ಅಂಚೆ ಕಚೇರಿಯಲ್ಲಿ ನಾಗನ ದರ್ಶನ
Team Udayavani, Sep 22, 2018, 3:16 PM IST
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಚೆ ಕಚೇರಿಗೆ ನುಸುಳಿದ ನಾಗರಹಾವೊಂದು ಭೀತಿ ಮೂಡಿಸಿದ ಘಟನೆ ಗುರುವಾರ ನಡೆದಿದೆ. ಕಚೇರಿಯೊಳಗೆ ಹಾವು ಬುಸುಗಟ್ಟುತ್ತಿರುವುದು ಕಚೇರಿಯ ಸಿಬಂದಿ ಎಂ. ನರಸಿಂಹ ಭಟ್ ಅವರ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಅದು ಸಾಮಾನ್ಯ ಗಾತ್ರದ ನಾಗರಹಾವೆಂದು ಗೊತ್ತಾಗಿತ್ತು. ಸಿಬಂದಿ ಕಚೇರಿಯಿಂದ ಹೊರಬಂದರೂ, ಹಾವು ಅಲ್ಲೇ ಠಿಕಾಣಿ ಹೂಡಿದ್ದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಯಿತು.
ಈ ಕುರಿತು ಉಪ್ಪಿನಂಗಡಿ ಅಂಚೆ ಕಚೇರಿಗೆ ಮಾಹಿತಿ ನೀಡಿದ ಬಳಿಕ ಉಪ್ಪಿನಂಗಡಿಯ ಸ್ನೇಕ್ ಝಕಾರಿಯಾ ಅವರ ಸಹಕಾರದಿಂದ ಹಾವನ್ನು ಹಿಡಿದು ರಕ್ಷಿತಾರಣ್ಯದೊಳಗೆ ಸುರಕ್ಷಿತವಾಗಿ ಬಿಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?