ಜಿಲ್ಲಾ ಕೇಂದ್ರ ಆಗುವ ನಿರೀಕ್ಷೆಯಲ್ಲಿ ಪುತ್ತೂರು


Team Udayavani, Apr 23, 2018, 1:13 PM IST

23-April-12.jpg

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಅನಂತರ ಸ್ಥಾನದಲ್ಲಿ ಪುತ್ತೂರು ಪಟ್ಟಣವಿದೆ. ವಿಧಾನಸಭಾ ಕ್ಷೇತ್ರವಾಗಿ ಪುತ್ತೂರು ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಹಣಕಾಸು, ಕೃಷಿ, ವಾಣಿಜ್ಯ ಬೆಳೆಗಳು, ಸಾಂಸ್ಕೃತಿಕ- ಹೀಗೆ ಹಲವು ರಂಗಗಳಲ್ಲಿ ಕರಾವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಪುತ್ತೂರು ಬೆಳೆಯುತ್ತಿರುವಂತೆ ಈ ಕ್ಷೇತ್ರದ ಬೇಡಿಕೆಗಳೂ ಬೆಳೆಯುತ್ತಿವೆ. 

ಗ್ರಾಮಾಂತರ ಜಿಲ್ಲೆ
1 ಪುತ್ತೂರಿನ ಆಸುಪಾಸಿನ ತಾಲೂಕುಗಳನ್ನು ಸೇರಿಸಿ ಜಿಲ್ಲೆಯಾಗಿ ಘೋಷಿಸಬೇಕು ಎಂಬುದು ಬಹುಕಾಲದ ಬೇಡಿಕೆ. ಇದರಿಂದ ಸುಳ್ಯ, ಬೆಳ್ತಂಗಡಿ ಗ್ರಾಮದವರು ಕಂದಾಯ, ಇನ್ನಿತರ ಕೆಲಸಕ್ಕೆ ಮಂಗಳೂರಿಗೆ ಅಲೆದಾಟ ತಪ್ಪುತ್ತದೆ.

ಪುತ್ತೂರಿನಲ್ಲಿ ಎಸ್ಪಿ ಕಚೇರಿ
2 ಮಂಗಳೂರು ಕಮಿಷನರೆಟ್‌ ವ್ಯಾಪ್ತಿಗೆ ಒಳಪಡುತ್ತದೆ. ತನಗೆ ಅಧಿಕಾರವೇ ಇಲ್ಲದ ಮಂಗಳೂರಿನಲ್ಲಿ ಎಸ್‌ಪಿಗೆ ಕಚೇರಿ ಯಾಕೆ? ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಸ್ಥಳಾಂತರಿಸಬೇಕು. ಸೂಕ್ಷ್ಮ ಸಂದರ್ಭಗಳಲ್ಲಿ ಇದು ಸಹಕಾರಿಯೂ ಆಗುತ್ತದೆ.

ಎಂಡೋ ಸಂತ್ರಸ್ತರು
3 ತಮ್ಮದಲ್ಲದ ತಪ್ಪಿಗೆ ಎಂಡೋ ಬಾಧಿತರು ನೋವು ಅನುಭವಿಸುತ್ತಿದ್ದಾರೆ. ಸರಕಾರಿ ಕೃಪಾಪೋಷಿತ ನೋವಿದು. ಕನಸು ತುಂಬಿರಬೇಕಿದ್ದ ಕಂಗಳಲ್ಲಿ ನೋವು ಇಣುಕುತ್ತಿದೆ. ಇವರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಅಗತ್ಯ.

ಬಾವಿಯೊಳಗಿನ ಎಂಡೋ ವಿಷ
4 ಕೇರಳ ಗೇರು ಪ್ಲಾಂಟೇಷನ್‌ನ ಬಾವಿಯಲ್ಲಿ ಎಂಡೋಸಲ್ಫಾನ್‌ ತುಂಬಿಸಿ ಮುಚ್ಚಿರುವುದರಿಂದ ಗಡಿ ಗ್ರಾಮ ಗಾಳಿಮುಖದ ಬಾವಿ, ಬೋರ್‌ ವೆಲ್‌ ನೀರು ಕಲುಷಿತವಾಗಿದೆ. ಇದರ ಪರಿಣಾಮ ಘೋರವಾದೀತು. ಪೂರಕ ಕಾರ್ಯಾಚರಣೆ ಅಗತ್ಯ.

ಮುಳುಗು ಸೇತುವೆ
5 ಬ್ರಿಟಿಷರ ಕಾಲದ ಮುಳುಗು ಸೇತುವೆಗಳು ಇನ್ನೂ ಪುತ್ತೂರು ತಾಲೂಕಿನಲ್ಲಿವೆ. ಪ್ರತಿ ಮಳೆಗಾಲದಲ್ಲಿ ಸದಾ ಸುದ್ದಿಯಲ್ಲಿರುವ ಮುಳುಗು ಸೇತುವೆಗಳ ಪೈಕಿ ಚೆಲ್ಯಡ್ಕಕ್ಕೆ ಮೊದಲ ಸ್ಥಾನ. ಇವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ.

ವೈದ್ಯಕೀಯ ಕಾಲೇಜು
6 ಪುತ್ತೂರಿಗೆ ವೈದ್ಯಕೀಯ ಕಾಲೇಜಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಜಾಗವನ್ನು ಗೊತ್ತುಪಡಿಸಲಾಗಿದೆ. ಆದರೆ ಇದಕ್ಕೆ ಮೊದಲು 100 ಬೆಡ್‌ಗಳ ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ಗಳಿಗೆ ಏರಿಸುವ ಕೆಲಸವೂ ಆಗಬೇಕು.

ಪುತ್ತೂರು ಪೇಟೆ ವಿಸ್ತರಿಸಿ
7 ಪುತ್ತೂರು ಪೇಟೆ ಎಂದರೆ ಜನ, ವಾಹನಗಳ ದಟ್ಟಣೆ. ಕಿರಿದಾದ ರಸ್ತೆ, ಅಕ್ರಮ ಕಟ್ಟಡ -ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಪೇಟೆಯನ್ನು ವಿಸ್ತರಿಸುವ ಅಗತ್ಯವಿದೆ. ಮುಂದಿನ ಯೋಜನೆಗಳನ್ನು ಗ್ರಾಮಾಂತರದತ್ತ ಅನುಷ್ಠಾನಿಸಬೇಕು.

ರೈಲ್ವೇ  ಮೇಲ್ಸೇತುವೆ 
8 ಪುತ್ತೂರು ಎಪಿಎಂಸಿ ಬಳಿಯ ರೈಲ್ವೇ ಮೇಲ್ಸೇತುವೆಯಿಂದ ಎಪಿಎಂಸಿಗೆ ಹೊರಟ ರೈತರು ರೈಲು ಹಳಿ ಬಳಿ ಕಾಯುವ ಅನಿವಾರ್ಯ ಆಗಾಗ ಸೃಷ್ಟಿಯಾಗುತ್ತದೆ. ಮೇಲ್ಸೇತುವೆ ನಿರ್ಮಿಸಿದರೆ ಎಲ್ಲರಿಗೂ ಪ್ರಯೋಜನ.

ಉಪ್ಪಿನಂಗಡಿ ನದಿ
9 ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ತುರ್ತು ಸಂದರ್ಭಕ್ಕಾಗಿ ಬೋಟ್‌ ನೀಡಲಾಗಿದೆ. ಆದರೆ ನಾವಿಕನೇ ಇಲ್ಲ. ಮಳೆಗಾಲದಲ್ಲಿ ಪಿಂಡ ಬಿಡಲೆಂದು ನದಿಗಿಳಿಯುವುದೂ ಅಪಾಯ. ನದಿ ಮಧ್ಯದ ತನಕ ಸೇತುವೆ ನಿರ್ಮಿಸುವ ಅಗತ್ಯ ಇದೆ.

ಪ್ರವಾಸೋದ್ಯಮ ಅಭಿವೃದ್ಧಿ
10 ಬೆಟ್ಟಂಪಾಡಿಯ ಬೆಂದ್ರ್ತೀರ್ಥ, ಕೋಟಿ- ಚೆನ್ನಯರ ಹುಟ್ಟೂರು ಪಡುಮಲೆ, ಬಿರುಮಲೆ ಗುಡ್ಡ, ಡಾ| ಕಾರಂತರ ಬಾಲವನ ಹೀಗೆ ಸಾಕಷ್ಟು ಕೇಂದ್ರಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಇವು ಪೂರಕ.

ಶಿವರಾಮ ಕಾರಂತ ರಂಗಮಂಟಪ
11 ನೆಲ್ಲಿಕಟ್ಟೆಯಲ್ಲಿ ಡಾ| ಶಿವರಾಮ ಕಾರಂತರು ಗೆಜ್ಜೆ ಕಟ್ಟಿದ ಶಾಲೆಯಿದೆ. ಇದರೊಳಗೆ ಅವರೇ ರೂಪಿಸಿದ ರಂಗ ವೇದಿಕೆಯಿದೆ. ಸದ್ಯ ಈ ಶಾಲೆ ಕುಸಿಯುವ ಹಂತದಲ್ಲಿದ್ದು, ರಂಗ ವೇದಿಕೆಯ ವೈಶಿಷ್ಟ é ಉಳಿಸಿಕೊಳ್ಳುವ ಅನಿವಾರ್ಯ ಇದೆ.

ಸವಣೂರು ಹೋಬಳಿ ಕೇಂದ್ರ
12 ಕಡಬ ತಾಲೂಕು ರಚನೆ ವೇಳೆ ಸವಣೂರು ಆಸುಪಾಸಿನ ಗ್ರಾಮಗಳನ್ನು ಪುತ್ತೂರು ತಾಲೂಕಿಗೆ ಸೇರಿಸಬೇಕು ಮತ್ತು ಸವಣೂರನ್ನು ಹೋಬಳಿ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಇದೆ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.