ಡಾ| ವೀರೇಂದ್ರ ಹೆಗ್ಗಡೆ ಅವರಿಂದ ಮಹಾವೀರ ಸ್ವಾಮಿ ಪುತ್ಥಳಿ ಅನಾವರಣ
Team Udayavani, Sep 23, 2018, 1:21 PM IST
ಬೆಳ್ತಂಗಡಿ: ಪುಣೆಯ ಎಂಐಟಿ ವಿಶ್ವ ಶಾಂತಿ ವಿಶ್ವವಿದ್ಯಾನಿಲಯ ಹಾಗೂ ರಾಜ್ಬಾಗ್ನ ಎಂಐಟಿ ಎಡಿಟಿ ವಿಶ್ವವಿದ್ಯಾನಿಲಯದ ವತಿಯಿಂದ ವಿಶ್ವವಾರ್ಜಿಬಾಗ್ನ ಸಂತ ಶ್ರೀ ಧನ್ಯೇಶ್ವರ ವಿಶ್ವ ಶಾಂತಿ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮಹಾಪುರುಷರ ಮೂರ್ತಿಗಳನ್ನು ಅನಾವರಣಗೊಳಿಸಿದ್ದಾರೆ.
ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಭಗವಾನ್ ಮಹಾವೀರ ಸ್ವಾಮಿಯ ಬೃಹತ್ ಪುತ್ಥಳಿಯನ್ನು ಅನಾವರಣಗೊಳಿಸಿದರು. ಬಳಿಕ ಇತಿಹಾಸಕಾರ ಶಿವಶಾಹಿರ್ ಬಾಬಾ ಸಾಹೇಬ ಪುರಂದರೆ, ಡಾ| ಶಂಕರ ಅಭ್ಯಂಕರ್ ಅವರು ಸಮರ್ಥ ರಾಮದಾಸ್ ಅವರ, ಯುಜಿಸಿಯ ಮಾಜಿ ಅಧ್ಯಕ್ಷ ಡಾ| ಅರುಣ್ ನಿಗ್ವೇಕರ್ ಅವರು ಮ್ಯಾಕ್ಸ್ ಪ್ಲಾಂಕ್ ಅವರ, ಪಂ| ಹೃದಯನಾಥ ಮಂಗೇಶ್ ಕರ್, ಉಷಾ ಮಂಗೇಶ್ಕರ್ ಅವರು ಸಂತ ಮೀರಾ ಬಾಯಿ, ಸಂತ ಕಬೀರ ಅವರ, ಅಯೋಧ್ಯೆ ರಾಮಜನ್ಮಭೂಮಿ ಶಿಲಾನ್ಯಾಸ ಕಾರ್ಯಕಾರಿ ಮಾಜಿ ಅಧ್ಯಕ್ಷ ಡಾ| ರಾಮ ವಿಲಾಸ ವೇದಾಂತಿ, ಅಯೋಧ್ಯೆಯ ಹನುಮಾನ್ಗದ್ದಿಯ ಮಹಂತ ರಾಮದಾಸ್ ಅವರು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ತತ್ತ್ವಜ್ಞಾನದ ಸಂಕೇತವಾಗಿರುವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮನ ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು.
ಡಾ| ವಿಜಯ ಪಿ. ಭಾಟ್ಕರ್, ಪ್ರೊ| ಸ್ವಾತಿ ಎಂ.ಕರಾಡ್ ಚಾಟೆ, ಪ್ರೊ| ರಾಹುಲ್ ವಿ. ಕರಾಡ್, ಪ್ರೊ| ಜ್ಯೋತಿ ಎ. ಕರಾಡ್ ಧಾಕ್ಣೆ, ಡಾ| ವಿಶ್ವನಾಥ್ ಡಿ. ಕರಾಡ್, ಡಾ| ಮಂಗೇಶ್ ಟಿ. ಕರಾಡ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ