ಒಂದೇ ಗ್ರಾಮದಲ್ಲಿ ಕುಸಿತ ಪುನರಾವರ್ತನೆ
Team Udayavani, Aug 11, 2018, 10:02 AM IST
ಬೆಳ್ತಂಗಡಿ: ನೆರಿಯ ಗ್ರಾಮದ ಪಿಲತ್ತಡಿಯಲ್ಲಿ ಗುರುವಾರ ಸಂಭವಿಸಿದ ಹಠಾತ್ ಗುಡ್ಡ ಕುಸಿತ ಹತ್ತು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ನಡೆದ ಇಟ್ಟಾಡಿ ದುರಂತವನ್ನು ನೆನಪಿಸಿದೆ. ಪಿಲತ್ತಡಿಯ ಕುಸಿತ ಆ. 9ರಂದು ಸಂಭವಿಸಿದರೆ, ಇಟ್ಟಾಡಿ ಘಟನೆ 2008ರ ಆ. 12ರಂದು ನಡೆದಿತ್ತು. ಪ್ರಸ್ತುತ ಘಟನೆಯಿಂದ ಒಂದು ಕುಟುಂಬ ಸಂತ್ರಸ್ತವಾಗಿದೆ. ಅಂದು ಸುಮಾರು 35 ಕುಟುಂಬಗಳು ಸಮಸ್ಯೆಗೀಡಾಗಿದ್ದವು.
ರಾತ್ರಿ ಕುಸಿದ ಗುಡ್ಡ: ಇಟ್ಟಾಡಿ ಘಟನೆಯು ಮಧ್ಯರಾತ್ರಿ 12ರ ಸುಮಾರಿಗೆ ಸಂಭವಿಸಿತ್ತು. ಭೂಕಂಪವಾದಂತೆ ಭೀಕರ ಶಬ್ದ ಉಂಟಾಗಿ ಸುಮಾರು 1.5 ಕಿ.ಮೀ. ದೂರದಿಂದ ಇಡೀ ಗುಡ್ಡವೇ ಕುಸಿದು ಎಕರೆಗಟ್ಟಲೆ ಕೃಷಿ ಭೂಮಿಯನ್ನು ನಾಶ ಮಾಡಿತ್ತು. ಕುಸಿತದ ಭಯಾನಕ ಸದ್ದು ಸುಮಾರು ಒಂದೂವರೆ ತಾಸು ಮುಂದುವರಿದಿತ್ತು.
ಕುಸಿದ ಮಣ್ಣಿನಡಿ ಐದು ಮನೆಗಳು ಹೂತು ಹೋಗಿದ್ದವು. 3,500ದಷ್ಟು ಅಡಿಕೆ ಮರಗಳು, 150ಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿದ್ದವು. ಧರ್ಮಸ್ಥಳ ಸಂಪರ್ಕ ರಸ್ತೆ ನಾಶವಾಗಿತ್ತು. ಆಸುಪಾಸಿನ ಪ್ರದೇಶಗಳ ಮಂದಿಯೂ ಭಯಭೀತರಾಗಿ ಇಡೀ ರಾತ್ರಿ ಮನೆ ಹೊರಗೇ ಇದ್ದರು. ಗುಡ್ಡ ಕುಸಿತದಿಂದ ಮಣ್ಣಿನ ಜತೆಗೆ, ಕೆಸರು ನೀರು ಕೂಡ ಮನೆಗಳಿಗೆ ನುಗ್ಗಿತ್ತು. ಯಾವ ಕಾರಣದಿಂದ ಗುಡ್ಡ ಕುಸಿಯಿತು ಎಂದು ಯಾರಿಗೂ ಗೊತ್ತಾಗಿರಲಿಲ್ಲ. ಅದು ನಿಧಿ, ಬಳಿಕ ಅದು ಸಮುದ್ರ ಸೇರಿದೆ ಎಂದೆಲ್ಲ ಘಟನೆ ನಡೆದ ಬಳಿಕ ವದಂತಿ ಹಬ್ಬಿತ್ತು.
ಹೆಚ್ಚಿನ ಮಳೆ ಕಾರಣ
ಭೂಮಿಯ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಳೆ ನೀರು ಹರಿದರೆ ಈ ರೀತಿ ಗುಡ್ಡ ಕುಸಿತ ಉಂಟಾಗುತ್ತದೆ ಎನ್ನಲಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗಿ ಅದರ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ನಿರಂತರ ಹರಿಯುವುದರಿಂದ ಮಣ್ಣಿನ ಒಳಪದರ ಮೃದುವಾಗಿ, ಈ ರೀತಿ ಕುಸಿಯುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಗುಡ್ಡ ಭಾಗದ ಮರಗಳು ನಾಶವಾದರೆ ಮಣ್ಣಿನ ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಅಂತಹ ಮಣ್ಣು ಮೃದುವಾಗಿ ಒಮ್ಮೆಲೆ ಕುಸಿಯುತ್ತದೆ ಎನ್ನುವ ಅಭಿಪ್ರಾಯವೂ ಇದೆ. ಆದರೆ ಅಲ್ಲಿನ ಪರಿಸರ, ಘಟ್ಟದ ಸಾಲು, ಭೂಪದರ ಪರಿಶೀಲಿಸದೆ ನೋಡದೆ ಇದೇ ಕಾರಣಕ್ಕೆ ಗುಡ್ಡ ಕುಸಿದಿದೆ ಎಂದು ಹೇಳುವಂತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು