ಬೆಳ್ತಂಗಡಿ: ಧಾರಾಕಾರ ಮಳೆ; 2 ಮನೆಗಳಿಗೆ ಹಾನಿ
Team Udayavani, Aug 17, 2018, 1:40 AM IST
ಬೆಳ್ತಂಗಡಿ: ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗುರುವಾರ ಹಲವೆಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಮನೆ ಕುಸಿತ, ಗುಡ್ಡ ಕುಸಿತ, ತೋಟಕ್ಕೆ ನೀರು ನುಗ್ಗಿದ, ರಸ್ತೆ ತಡೆಯಂತಹ ಘಟನೆಗಳು ಸಂಭವಿಸಿವೆ. ಲಾೖಲ ಸಮೀಪದ ಗಾಂಧಿನಗರ, ಗುರಿಂಗಾನ, ಪುತ್ರಬೈಲು ಸುತ್ತಮುತ್ತಲ ಪ್ರದೇಶದಲ್ಲಿ ಸೋಮಾವತಿ ನದಿಯ ನೀರು ಹರಿದು ಪ್ರವಾಹದ ಭೀತಿ ಎದುರಾಗಿದೆ. ಈ ಭಾಗದಲ್ಲಿ ಸುಮಾರು 15 ಮನೆಗಳಿಗೆ ನೀರು ನುಗ್ಗುವ ಭೀತಿಯಿದೆ. ಜತೆಗೆ ಗುರಿಪಳ್ಳದ ಇನ್ನೊಂದು ಬದಿಯನ್ನು ಸಂಪರ್ಕಿಸುವ ಸೇತುವೆಯೂ ಮುಳುಗಡೆಯಾಗಿತ್ತು.
ಧರ್ಮಸ್ಥಳ-ಪುದುವೆಟ್ಟು ರಸ್ತೆಯಲ್ಲಿ ಮರ ಬಿದ್ದು, ಕೆಲವು ಹೊತ್ತುಗಳ ಕಾಲ ರಸ್ತೆ ತಡೆಯುಂಟಾಯಿತು. ಕಲ್ಮಂಜ ಗ್ರಾಮದ ನೀರಚಿಲುಮೆಯಲ್ಲಿ ಗುಡ್ಡ ಕುಸಿತದಿಂದ ರಾಮ ಅವರ ಮನೆಯ ಒಂದು ಬದಿಗೆ ಹಾನಿಯಾಗಿದೆ. ಸ್ಥಳಕ್ಕೆ ಪಿಡಿಒ ತಾರಾನಾಥ, ಪರಮೇಶ್ವರ, ಸದಸ್ಯರಾದ ಕೃಷ್ಣಪ್ಪ ಗುಡಿಗಾರ, ಚಂದನ್ ಅಲೆಕ್ಕಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಯ್ಯೂರಿನಲ್ಲಿ ಬಾಬು ಮುಗೇರ ಅವರ ಮನೆ ಕುಸಿದು, ಮನೆಯಲ್ಲಿದ್ದ ಓಬಯ್ಯ ಹಾಗೂ ಸುಕನ್ಯಾ ಅವರು ಗಾಯಗೊಂಡಿದ್ದಾರೆ. ಗುರಿಪಳ್ಳದಲ್ಲಿ ನದಿ ನೀರು ರಸ್ತೆಗೆ ಬಂದು ಅಲ್ಲಿನ ಕಿರುಸೇತುವೆ ಕೊಂಚ ಹೊತ್ತು ಮಳುಗಡೆಯಾಯಿತು. ಗುರುವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾದ ಪರಿಣಾಮ ಬೆಳ್ತಂಗಡಿ ಪೇಟೆಯಲ್ಲೂ ಜನ ಸಂಚಾರ ವಿರಳವಾಗಿತ್ತು. ಮಧ್ಯಾಹ್ನ ವೇಳೆಗೆ ಮಳೆಯ ತೀವ್ರತೆ ಕಡಿಮೆಯಾಯಿತು.
ಶಾಲೆಗೆ ರಜೆ ಇಲ್ಲ
ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದರೂ ಶಾಲೆಗಳಿಗೆ ರಜೆ ಕೊಡದಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ವಿದ್ಯಾಸಂಸ್ಥೆಗಳೇ ಮಕ್ಕಳಿಗೆ ರಜೆ ನೀಡಿವೆ. ತರಗತಿ ನಡೆದ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ