ಈ ತಾಯಿ ಮಗುವನ್ನೂ ಗೆದ್ದಳು, ಜಗವನ್ನೂ ಗೆದ್ದಳು !


Team Udayavani, Jun 24, 2018, 6:00 AM IST

ss-30.jpg

ಕಾಣಿಯೂರು: ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು ಮತ್ತೆ ಸತ್ಯ ಮಾಡಿದ್ದಾರೆ ಪುತ್ತೂರು ತಾಲೂಕಿನ ದೋಳ್ಪಾಡಿಯ ಪ್ರಮೀಳಾ. ಶೇ.  81ರಷ್ಟು ಶ್ರವಣದೋಷವುಳ್ಳ ಶೋಭಿತ್‌ ಇಂದು ಎಲ್ಲರೊಂದಿಗೆ ಮಾತನಾಡಬಲ್ಲ, ಸಂವಾದಿಸಬಲ್ಲ. ಇಂಥದೊಂದು ಅಚ್ಚರಿಯ ಹಿಂದಿರುವ ಶಕ್ತಿ ತಾಯಿ. ಇಂಥದೊಂದು ಆದರ್ಶಕ್ಕೆ ಮಾದರಿಯಾಗಲು ಪ್ರಮೀಳಾ ಅಸ್ತ್ರವನ್ನಾಗಿಸಿಕೊಂಡಿದ್ದು ತಮ್ಮ ಸಹನೆ ಮತ್ತು ತ್ಯಾಗ. ಹಾಗಾಗಿ ಶೋಭಿತ್‌ ಇಂದು ಜಗತ್ತಿನೊಂದಿಗೆ ಸಂವಾದಿಸಬಲ್ಲ. ಅದರೊಂದಿಗೇ ತಾಯಿಯೊಬ್ಬಳು ಕಷ್ಟವಷ್ಟೇ ಅಲ್ಲ; ಜಗವನ್ನೇ ಗೆಲ್ಲಬಹುದೆಂದೂ ಸಾಬೀತುಪಡಿಸಿದ್ದಾರೆ ಪ್ರಮೀಳಾ. ಮಾತು, ವ್ಯವಹಾರ, ಬುದ್ಧಿವಂತಿಕೆಯಲ್ಲಿ ಸಹಜ ಮಕ್ಕಳಂತಾದ ಶೋಭಿತ್‌, ದೋಳ್ಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗಿದ್ದಾನೆ.  

ದೋಳ್ಪಾಡಿಯ ಜಯ
ಚಂದ್ರ ಗೌಡ ಬೆಂಗಳೂರಿನಲ್ಲಿ ಉದ್ಯಮಿ. ಹಳ್ಳಿಗಾಡಿನಲ್ಲಿ ಕಲಿತ ತಾಯಿ ಪ್ರಮೀಳಾ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಶೋಭಿತ್‌ ಈ ದಂಪತಿಯ ಪ್ರಥಮ ಪುತ್ರ.

ತಾಯಿಯ ಆತಂಕ
ಶೋಭಿತ್‌ ಜನಿಸಿ ಸುಮಾರು ಎಂಟು ತಿಂಗಳಾಗುವಾಗ ತಾಯಿಗೆ ಅವನ ವರ್ತನೆಯ ಬಗ್ಗೆ ಸಂಶಯ ಮೂಡಿತ್ತು. ಆದರೆ ಹೇಳಿಕೊಳ್ಳಲು, ವೈದ್ಯರಿಗೆ ತೋರಿಸಲು ಧೈರ್ಯವಿರಲಿಲ್ಲ. ಒಂದು ವರ್ಷ ಮೂರು ತಿಂಗಳಾಗುವಾಗ ಏನೂ ಕಿವಿ ಕೇಳಿಸುವುದಿಲ್ಲ ಎಂಬುದು ತಿಳಿಯಿತು. ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಯ ಶ್ರವಣದೋಷ ತಜ್ಞರಿಗೆ ತೋರಿಸಿದಾಗ ಒಂದು ಕಿವಿ ಶೇ. 90ರಷ್ಟು, ಇನ್ನೊಂದು ಶೇ. 80ರಷ್ಟು ದೋಷಹೊಂದಿರುವುದನ್ನು ದೃಢಪಡಿಸಿದರು. ಕೂಡಲೇ ಶಸ್ತ್ರ‌ ಚಿಕಿತ್ಸೆ ಮಾಡಿ, ಶ್ರವಣೋಪಕರಣ ಜೋಡಿಸಿದರೆ ಮಗು ಮಾತು ಕಲಿತೀತು; ಆದರೆ ಅದು ನಿಮ್ಮ ಪ್ರಯತ್ನವನ್ನೇ ಅವಲಂಬಿಸಿದೆ ಎಂದಿದ್ದರು. ಸುಮಾರು 10 ಲಕ್ಷ ರೂ.ಗಿಂತ ಹೆಚ್ಚು ಖರ್ಚಾದೀತೆಂದು ಹೇಳಿದ್ದರು. ಆದರೆ ಅಷ್ಟೊಂದು ಹಣವನ್ನು ಹೊಂದಿಸಿಕೊಳ್ಳಲು ದಂಪತಿಗೆ ಒಂದು ವರ್ಷ ಬೇಕಾಯಿತು.

ದಕ್ಷಿಣ ಕನ್ನಡ ಕ್ಷೇತ್ರದ ಸಂಸದರ ಮೂಲಕ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪ್ರಧಾನ ಮಂತ್ರಿಯವರ ನಿಧಿಯಿಂದ 4 ಲಕ್ಷ ರೂ. ಮತ್ತು ಮುಖ್ಯಮಂತ್ರಿಯವರ ನಿಧಿಯಿಂದ 1.5 ಲಕ್ಷ ರೂ. ಲಭಿಸಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದು ಒಂದು ಕಿವಿಗೆ ಶ್ರವಣೋಪಕರಣ ಜೋಡಿಸಿದರು. ಒಟ್ಟು ಆಸ್ಪತ್ರೆಯ ಖರ್ಚು 15 ಲಕ್ಷ ರೂ. ಮಿಕ್ಕಿತ್ತು.

ಈಗ ಶೋಭಿತ್‌ಗೆ 6 ವರ್ಷ ವಯಸ್ಸು. ದೋಳ್ಪಾಡಿ ಸರಕಾರಿ ಹಿ.ಪ್ರಾ. ಶಾಲೆಗೆ ಸೇರಿದ್ದಾನೆ. ಒಂದೆರಡು ಅಕ್ಷರಗಳ ಉಚ್ಚಾರ ವ್ಯತ್ಯಾಸ ಬಿಟ್ಟರೆ, ಕನ್ನಡ ಸ್ಪಷ್ಟವಾಗಿ ಮಾತನಾಡಬಲ್ಲ. ಇಂಗ್ಲಿಷ್‌ ಚೆನ್ನಾಗಿ ಗೊತ್ತಿದೆ. ತಾಯಿ ಪ್ರಮೀಳಾ ಅವರನ್ನು ಶಾಲೆಗೆ ಆಹ್ವಾನಿಸಿ ಯಶೋಗಾಥೆಯನ್ನು ಶಿಕ್ಷಕರಾದ ಪ್ರಕಾಶ್‌ ಮತ್ತು ಸಂದೇಶ್‌ ಅವರ ಸಹಕಾರದಲ್ಲಿ ಬಿ.ಐ.ಇ.ಆರ್‌.ಟಿ. ತಾರಾನಾಥ ಪಿ. ದಾಖಲಿಸುತ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಶ್ರವಣೋಪಕರಣ ಬದಲಿಸಬೇಕಿದೆ. ಇದಕ್ಕೆ ಸುಮಾರು 4 ಲಕ್ಷ ರೂ. ವೆಚ್ಚ ತಗಲಬಹುದು. ಈಗ ಮತ್ತೆ ಈ ಹಣ ಹೇಗೆ ಭರಿಸುವುದು ಎಂಬ ಚಿಂತೆ ದಂಪತಿಯದ್ದು.

ತಪಸ್ಸು ಆರಂಭವಾಗಿದ್ದು ಈಗ
ವೈದ್ಯರು ತಮ್ಮ ಕೆಲಸ ಮುಗಿಸಿದರು. ಇನ್ನೇನಿದ್ದರೂ ತಾಯಿಯದ್ದು. ಮಾತಿನ ಥೆರಪಿಯವರು ಪ್ರಮೀಳಾರಿಗೆ ಮಗುವಿಗೆ ಮಾತು ಕಲಿಸುವುದನ್ನು ಹೇಳಿಕೊಟ್ಟರು. ಅದನ್ನು ತಪಸ್ಸಿನಂತೆ ಪಾಲಿಸಿ, ಮಗುವಿನೊಂದಿಗೆ 24 ಗಂಟೆಯೂ ಕಣ್ಗಾವಲಾಗಿ ಕೆಲಸ ಮಾಡಿದರು. ಉದ್ಯೋಗ ತ್ಯಜಿಸಿ ಎರಡೂವರೆ ವರ್ಷದ ಮಗುವಿಗೆ ಭಾಷೆ ಕಲಿಸತೊಡಗಿದರು. ಮಗುವಿಗೆ 5 ವರ್ಷವಾದಾಗ ಎಲ್‌ಕೆಜಿಗೆ ಸೇರಿಸಿದರು. ಯು.ಕೆ.ಜಿ.ಗೆ ಬರುವಷ್ಟರಲ್ಲಿ ಶೋಭಿತ್‌ ಎಲ್ಲರಂತೆ ಮಾತನಾಡತೊಡಗಿದ್ದ. ಈ ಮಧ್ಯೆ
ಮತ್ತೂಂದು ಮಗುವಿಗೆ ಜನ್ಮಕೊಟ್ಟ ಪ್ರಮೀಳಾ, ಹಳ್ಳಿಗೆ ಹಿಂದಿರುಗಿದರೆ ಪತಿ ಬೆಂಗಳೂರಿನಲ್ಲಿ ವ್ಯವಹಾರ ಮುಂದುವರಿಸಿದರು. 

ಮಗುವಿನ ಬೆಳವಣಿಗೆಯನ್ನು ತಾಯಿಯ ಮೂಲಕ ಕೇಳುವಾಗ ಕಠಿನ ಪರಿಶ್ರಮವಿದ್ದರೆ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದು ಮನವರಿಕೆಯಾಗುತ್ತದೆ. ಈ ಯಶೋಗಾಥೆ ಎಲ್ಲ ತಾಯಂದಿರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.
ತಾರಾನಾಥ ಪಿ. ಸವಣೂರು, ಬಿ.ಐ.ಇ. ಆರ್‌.ಟಿ

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.