ರಸ್ತೆ ಪರವಾಗಿಲ್ಲ ; ಗುಡ್ಡೆಗಳದ್ದೇ ಆತಂಕ


Team Udayavani, Jun 14, 2018, 6:00 AM IST

m-28.jpg

ಸುಳ್ಯ: ಚಾರ್ಮಾಡಿ ಘಾಟಿ ಗುಡ್ಡ ಕುಸಿದು ಸಂಚಾರ ನಿರ್ಬಂಧದ ಬೆನ್ನಲ್ಲೇ, ಬದಲಿ ಮಾರ್ಗಗಳಲ್ಲಿ ಒಂದಾದ ಮಂಗಳೂರು- ಸಂಪಾಜೆ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೊಂಚ ಒತ್ತಡ ಹೆಚ್ಚಾಗಿದೆ. ಒಂದೆಡೆ ಹೆಚ್ಚಿದ ವಾಹನಗಳ ಓಡಾಟ ಹಾಗೂ ಕೊಡಗಿನ ಸುತ್ತ ಸುರಿಯುತ್ತಿರುವ ಧಾರಾಕಾರ ಮಳೆ ಈ ರಸ್ತೆಯ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಡಿಕೇರಿಯಿಂದ ಸುಳ್ಯದವರೆಗೆ ಪ್ರಯಾಣಿಸಿದ ಉದಯವಾಣಿ, ಕೊಂಚ ಎಚ್ಚರಿಕೆಯಿಂದ ಚಲಿಸುವುದು ಸೂಕ್ತ. ಇಲ್ಲಿಯೂ ಕೆಲವು ಅಪಾಯಕಾರಿ ಎನಿಸುವ ಸ್ಥಳಗಳಿದ್ದು, ರಸ್ತೆಗೆ ತಾಗಿರುವ ಆಳೆತ್ತರದ ಗುಡ್ಡೆಗಳು ತತ್‌ಕ್ಷಣ ಬೀಳುತ್ತವೆ ಅನ್ನುವಂತಿದೆ. 

ಅಪಾಯಕ್ಕೆ ಆಹ್ವಾನ
ಸಂಪಾಜೆ-ಮಡಿಕೇರಿ ರಸ್ತೆ ಏರು- ಇಳಿಮುಖ, ತಿರುವು ರಸ್ತೆಯಾಗಿದೆ. ಇಲ್ಲಿ, ಹಲವು ಕಡೆಗಳಲ್ಲಿ ಧರೆಯ ಮಣ್ಣಿನ ಪದರ ಶಿಥಿಲಗೊಂಡು ಬೃಹತ್‌ ಗಾತ್ರದ ಮರಗಳು ರಸ್ತೆ ಕಡೆ ವಾಲಿವೆ. ಅದನ್ನು ತೆರವುಗೊಳಿಸದೇ ಇದ್ದಲ್ಲಿ, ಚಾರ್ಮಾಡಿ ಘಾಟಿ ಸ್ಥಿತಿ ಇಲ್ಲಿಗೂ ಬಂದೊದಗುವ ಸಾಧ್ಯತೆ ಹೆಚ್ಚಿದೆ.

ಗುಡ್ಡ ಕುಸಿತದ ಭೀತಿ
ಜೋಡುಪಾಲ ಬಳಿಯ ತಿರುವೊಂದರ ಗುಡ್ಡದಲ್ಲಿ ಬೃಹತ್‌ ಗಾತ್ರದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಅಬ್ಬಿ ಕೊಲ್ಲಿ ಜಲಪಾತದಿಂದ ಅರ್ಧ ಕಿ.ಮೀ ದೂರದಲ್ಲಿ ಗುಡ್ಡ ಆಪಾಯದ ಸ್ಥಿತಿಯಲ್ಲಿದೆ. ಮಡಿಕೇರಿ ಪೇಟೆಗೆ ಕೆಲ ಕಿ.ಮೀ. ಸನಿಹದಲ್ಲಿರುವ ಮದೆನಾಡು ಬಳಿ ಪ್ರತಿ ಬಾರಿ ಗುಡ್ಡ ಕುಸಿತ ಆಗುತ್ತಿದ್ದು, ಅಲ್ಲಿ ತಿರುವೊಂದರ ಬಳಿ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ಅದೂ ಬಿರುಕು ಬಿಟ್ಟಿದೆ. 

ಬೃಹತ್‌ ಹೊಂಡಗಳು
ಸಂಪಾಜೆ ಗ್ರಾ.ಪಂ. ಸುಸ್ವಾಗತದ ಫಲಕ ಇರುವಲ್ಲಿ ರಸ್ತೆಯಲ್ಲಿ ಬೃಹತ್‌ ಹೊಂಡಗಳಿವೆ. ಇದರಿಂದ ವಾಹನ ಗಳು ಸಂಚರಿಸಲು ಪರದಾಡುತ್ತಿವೆ. ಆರು ವರ್ಷದ ಹಿಂದೆಯಷ್ಟೇ ಹೊಸ ರಸ್ತೆ ನಿರ್ಮಿಸಿದ್ದರೂ ಬಹುಭಾಗದಲ್ಲಿ ಡಾಮರು ಬಿರುಕು ಬಿಟ್ಟಿದೆ. 

ಇಕ್ಕೆಲೆಗಳಲ್ಲಿ  ಚರಂಡಿ ಇಲ್ಲ
ಮಡಿಕೇರಿಯಿಂದ ಸಂಪಾಜೆ ಕಡೆಗೆ ರಸ್ತೆ ಇಳಿಮುಖದಂತಿದೆ. ಹಾಗಾಗಿ ಸೂಕ್ತ ಚರಂಡಿ ಇಲ್ಲದ ಕಾರಣ, ಮಳೆ ನೀರು ರಸ್ತೆಯಲ್ಲಿ ಕೆಳಭಾಗಕ್ಕೆ ಹರಿ ಯುತ್ತಿದೆ. ಬೃಹತ್‌ ಗಾತ್ರದ ಬಂಡೆ ಕಲ್ಲುಗಳು ರಸ್ತೆ ಸನಿಹದಲ್ಲೇ ಇದ್ದು, ತೆರವುಗೊಳಿಸಿಲ್ಲ. ಇಕ್ಕೆಲೆಗಳಲ್ಲಿ ಕೆಸರು ತುಂಬಿದೆ. ಇಂತಹ ಸ್ಥಿತಿ ಹತ್ತಕ್ಕಿಂತ ಮೇಲ್ಪಟ್ಟ ತಿರುವುಗಳಲ್ಲಿ ಕಾಣ ಸಿಗುತ್ತದೆ. ಅಪಾಯಕಾರಿ ತಿರುವುಗಳ ಬಳಿ ಸೂಕ್ತ ಫಲಕದ ಕೊರತೆ ಇದೆ ಎನ್ನುತ್ತಾರೆ ಸಮೀಪದ ರಸ್ತೆ ಬದಿಯ ವ್ಯಾಪಾರಿ ರಮೇಶ್‌.

ತಡೆ ಗೋಡೆ ಇಲ್ಲ ಸಂಪಾಜೆಯಿಂದ ಮಡಿಕೇರಿ ತನಕದ 25 ಕಿ.ಮೀ. ರಸ್ತೆಗೆ ಎಲ್ಲೂ  ತಡೆಗೋಡೆ ಇಲ್ಲ. ಮದೆನಾಡಿನ ಬಳಿ ಹಲವು ಬಾರಿ ಗುಡ್ಡ ಕುಸಿತ ಸಂಭವಿಸಿದೆ. ಇಷ್ಟಾದರೂ ತಡೆಗೋಡೆ ನಿರ್ಮಿಸುವ ಅಥವಾ ಮರ ತೆರವುಗೊಳಿಸಿ, ರಸ್ತೆ ಅಗಲಗೊಳಿ ಸುವ ಕಾರ್ಯ ಆಗಿಲ್ಲ ಎನ್ನುತ್ತಾರೆ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನ ಚಾಲಕ ಮಹಂತೇಶ್‌.

ಐದು ವರ್ಷಗಳ ಹಿಂದೆ ಕುಸಿತ
ನಿರಂತರ ಮಳೆಯಿಂದ ಅಂತರ್ಜಲ ಹೆಚ್ಚಾಗಿ ಮಣ್ಣು ಸಡಿಲಗೊಂಡು 2013 ರ ಆಗಸ್ಟ್‌ನಲ್ಲಿ ಮಡಿಕೇರಿ-ಸಂಪಾಜೆ ರಸ್ತೆಯ ಕೊಯನಾಡಿನಲ್ಲಿ 200 ಮೀಟರ್‌ನಷ್ಟು ರಸ್ತೆ ಭೂ ಕುಸಿತಗೊಂಡಿತ್ತು. ರಸ್ತೆ 5 ಅಡಿ ಆಳಕ್ಕೆ ಕುಸಿದಿತ್ತು. 

ರಾಜ್ಯ ಹೆದ್ಧಾರಿ ಮೇಲ್ದರ್ಜೆಗೆ
ಮಾಣಿಯಿಂದ-ಮೈಸೂರು ತನಕದ 212 ಕಿ.ಮೀ. ರಾಜ್ಯ ಹೆದ್ಧಾರಿ 88 ಅನ್ನು ವಿಸ್ತರಿಸಿ, ಮೂರು ಹಂತದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. 2009 ರಲ್ಲಿ ಕಾಮಗಾರಿ ಪ್ರಾರಂಭಗೊಂಡು 2015 ಕ್ಕೆ ಪೂರ್ಣ ರಸ್ತೆ ನಿರ್ಮಾಣವಾಗಿತ್ತು. ಎರಡನೆ ಹಂತದ ಕುಶಾಲನಗರ -ಸಂಪಾಜೆ ರಸ್ತೆ 2012 ರಲ್ಲಿ ಪೂರ್ಣಗೊಂಡು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಸೇರ್ಪಡೆಗೊಂಡಿತ್ತು.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.