ಧರ್ಮಸ್ಥಳಕ್ಕೆ ಮೂಲ ಗದುಗಿನ ಭಾರತ?
Team Udayavani, May 23, 2018, 12:55 PM IST
ಬೆಳ್ತಂಗಡಿ: ಕವಿ ಕುಮಾರವ್ಯಾಸನ ವಂಶಸ್ಥರು ತಾಳೆಗರಿಗಳಲ್ಲಿ ಲೇಖೀಸಿರುವ ಕರ್ಣಾಟ ಭಾರತ ಕಥಾ ಮಂಜರಿ ಅಥವಾ ಗದುಗಿನ ಭಾರತ ಎನ್ನಲಾಗಿರುವ ತಾಡವೋಲೆ ಗ್ರಂಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮೂಲಪ್ರತಿ ಸಂರಕ್ಷಣೆಗಾಗಿ ನೀಡಿದ್ದು, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಇದು ಅಸಲಿಯೇ ಅಥವಾ ಮೂಲ ಪ್ರತಿ ಹೌದೇ, ಅಲ್ಲವೇ ಎನ್ನುವುದು ಪ್ರತಿಷ್ಠಾನದ ತಜ್ಞರು ಪರೀಕ್ಷಿಸಿದ ಬಳಿಕವಷ್ಟೇ ತಿಳಿದು ಬರಲಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕೋಳಿವಾಡದ, ಕವಿ ಕುಮಾರವ್ಯಾಸನ ಮೂಲ ವಂಶಸ್ಥರು ಎನ್ನಲಾದ ಅವಧೂತ ವೀರ ನಾರಾಯಣ ಪಾಟೀಲ್ ಹಾಗೂ ಚಂದ್ರಶೇಖರ ಡಿ. ಪಾಟೀಲ್ ತಮ್ಮ ಮೂಲ ನಿವಾಸದಲ್ಲಿದ್ದ ಈ ಗ್ರಂಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಡಾ| ಹೆಗ್ಗಡೆ ಅವರು ತಾಳೆಗರಿಗಳ ವೀಕ್ಷಣೆ ಮಾಡಿದ್ದಾರೆ.
ಆರು ತಿಂಗಳ ಕಾಲಾವಕಾಶ
ತಾಳೆಗರಿಗಳನ್ನು ಪೆಟ್ಟಿಗೆಯಲ್ಲಿಡಲಾಗಿದ್ದು, ಪ್ರತಿ ಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಅವುಗಳನ್ನು ಸಂರಕ್ಷಿಸಿ ಮತ್ತೆ ಹಿಂದಿರುಗಿಸಬೇಕಾಗಿದ್ದು, ಅಜೀರ್ಣಾ ವಸ್ಥೆಯಲ್ಲಿರುವುದರಿಂದ ಆರು ತಿಂಗಳ ಬಳಿಕ ಹಿಂದಿರುಗಿಸುವುದಾಗಿ ತಿಳಿಸಲಾಗಿದೆ. ತಾಳೆ ಗರಿಗಳು ಸುಮಾರು 700 ವರ್ಷಕ್ಕೂ ಹಿಂದಿನವಾಗಿದ್ದು, ಕವಿ ಕುಮಾರವ್ಯಾಸನೇ ಬರೆದಿರುವುದು ಎಂದು ವಂಶಸ್ಥರು ಹೇಳುತ್ತಿದ್ದಾರೆ. ಅದರೆ ನಿಖರವಾದ ಕಾಲಮಾನ ತಾಳೆ ಗರಿಗಳ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆ. ಒಂದು ವೇಳೆ ಕುಮಾರವ್ಯಾಸನೇ ಬರೆದ ಮೂಲ ಕೃತಿಯೇ ಆಗಿದ್ದಲ್ಲಿ ಅಮೂಲ್ಯ ಕೃತಿಯೊಂದರ ಸಂರಕ್ಷಣೆ ನಡೆದಂತೆ ಆಗಲಿದೆ.
ಪ್ರತಿಷ್ಠಾನದಿಂದ ಉಚಿತ ಸಂರಕ್ಷಣೆ
ಧರ್ಮಸ್ಥಳದ ಪ್ರಾಚ್ಯ ವಿದ್ಯಾಸಂಸ್ಥೆ ಶ್ರೀ ಮಂಜು ನಾಥೇಶ್ವರ ಸಂಶೋಧನ ಪ್ರತಿಷ್ಠಾನದಲ್ಲಿ ಪ್ರಾಚೀನ ಸಂರಕ್ಷಣೆಯನ್ನು ಮಾಡಿ ಮತ್ತೆ ಹಿಂದಿರುಗಿಸ ಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ವೆಚ್ಚ ಗಳನ್ನು ಪಡೆಯಲಾಗುವುದಿಲ್ಲ. ಈಗಾಗಲೇ ಹಲವು ಅತ್ಯಮೂಲ್ಯ ಗ್ರಂಥಗಳನ್ನು ಇಲ್ಲಿ ಸಂರಕ್ಷಿಸಿ ಇರಿಸಲಾಗಿದೆ.
ಗದುಗಿನ ಭಾರತದ ಸಂರಕ್ಷಣೆ
ಗದುಗಿನ ನಾರಣಪ್ಪ ಅಥವಾ ಕುಮಾರವ್ಯಾಸ ರಚಿಸಿರುವ ಕೃತಿಗಳಲ್ಲಿ ಪ್ರಸಿದ್ಧವಾದುದು ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂಬ ಇತರ ಹೆಸರುಗಳೂ ಇವೆ.
ಸುಮಾರು ಏಳುನೂರು ವರ್ಷಗಳ ಹಿಂದಿನ ಕೃತಿಯೆಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ತಾಳೆಗರಿ ಬರೆದಿರುವ ವರ್ಷವನ್ನು ಪರೀಕ್ಷೆಗೆ ಕಳುಹಿಸಿ ತಿಳಿಯಲಾಗುವುದು. ಕೃತಿಯನ್ನು ಶುಚಿಗೊಳಿಸುವುದು, ಸಂರಕ್ಷಣೆಯ ಕಾರ್ಯವನ್ನು ಪ್ರತಿಷ್ಠಾನದಿಂದ ನಡೆಸಿ, ಹಿಂದಿರುಗಿಸಲಾಗುತ್ತದೆ. 6 ತಿಂಗಳುಗಳ ಸಮಯಾವಕಾಶ ಕೋರಲಾಗಿದೆ.
-ಡಾ| ಎಸ್.ಆರ್. ವಿಘ್ನರಾಜ್, ಸಂಶೋಧನ ಪ್ರತಿಷ್ಠಾನದ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’