿಗೆ ಪುತ್ತೂರು ತಾ| ಅಸ್ತಿತ್ವಕ್ಕೆ ಬಂದಿದೆ. ಆಗಲೂ ಬೆಳ್ತಂಗಡಿ ಉಪ ತಾಲೂಕಾಗಿಯೇ ಕಾರ್ಯ ನಿರ್ವಹಿಸುತಿತ್ತು.

ದೋಣಿ ಮೂಲಕ ಸಂಪರ್ಕ
ಬೆಳ್ತಂಗಡಿ ಉಪ ತಾಲೂಕಾಗಿದ್ದು, ಬೆಳ್ತಂಗಡಿ ಸಂಪರ್ಕಿಸಲು ದೋಣಿಯನ್ನು ಬಳಸಲಾಗುತ್ತಿತ್ತು. ಆರಂಭದಲ್ಲಿ ಕುಮಾರಧಾರ ನದಿಗೆ ಸೇತುವೆಯಿದ್ದುದರಿಂದ ವಸ್ತುಗಳನ್ನು ರಸ್ತೆ ಮೂಲಕ ಸಾಗಿಸಬೇಕಿದ್ದಲ್ಲಿ ಬಂಟ್ವಾಳ ಮೂಲಕ ಬೆಳ್ತಂಗಡಿಗೆ ಆಗಮಿಸಬೇಕಾಗಿತ್ತು. ಸುಮಾರು 1960ರ ವೇಳೆಗೆ ಉಪ್ಪಿನಂಗಡಿ – ಬೆಳ್ತಂಗಡಿ ಸಂಪರ್ಕ ಸೇತುವೆ ನಿರ್ಮಾಣವಾಗಿದೆ.

ತಾಲೂಕಾಗಿ ಘೋಷಣೆ
ಬೆಳ್ತಂಗಡಿಯನ್ನು 1954ಕ್ಕೆ ತಾಲೂಕಾಗಿ ಘೋಷಣೆ ಮಾಡಲಾಯಿತು. ಬಳಿಕ ನವೀಕರಣ ಕಾರ್ಯ ನಡೆಸಿ ಕಚೇರಿ ಬಳಕೆಗೆ ಬೇಕಾದಂತೆ ಕಟ್ಟಡವನ್ನು ಬದಲಾಯಿಸಲಾಗಿದೆ.ತಾ| ಕಚೇರಿ ಕಟ್ಟಡವನ್ನು ಕಂದಾಯ ಇಲಾಖೆ ನಿರ್ವಹಣೆ ಮಾಡುತ್ತಿದೆ.

ಉಪನೋಂದಣಾಧಿಕಾರಿ ಕಚೇರಿ ನೆಲಸಮ
ತಾ| ಕಚೇರಿ ಸಮೀಪದಲ್ಲೇ ಇದ್ದ ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ 1876ರಿಂದ ಕಾರ್ಯನಿರ್ವಹಿಸುತ್ತಿತ್ತು. ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಉದ್ದೇಶದಿಂದ ಈ ಕಚೇರಿಯನ್ನು ನೆಲಸಮ ಮಾಡಲಾಗಿತ್ತು. ತಾ| ಕಟ್ಟಡದಲ್ಲಿ ಸದ್ಯ ಉಪ ಖಜಾನೆ, ಬಳಿಯ ಕಟ್ಟಡದಲ್ಲಿ ಭೂಮಿ ಕೇಂದ್ರ ಕಾರ್ಯಾಚರಿಸುತ್ತಿವೆ.

ಬಂಧೀಖಾನೆಯಾಗಿದ್ದ ಕಟ್ಟಡ 
ಬೆಳ್ತಂಗಡಿ ಉಪ ತಾಲೂಕಾಗಿದ್ದ ಸಂದರ್ಭ ಈ ಕಟ್ಟಡ ಸಬ್‌ಜೈಲಾಗಿತ್ತು. ಕಟ್ಟಡದಲ್ಲಿ ಕೈದಿಗಳನ್ನು ಕೂಡಿ ಹಾಕಲು ಬಂಧೀಖಾನೆಯನ್ನೂ ನಿರ್ಮಿಸಲಾಗಿತ್ತು. ಡೆಪ್ಯುಟಿ ತಹಶೀಲ್ದಾರ್‌ ಉಪ ತಾಲೂಕಿನ ಕಾರ್ಯಚಟುವಟಿಕೆ ನಿಯಂತ್ರಿಸುವ ಜವಾಬ್ದಾರಿ ಹೊತ್ತಿದ್ದರು.

ಸಬ್‌ಕೋರ್ಟ್‌
ಕಚೇರಿ ಸಬ್‌ಕೋರ್ಟ್‌ ಆಗಿದ್ದು, ಪುತ್ತೂರು ಸಬ್‌ ಡಿವಿಜನಲ್‌ ಮೆಜಿಸ್ಟ್ರೇಟ್‌ ಆಗಿ ಕಾರ್ಯನಿರ್ವಹಿಸುತ್ತಿತ್ತು. ಕಚೇರಿಯೊಳಗಿನ ಕಟಕಟೆ ತಾಲೂಕು ರಚನೆ ಬಳಿಕವೂ ಇತ್ತು. ಕಟ್ಟಡ ನವೀಕರಣ ವೇಳೆ ಇದನ್ನು ತೆಗೆದು ಸಭಾಂಗಣ ಮಾಡಲಾಗಿದೆ.

ಗರಿಷ್ಠ ಭದ್ರತೆ
ಕಟ್ಟಡದಲ್ಲಿ ಬಂಧೀಖಾನೆ ಇದ್ದುದರಿಂದ, ಗರಿಷ್ಠ ಭದ್ರತೆ ನೀಡಲಾಗಿತ್ತು. ಗೋಡೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿತ್ತು. ಕಬ್ಬಿಣದ ಸೆಲ್‌ಗ‌ಳೂ ಇದ್ದವು. ಕಟ್ಟಡದಲ್ಲಿ ಉಪಖಜಾನೆಯಿದ್ದು, ಕಬ್ಬಿಣದ ರ್ಯಾಕ್‌ ಗಳಿವೆ. ಕಾಂಕ್ರೀಟ್‌ ಕಾಮಗಾರಿ ನಡೆಸಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ವಿಭಿನ್ನ ಲಾಕಿಂಗ್‌ ವಿನ್ಯಾಸ
ತಾ| ಕಚೇರಿ ಉಪ ಖಜಾನೆಯಲ್ಲಿ ಈಗಲೂ ಸೆಲ್‌ಗ‌ಳಿವೆ. ಬ್ರಿಟೀಷರ ಕಾಲದ ಲಾಕಿಂಗ್‌ ವಿನ್ಯಾಸ ಹೊಂದಿದ್ದು, ಸುತ್ತ ಕಬ್ಬಿಣದ ಪಟ್ಟಿಗಳನ್ನು ಹೊಂದಿವೆ. ಗೋಡೆ ಕೊರೆದು ಪ್ರತ್ಯೇಕವಾಗಿ ಬೀಗ ಹಾಕಲು ಸ್ಥಳಾವಕಾಶ ಇಡಲಾಗಿದೆ.

ಖಾಸಗಿ ಕಟ್ಟಡದಲ್ಲಿರುವ ಇಲಾಖೆಗಳು ಬರಲಿ
ಮಿನಿ ವಿಧಾನಸೌಧ ನಿರ್ಮಾಣವಾಗಿದ್ದರೂ ರೆಕಾರ್ಡ್‌ ರೂಂ ನಿರ್ವಹಿಸಲು ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಈಗಾಗಲೇ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಿಗೆ ತಾಲೂಕು ಕಚೇರಿ ಕಟ್ಟಡ ನೀಡಬೇಕಿದೆ.
– ವೈ.ಪಿ. ಶೆಣೈ
ನಿವೃತ್ತ ಸರಕಾರಿ ಉದ್ಯೋಗಿ

ಹರ್ಷಿತ್‌ ಪಿಂಡಿವನ

ಟಾಪ್ ನ್ಯೂಸ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.