ಚಾರ್ಮಾಡಿ: 2 ದಿನ ಬಂದ್, ಮಂಗಳವಾರ ಸಂಜೆಯಿಂದಲೇ ಕಾಮಗಾರಿಗೆ ಚಾಲನೆ
Team Udayavani, Jun 13, 2018, 8:52 AM IST
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ್ದರೂ ನಿರ್ವಹಣ ಕಾಮಗಾರಿ ನಡೆಸಲು ಬುಧವಾರ, ಗುರುವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸೋಮವಾರ ಸಂಜೆ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ಮತ್ತೆ ಭಾರೀ ಪ್ರಮಾಣದಲ್ಲಿ ಒಟ್ಟು 9 ಕಡೆ ಕುಸಿದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮಂಗಳವಾರ ಸಂಜೆ ವೇಳೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಿ ಬಳಿಕ ಬಂದ್ ಮಾಡಲಾಯಿತು.
ಕಗ್ಗತ್ತಲ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆ, ಆಗಾಗ ಸಿಗುತ್ತಿರುವ ಮರ ಬಿದ್ದ, ಗುಡ್ಡ ಕುಸಿತದ ಸುದ್ದಿ. ವಾಹನಗಳಲ್ಲೇ ಬಾಕಿಯಾದ ಜನರಿಗೆ ಮೊಬೈಲ್ ಮೂಲಕ ಸಂಪರ್ಕಿಸಲು ನೆಟ್ವರ್ಕ್ ಸಮಸ್ಯೆ, ಹಸಿವು ನೀಗಿಸಲು ಆಹಾರವೂ ಇಲ್ಲದಂತಾಗಿತ್ತು. ಒಟ್ಟು 18 ಗಂಟೆಗಳ ಕಾಲ ಚಾರ್ಮಾಡಿ ಘಾಟ್ನಲ್ಲಿ ಕಳೆಯುವಂತಾಯಿತು. ಬೆಳಗ್ಗೆ ಸುಮಾರು 5 ಗಂಟೆಗೆ ಕುಸಿದ ಗುಡ್ಡದಲ್ಲಿದ್ದ ಮರಗಳನ್ನು ಕಡಿದು, 4 ಜೆಸಿಬಿಗಳಿಂದ ಕಾರ್ಯಾಚರಣೆ ನಡೆಸಲಾಯಿತು. ದೊಡ್ಡ ಬಂಡೆ ಕುಸಿದಿದ್ದು, ತೆರವು ಮಾಡಲಾಗಿದೆ. ಸುಮಾರು 1.30ರ ವೇಳೆಗೆ ರಸ್ತೆ ಬಳಕೆಗೆ ಲಭ್ಯವಾದರೂ ಮತ್ತೆ ಸಣ್ಣ ಮಟ್ಟಿನ ಕುಸಿತವಾಯಿತು. ಬಳಿಕ ಜೆಸಿಬಿ ಬಳಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ