ಶಾಲೆ ಶತಮಾನೋತ್ಸವ ನೆನಪಿಗೆ ಅಡಿಕೆ ತೋಟ


Team Udayavani, Sep 9, 2018, 10:10 AM IST

9-sepctember-2.jpg

ಸುಳ್ಯ: ಶಾಲೆಯ ಶತಮಾನೋತ್ಸವದ ಆಚರಣೆಯನ್ನು ಸ್ಮರಣೀಯವಾಗಿಸಲು ಹಾಗೂ ಶಾಲೆಗೊಂದು ನಿಶ್ಚಿತ ಆದಾಯ ಮೂಲ ಒದಗಿಸಿಕೊಡಲು ಗ್ರಾಮಸ್ಥರು ಅಡಿಕೆ ತೋಟ ನಿರ್ಮಿಸಿಕೊಟ್ಟಿದ್ದಾರೆ! ಸುಳ್ಯ ತಾಲೂಕಿನ ಕನಕಮಜಲು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಇಂತಹ ಪ್ರಯತ್ನವೊಂದು ಯಶಸ್ವಿಯಾಗಿದೆ. ಭವಿಷ್ಯಕ್ಕೆ ಈ ಸರಕಾರಿ ಶಾಲೆಯನ್ನು ಉಳಿಸುವುದಕ್ಕಾಗಿ ಹಾಗೂ ಶಾಲೆಯ ಆರ್ಥಿಕ ಮಟ್ಟ ಹೆಚ್ಚಿಸುವುದಕ್ಕಾಗಿ ಇಂತಹ ವಿನೂತನ ಪ್ರಯತ್ನಕ್ಕೆ ಎಸ್‌ ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಮುಂದಾಗಿರುವುದು ವಿಶೇಷ.

ಊರಿನವರೆಲ್ಲ ಸೇರಿ ಅಡಿಕೆ ತೋಟ ನಿರ್ಮಿಸುವ ಹೆಜ್ಜೆ ಇರಿಸಿದ್ದು, ಈ ವಿನೂತನ ಪ್ರಯತ್ನ ಮಾದರಿಯಾಗಿದೆ. ಕನಕಮಜಲು ಶ್ರೀ ನರಿಯೂರು ರಾಮಣ್ಣ ಗೌಡ ಕಿರಿಯ ಪ್ರಾಥಮಿಕ ಶಾಲೆ ಗ್ರಾಮದ ವಿದ್ಯಾ ದೇಗುಲವಾಗಿ ಮಕ್ಕಳಿಗೆ ಜ್ಞಾನ ಒದಗಿಸುತ್ತಿದೆ. ಆ ಶಾಲೆ ಶತಮಾನದಷ್ಟು ಹಿಂದೆ ಸ್ಥಾಪನೆಗೊಂಡಿದೆ. ಶಿಕ್ಷಣ ಪ್ರೇಮಿ ನರಿಯೂರಿನ ರಾಮಣ್ಣ ಗೌಡ ಶಾಲೆಗೆ ಸ್ಥಳದಾನ ಮಾಡಿದ್ದರು. ಬಳಿಕ ಅವರ ಪುತ್ರ ನರಿಯೂರು ಕೇಶವಾನಂದ ಅವರೂ ಶಾಲೆಗೆ ನೆರವು ನೀಡುತ್ತ ಬಂದಿದ್ದಾರೆ. ಈ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಶಾಲೆ 101ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಶಾಲೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಬದಲು ಅಡಿಕೆ ತೋಟ ನಿರ್ಮಾಣವಾಗುತ್ತಿದೆ.

1.80 ಎಕ್ರೆಯಲ್ಲಿ ನಿರ್ಮಾಣ
ಇದು ಗ್ರಾಮಸ್ಥರದೇ ಚಿಂತನೆ. ಶಾಲೆಗೆ 2.80 ಎಕ್ರೆ ಜಾಗವಿದೆ. ಈ ಪೈಕಿ ಮೀಸಲಿಟ್ಟ 1.80 ಎಕ್ರೆ ಜಾಗದಲ್ಲಿ ಅಡಿಕೆ ತೋಟ ನಿರ್ಮಿಸಲಾಗಿದೆ. ಆ. 29ರಂದು ಅದರ ಉದ್ಘಾಟನೆಯೂ ಆಗಿದೆ. ಭೂಮಿ ಹದಗೊಳಿಸಿ 276 ಅಡಿಕೆ ಸಸಿ ಹಾಗೂ 8 ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ. ಎಸ್‌ಡಿಎಂಸಿ ಸಮಿತಿಯವರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಪ್ರೇಮಿಗಳ ಸಹಿತ ನೂರು ಮಂದಿ ಶ್ರಮ ಸೇವೆ ಮೂಲಕ ಸಸಿಗಳನ್ನು ನೆಟ್ಟಿದ್ದಾರೆ.

ನಿರ್ವಹಣೆಗೆ ಸಮಿತಿ
ಅಡಿಕೆ ತೋಟ ನಿರ್ವಹಣೆಗೆ ರಕ್ಷಣಾ ಸಮಿತಿ ರಚಿಸಲು ಎಸ್‌ಡಿಎಂಸಿ ನಿರ್ಧರಿಸಿದೆ. ಈಗ ಸಮಿತಿ ಸದಸ್ಯರು, ದಾನಿಗಳು ಹಣ ಭರಿಸಿದ್ದಾರೆ. ಶಾಲೆಯ ಕೊಳವೆ ಬಾವಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗಿದೆ. ಮುಂದಕ್ಕೆ ನೀರಾವರಿ ಯಂತ್ರಗಳನ್ನು ಶಾಲೆಯ ತೋಟದಲ್ಲೇ ಅಳವಡಿಸಿ ಕೃಷಿ ಚಟುವಟಿಕೆಗೆ ಅಗತ್ಯ ಸಾಮಗ್ರಿ ಖರೀದಿಸುವುದು ನಿರ್ವಹಣ ಸಮಿತಿಯ ಉದ್ದೇಶ.

ಕೃಷಿ, ಪರಿಸರದ ಪಾಠ
ಗ್ರಾಮದಲ್ಲಿ 440 ಮನೆಗಳಿದ್ದು, ಎಲ್ಲ ಮನೆಯವರೂ ಕೃಷಿ ಚಟುವಟಿಕೆಗೆ ಕೈಜೋಡಿಸಿದ್ದಾರೆ. ವಿದ್ಯಾ ದೇಗುಲವನ್ನು ಸ್ವಾವಲಂಬಿಯಾಗಿಸಲು ಮುಂದಾಗಿದ್ದಾರೆ. ಕಳೆದ ವರ್ಷ 94 ಮಕ್ಕಳಿದ್ದ ಈ ಶಾಲೆಯಲ್ಲಿ ಈ ವರ್ಷ 101 ವಿದ್ಯಾರ್ಥಿಗಳಿದ್ದಾರೆ. ಅಡಿಕೆ ತೋಟ ನಿರ್ಮಿಸುವ ಕಾರ್ಯದಲ್ಲಿ ಅವರದೂ ಅಳಿಲು ಸೇವೆ ಇದೆ. ಅಲ್ಲದೆ, ಪಾಠದೊಂದಿಗೆ ಅವರಿಗೆ ಕೃಷಿ ಹಾಗೂ ಪರಿಸರದ ಪ್ರೀತಿಯ ಪಾಠವೂ ಸಿಗುತ್ತಿದೆ.

ಸಾಮೂಹಿಕ ಪ್ರಯತ್ನ 
ಸರಕಾರಿ ಶಾಲೆ ಉಳಿವಿಗೆ ಪುಟ್ಟ ಪ್ರಯತ್ನವಿದು. ಊರಿನ ಹತ್ತು ಸಮಾನ ಮನಸ್ಕರು ಸೇರಿ ಇಂತಹದ್ದೊಂದು ಅಡಿಕೆ ತೋಟವನ್ನು ಶಾಲೆಗಾಗಿ ನಿರ್ಮಿಸಲು ಮುಂದಾಗಿದ್ದೇವೆ. ಇದು ಆರಂಭ.ಮುಂದೆ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ಸಾಮೂಹಿಕವಾಗಿ ಯಾವುದೇ ಜಾತಿ, ಮತ, ಪಕ್ಷ ಭೇದವಿಲ್ಲದೆ ಮಾಡುತ್ತೇವೆ. ಸ್ಥಳದಾನಿಗಳ ಸಹಕಾರ ದೊಡ್ಡದಿದೆ.
– ವಾಸುದೇವ ಪೆರಂಬಾರು
  ಎಸ್‌ಡಿಎಂಸಿ ಅಧ್ಯಕ್ಷ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.