ಸಂಚಾರಕ್ಕೆ  ತೆರೆದುಕೊಂಡಿತು ಮುರ ರೈಲ್ವೇ ಮೇಲ್ಸೇತುವೆ


Team Udayavani, Jun 24, 2018, 10:57 AM IST

24-june-6.jpg

ನೆಹರೂನಗರ: ಎರಡು ವರ್ಷಗಳ ಕಾಮಗಾರಿ ಬಳಿಕ ಮುರ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ತೆರೆದುಕೊಂಡಿದೆ. ಅಧಿಕೃತ ಉದ್ಘಾಟನೆ ಇಲ್ಲದ ಕಾರಣ ವಾಹನಗಳ ಸಂಚಾರ ಪ್ರಾರಂಭಗೊಂಡಿದೆ. ಒಟ್ಟು 2.25 ಕೋಟಿ ರೂ. ವೆಚ್ಚದಲ್ಲಿ ಮುರ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆದಿದೆ. ಮೊದಲಿದ್ದ ದಾರಿಯನ್ನು ಮುಚ್ಚಿ, ಬಳಿಯಲ್ಲೇ ಬೃಹತ್‌ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಮೊದಲು ಇಲ್ಲಿ ಗೇಟ್‌ ಹಾಕಲಾಗಿದ್ದು, ಓರ್ವ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಇದೀಗ ಗೇಟ್‌ ಮುಚ್ಚಿದ್ದು, ಸಿಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ವಾಹನ ಸಂಚಾರಕ್ಕೆ ಮುರ ರೈಲ್ವೇ ಮೇಲ್ಸೇತುವೆ ಮುಕ್ತವಾಗಿದ್ದು, ಗೇಟ್‌ನ ಅಗತ್ಯವೇ ಇಲ್ಲ.

ಆರು ಮೇಲ್ಸೇತುವೆ
ಪುತ್ತೂರು ಆಸುಪಾಸಿಗೆ ಒಟ್ಟು 6 ಮೇಲ್ಸೇತುವೆಯನ್ನು ಮಂಜೂರು ಮಾಡಿ ರೈಲ್ವೇ ಇಲಾಖೆ ಆದೇಶ ಹೊರಡಿಸಿತ್ತು. ಇದರಲ್ಲಿ ಕೋಡಿಂಬಾಳ, ಎಡಮಂಗಲ, ಮುರ, ಕಲ್ಲಡ್ಕ, ಅಮ್ಟೂರು, ಸುಂಕದಕಟ್ಟೆ ಮೇಲ್ಸೇತುವೆಗಳು ಸೇರಿವೆ. ಇದರಲ್ಲಿ ಪುತ್ತೂರಿನ ಮುರ ರೈಲ್ವೇ ಮೇಲ್ಸೇತುವೆಗೆ 2 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಈ 2 ಕೋಟಿ ರೂ. ಅನುದಾನ ಕಾಮಗಾರಿಗೆ ಸಾಕಾಗಲಿಲ್ಲ. ಈಗಿನ ಲೆಕ್ಕಾಚಾರದಲ್ಲಿ ಒಟ್ಟು 2.25 ಕೋಟಿ ರೂ. ಬಳಕೆ ಆಗಿದೆ.

ಎಪಿಎಂಸಿ ರಸ್ತೆ ಹಾಗೂ ವಿವೇಕಾನಂದ ಕಾಲೇಜು ರಸ್ತೆ ರೈಲ್ವೇ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಹಲವು ಬಾರಿ ಬೇಡಿಕೆ ಮುಂದಿಡಲಾಗಿತ್ತು. ಆದರೆ ಈ ಎರಡೂ ಕಾಮಗಾರಿಗಳಿಗೆ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಇದರ ಬದಲಾಗಿ ಮುರ ರೈಲ್ವೇ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಮುರ ರೈಲ್ವೇ ಮೇಲ್ಸೇತುವೆ ತೀರಾ ಅಗತ್ಯವೇ ಆಗಿದೆ.

ಅನುಕೂಲ
ಮಾಣಿ- ಮೈಸೂರು ಹೆದ್ದಾರಿಯ ಮುರದಿಂದ ಕೆದಿಲ ಮಾರ್ಗವಾಗಿ ಸಾಗಿದರೆ ಮಾಣಿ- ಉಪ್ಪಿನಂಗಡಿ ನಡುವಿನ ಗಡಿಯಾರ ಬಳಿ ತಲುಪಬಹುದು. ಮಾಣಿ- ಮೈಸೂರು ರಸ್ತೆಯಲ್ಲಿ ತುರ್ತು ಅವಘಡ ಸಂಭವಿಸಿದ ಸಂದರ್ಭ, ಈ ರಸ್ತೆಯನ್ನು ಬದಲಿಗೆ ಬಳಸಿಕೊಳ್ಳಬಹುದು. ಬೊಳುವಾರು ಮಾರ್ಗವಾಗಿ ಅಥವಾ ಮಾಣಿ ಮಾರ್ಗವಾಗಿ ಸುತ್ತು ಬಳಸಿ ಸಾಗುವುದನ್ನು ತಪ್ಪಿಸಲು ಮುರ- ಕೆದಿಲ ಮಾರ್ಗವಾಗಿ ಸಾಗಿದರೆ ಸುಲಭ ಹಾಗೂ ಹತ್ತಿರದ ದಾರಿ. ಮಾತ್ರವಲ್ಲ ಕಡೇಶಿವಾಲಯ ಭಾಗಕ್ಕೆ ಹೋಗುವವರು ಮುರ- ಕೆದಿಲ ಮಾರ್ಗವನ್ನೇ ಬಳಸಿಕೊಳ್ಳುತ್ತಾರೆ. ಕೆಲ ವರ್ಷಗಳ ಮೊದಲು ಈ ಮಾರ್ಗವಾಗಿ ಬಸ್‌ ಸಂಚಾರವೂ ಇತ್ತು. ಆದರೆ ಈ ಪ್ರದೇಶ ಅಭಿವೃದ್ಧಿಗೆ ತೆರೆದುಕೊಳ್ಳದ ಕಾರಣ, ಬಸ್‌ ಸಂಚಾರ ಕ್ರಮೇಣ ಸ್ಥಗಿತಗೊಂಡಿತು. ಇದೀಗ ಮುರದಲ್ಲಿ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ತೆರೆದುಕೊಂಡಿದೆ. ಈ ಭಾಗದ ಅಭಿವೃದ್ಧಿಗೆ ರೈಲ್ವೇ ಮೇಲ್ಸೇತುವೆ ಪೂರಕ ಆಗುವ ಲಕ್ಷಣಗಳು ಇದೆ. 

ಹೀಗಿದೆ ಕಾಮಗಾರಿ
ಮುರ ರೈಲ್ವೇ ಗೇಟ್‌ ಬಳಿಯಲ್ಲೇ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಗೇಟ್‌ ಬಲಬದಿಯ ಗುಡ್ಡೆಯನ್ನು ಇನ್ನಷ್ಟು ಎತ್ತರಿಸಿ, ಕಾಮಗಾರಿ ನಡೆಸಲಾಗಿದೆ. ಮುರ ಹೆದ್ದಾರಿ ಬದಿಯಲ್ಲಿ ಹಾಗೂ ರೈಲ್ವೇ ಹಳಿ ಬದಿಯಲ್ಲಿ ಕಾಂಕ್ರೀಟ್‌ ಗೋಡೆ ಕಟ್ಟಲಾಗಿದೆ. ಇದರ ನಡುವೆ ಮಣ್ಣು ಹಾಕಲಾಗಿದೆ. ಮಣ್ಣು ಕುಸಿಯದಂತೆ ಕಲ್ಲು ಹಾಸಲಾಗಿದೆ. ಮೇಲ್ಭಾಗದಲ್ಲಿ ಸೇತುವೆ ನಿರ್ಮಿಸಿದ್ದು, ಇಲ್ಲಿಂದ ವಾಹನ ಸಾಗಬೇಕು.

ಇನಷ್ಟು ಕಾಮಗಾರಿ
ಮೇಲ್ಸೇತುವೆ ತುಂಬಾ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಇದರ ಒಂದು ಬದಿಯಲ್ಲಿ (ಹೆದ್ದಾರಿ) ದೊಡ್ಡ ಪ್ರಪಾತದಂತೆ ಭಾಸವಾಗುತ್ತಿದೆ. ಇಲ್ಲಿ ಅಪಾಯ ಸಂಭವಿಸಬಾರದು ಎಂಬ ದೃಷ್ಟಿಯಿಂದ ಒಂದಷ್ಟು ಕಂಬಗಳನ್ನು ನೆಡಲಾಗಿದೆ. ಆದರೆ ಈ ಕಂಬಗಳು ಅದೆಷ್ಟು ಸುರಕ್ಷಿತವೋ ಗೊತ್ತಿಲ್ಲ. ಇದರ ಜತೆಗೆ ನೆಟ್‌ ಅಳವಡಿಸಿದರೆ ಉತ್ತಮ ಎನ್ನುತ್ತಾರೆ ಸ್ಥಳೀಯರು.

 ಸರಳ ಉದ್ಘಾಟನೆ
ಮುರ ರೈಲ್ವೇ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಉದ್ಘಾಟನೆಗಾಗಿ ಕಾರ್ಯಕ್ರಮ ಮಾಡುವುದರಿಂದ ಹಣ ವೇಸ್ಟ್‌. ಆದ್ದರಿಂದ ಯಾವುದೇ ಕಾರ್ಯಕ್ರಮ ಮಾಡದೇ, ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. 2.25 ಕೋಟಿ ರೂ.ನಲ್ಲಿ ಮುರ ರೈಲ್ವೇ ಮೇಲ್ಸೇತುವೆ ನಿರ್ಮಾಣಗೊಂಡಿದೆ.
 - ಪಿ.ಕೆ. ನಾಯ್ಡು, ಪುತ್ತೂರು ರೈಲ್ವೇ ಸೆಕ್ಷನ್‌
    ಎಂಜಿನಿಯರ್‌

ವಿಶೇಷ ವರದಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.