ಲಾೖಲ ಹಂಪ್ ಸಮಸ್ಯೆಗೆ ಮುಕ್ತಿ
Team Udayavani, Sep 3, 2018, 11:14 AM IST
ಬೆಳ್ತಂಗಡಿ: ಬೆಳ್ತಂಗಡಿ-ಉಜಿರೆ ಹೆದ್ದಾರಿಯ ಲಾೖಲದಲ್ಲಿ ಮಳೆ ನೀರು ಹರಿಯುವುದಕ್ಕೆ ಮೋರಿ ಅಳವಡಿಸಿದ ಸಂದರ್ಭ ರಸ್ತೆಯಲ್ಲಿ ಹಂಪ್ಸ್ ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಇದೀಗ ಶಾಸಕ ಹರೀಶ್ ಪೂಂಜ ನಿರ್ದೇಶನದಂತೆ ಹೆದ್ದಾರಿ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.
ಶನಿವಾರ ರಾತ್ರಿ ಹಂಪ್ಸ್ನ ಎರಡೂ ಬದಿಗಳಲ್ಲಿ ಜಲ್ಲಿ ಸಹಿತ ವೆಟ್ಮಿಕ್ಸ್ ಅಳವಡಿಸಲಾಗಿದ್ದು, ಪ್ರಸ್ತುತ ವಾಹನಗಳು ಸರಾಗವಾಗಿ ಸಾಗಲು ಅನುಕೂಲವಾಗಿದೆ. ಈ ಹಿಂದೆ ಮಳೆ ನೀರಿನಿಂದ ಲಾೖಲ ಜಂಕ್ಷನ್ ನಲ್ಲಿ ಕೃತಕ ನೆರೆಯ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರ ಸೂಚನೆಯಂತೆ ಮೋರಿ ನಿರ್ಮಿಸಲಾಗಿತ್ತು.
ಇದರಿಂದ ನೀರು ಹರಿಯುವ ಸಮಸ್ಯೆಗೆ ಪರಿಹಾರ ಲಭಿಸಿದರೂ ಮೋರಿ ನಿರ್ಮಿಸಿದ ಭಾಗದಲ್ಲಿ ಹಂಪ್ಸ್ ನಿರ್ಮಾಣವಾಗಿತ್ತು. ಇದರಿಂದ ವಾಹನದವರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಜತೆಗೆ ಇಲ್ಲಿ ಟ್ರಾಫಿಕ್ ಸಮಸ್ಯೆಯೂ ತಲೆದೋರಿತ್ತು. ಹೀಗಾಗಿ ಶಾಸಕರು ಅದರ ಎರಡೂ ಬದಿಗಳಲ್ಲೂ ವಾಹನ ವೆಟ್ಮಿಕ್ಸ್ ಹಾಕುವಂತೆ ತಿಳಿಸಿದ್ದರು.
ಪ್ರಸ್ತುತ ವೆಟ್ಮಿಕ್ಸ್ ಹಾಕಿ ಅದನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜತೆಗೆ ಈ ಭಾಗದ ಹೆದ್ದಾರಿಯ ಹೊಂಡಗಳಿಗೂ ತಾತ್ಕಾಲಿಕ ಪರಿಹಾರ ನೀಡುವಂತೆ ಶಾಸಕರು ಸೂಚಿಸಿದ್ದು, ಇದೀಗ ಹೊಂಡಗಳಿಗೂ ಮುಕ್ತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?