ನಾಯಿ ಬಾಯಿಗೆ ಸಿಕ್ಕಿ ಗಾಯಗೊಂಡ ಮರಬೆಕ್ಕುಗಳ ರಕ್ಷಣೆ
Team Udayavani, Jul 16, 2018, 3:14 PM IST
ಪುಂಜಾಲಕಟ್ಟೆ : ನಾಯಿಯ ಬಾಯಿಗೆ ಸಿಕ್ಕಿ ಗಾಯಗೊಂಡ ನಾಲ್ಕು ಮರಬೆಕ್ಕುಗಳನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಮಂಗಳೂರು ಪಿಲಿಕುಳ ನಿಸರ್ಗ ಧಾಮಕ್ಕೆ ಹಸ್ತಾಂತರಿಸಿದ್ದಾರೆ. ಮಣಿನಾಲ್ಕೂರು ಗ್ರಾಮದ ಅಂಬೇಡ್ಕರ್ ಕಾಲನಿಯ ಪ್ರಕಾಶ್ ಅವರ ಅಡಿಕೆ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಮರಬೆಕ್ಕು ಕಾಣಸಿಕ್ಕಿತ್ತು. ಪ್ರಕಾಶ್ ಅವರ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಸಿಬಂದಿ ಮನೋಜ್ ಮತ್ತು ಉರಗತಜ್ಞ ಸ್ನೇಕ್ ಕಿರಣ್ ಅವರು ಸ್ಥಳಕ್ಕೆ ತೆರಳಿ ನಾಲ್ಕು ಮರಬೆಕ್ಕುಗಳನ್ನು ರಕ್ಷಣೆ ಮಾಡಿದ್ದಾರೆ.
ಮೂರು ಮರಿಗಳನ್ನು ಪೊದೆಯಲ್ಲಿಟ್ಟು ಆಹಾರಕ್ಕಾಗಿ ಅಡಿಕೆ ತೋಟದಲ್ಲಿದ್ದ ಹಲಸಿನ ಮರ ಏರಿದಾಗ ಮರಬೆಕ್ಕು ಹತೋಟಿ ತಪ್ಪಿ ಮರದಿಂದ ಕೆಳಗೆ ಬಿದ್ದು ನಾಯಿಯ ದಾಳಿಗೊಳಗಾಗಿ ಗಾಯಗೊಂಡಿತ್ತು. ಅವುಗಳ ರಕ್ಷಣೆಯ ಬಳಿಕ ತಾಯಿ ಬೆಕ್ಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಪಿಲಿಕುಳ ವನ್ಯಜೀವಿಗಳ ಧಾಮಕ್ಕೆ ಹಸ್ತಾಂತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?