ಸಂಪಾಜೆ: ತೋಟಕ್ಕೆ ಆನೆ ದಾಳಿ; ಕೃಷಿ ಹಾನಿ
Team Udayavani, Jul 23, 2018, 10:37 AM IST
ಸುಳ್ಯ: ದಕ್ಷಿಣ ಕನ್ನಡ – ಕೊಡಗು ಜಿಲ್ಲೆಯ ಗಡಿ ಗ್ರಾಮದ ಸಂಪಾಜೆ ಸಮೀಪದ ಲೈನ್ಕಜೆಯಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಹಾನಿ ಉಂಟು ಮಾಡಿವೆ.
ಕೃಷ್ಣ ಭಟ್ ಲೈನ್ಕಜೆ, ಪ್ರಭಾಕರ ಭಟ್ ಲೈನ್ಕಜೆ, ಸುರೇಶ್ ಭಟ್ ಲೈನ್ಕಜೆ ಅವರ ತೋಟಕ್ಕೆ ನುಗ್ಗಿದ ಆನೆ, ಬಾಳೆ, ತೆಂಗು, ಕೊಕ್ಕೊ ಕೃಷಿಯನ್ನು ನಾಶ ಮಾಡಿವೆ. ಎರಡು ದಿನಗಳ ಹಿಂದೆ ಆಲೆಟ್ಟಿ ಗ್ರಾಮದ ಕುಂಚಡ್ಕ ರಾಮಣ್ಣ ಅವರ ತೋಟಕ್ಕೂ ಕಾಡಾನೆ ದಾಳಿ ಮಾಡಿ, ಬೆಳೆ ನಷ್ಟ ಉಂಟು ಮಾಡಿತ್ತು.