ಸೌಕರ್ಯ ಕೊರತೆ: ಆರಕ್ಷಕ ಠಾಣೆಗೇ ಇಲ್ಲ ರಕ್ಷಣೆ


Team Udayavani, Oct 17, 2018, 9:59 AM IST

17-october-1.gif

ಬೆಳ್ಳಾರೆ: ಇಲ್ಲಿನ ಪೊಲೀಸ್‌ ಠಾಣೆ ಉದ್ಘಾಟನೆಗೊಂಡು ಎರಡು ವರ್ಷಗಳೇ ಕಳೆದವು. ಪೋಲೀಸರ ಕೆಲಸಗಳು ಅತ್ಯುತ್ತಮವಿದ್ದರೂ ಅವರಿಗೆ ಸಾಕಷ್ಟು ಸೌಕರ್ಯಗಳಿಲ್ಲ. ಗರಿಷ್ಠ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಇದರಿಂದ ತೊಡಕಾಗುತ್ತಿದೆ. ಅಧಿಕಾರಿಗಳ ಭರವಸೆ ಬಾಯಿ ಮಾತಿಗಷ್ಟೇ ಸೀಮಿತವಾಗಿದ್ದು, ಕಾರ್ಯಾನುಷ್ಠಾನ ಆಗುತ್ತಿಲ್ಲ.

ಸುಳ್ಯ ತಾಲೂಕಿನ 3ನೇ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 16ನೇ ಪೊಲೀಸ್‌ ಠಾಣೆಯಾಗಿ 2016ರ ಸ್ವಾತಂತ್ರ್ಯ ದಿನದಂದು ಬೆಳ್ಳಾರೆಯಲ್ಲಿ ಪೂರ್ಣಪ್ರಮಾಣದ ಪೊಲೀಸ್‌ ಠಾಣೆ ಕಾರ್ಯಾರಂಭ ಮಾಡಿತು. ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೊರಠಾಣೆಯನ್ನು ಪೂರ್ಣಪ್ರಮಾಣದ ಪೋಲೀಸ್‌ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕೆಲವೇ ಕೆಲವು ತಿಂಗಳಿನಲ್ಲಿ ಠಾಣೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವುದಾಗಿ ನೀಡಿದ್ದ ಅಧಿಕಾರಿ ವರ್ಗದ ಭರವಸೆ ಮರಿಚಿಕೆಯಾಗಿದೆ.

ಕಟ್ಟಡ ಮಂಜೂರಾಗಿಲ್ಲ
ಕೇವಲ ಎರಡು ಚಿಕ್ಕ ಕೊಠಡಿ ಹಾಗೂ ಒಂದು ಹಾಲ್‌ ಇರುವ ಹೊರಠಾಣೆ ಕಟ್ಟಡವನ್ನೇ ಪೂರ್ಣ ಪ್ರಮಾಣದ ಠಾಣೆಗೆ ಮೇಲ್ದರ್ಜೆ ನೀಡಿ ಪರಿವರ್ತಿಸಲಾಗಿದೆ. ಸ್ಥಳದ ಕೊರತೆಯೇ ಠಾಣೆಯ ಬಹುದೊಡ್ಡ ಸಮಸ್ಯೆ. ಈ ಹಿಂದೆ ಐದು ಮಂದಿಗೆಂದು ನಿರ್ಮಿಸಲಾದ ಹೊರಠಾಣೆಯ ಕಟ್ಟಡದಲ್ಲಿ ಇದೀಗ ಬರೋಬ್ಬರಿ 31 ಮಂದಿ ಇರಬೇಕಾದ ಅನಿವಾರ್ಯತೆ. ಪೊಲೀಸ್‌ ಅಧಿಕಾರಿ ಹಾಗೂ ಸಿಬಂದಿ ಕುಳಿತುಕೊಳ್ಳಲು ಬಿಡಿ, ನೆಟ್ಟಗೆ ನಿಲ್ಲಲೂ ಠಾಣೆಯಲ್ಲಿ ಜಾಗವಿಲ್ಲ. ಕೆಲಸ – ಕಾರ್ಯಗಳಿಗೆಂದು ಬರುವ ಸಾರ್ವಜನಿಕರಿಗೂ ಸ್ಥಳಾವಕಾಶವಿಲ್ಲ. ಹೀಗಾಗಿ, ಬೆಳ್ಳಾರೆ ಠಾಣೆ ಮಿನಿ ಸಂತೆಯಂತೆ ಗೋಚರಿಸುತ್ತಿದೆ. ಕಂಪ್ಯೂಟರ್‌ ಸಹಿತ ಪೀಠೊಪಕರಣಗಳನ್ನು ಜೋಡಿಸಿ ಇಡುವುದು ಹೇಗೆ ಎಂಬ ಚಿಂತೆ ಸಿಬಂದೆ. ಶಸ್ತ್ರಾಸ್ತ್ರಗಳನ್ನು ಭದ್ರವಾಗಿಡಲು ಸಾಧ್ಯವಿಲ್ಲದಷ್ಟು ಇಕ್ಕಟ್ಟಾಗಿದೆ ಠಾಣೆಯ ಕಟ್ಟಡ. ಪೊಲೀಸ್‌ ಠಾಣೆ ನಿರ್ಮಿಸಲೆಂದು 70 ಸೆಂಟ್ಸ್‌ ಜಾಗವನ್ನು ಈ ಹಿಂದೆಯೇ ಕಾದಿರಿಸಲಾಗಿದ್ದು, ಆದರೆ ಇದುವರೆಗೂ ಕಟ್ಟಡ ಮಾತ್ರ ಮಂಜೂರುಗೊಂಡಿಲ್ಲ.

ಪದೇ ಪದೇ ಕೆಡುವ ಸರಕಾರಿ ವಾಹನ
ಠಾಣೆಯನ್ನು ಮೇಲ್ದರ್ಜೆಗೆ ಏರಿ ಸಿದ್ದ ಸಂದರ್ಭದಲ್ಲಿ ಸರಕಾರದಿಂದ ನೀಡಲಾಗಿದ್ದ ವಾಹನ ಆಗಾಗ ಕೆಟ್ಟು ನಿಲ್ಲುತ್ತಿದ್ದು, ಬಹುಪಾಲು ಗ್ಯಾರೇಜಿನಲ್ಲೇ ಇರುವಂತಾಗಿದೆ. ತುರ್ತು ಸಂದರ್ಭದಲ್ಲಿ, ರೌಂಡ್ಸ್‌ ಸಮಯದಲ್ಲಿ ತೊಂದರೆಯಾಗುತ್ತಿದೆ. ಠಾಣೆಗೆ ಹೊಸ ವಾಹನ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

ಪೋಲೀಸರಿಗಿನ್ನೂ ದೊರೆತಿಲ್ಲ ವಸತಿ ಭಾಗ್ಯ
ಒಬ್ಬ ಎಸ್‌ಐ, 5 ಎಎಸ್‌ಐ, 9 ಹೆಡ್‌ ಕಾನ್‌ಸ್ಟೆàಬಲ್‌, 21 ಕಾನ್‌ಸ್ಟೇಬಲ್‌ ಸಹಿತ ಬೆಳ್ಳಾರೆ ಠಾಣೆಯಲ್ಲಿ ಇರುವ ಹುದ್ದೆಗಳ ಸಂಖ್ಯೆ 36. ಐದು ಪಿಸಿಗಳ ಹುದ್ದೆಗನ್ನು ಹೊರತುಪಡಿಸಿ ಉಳಿದೆಲ್ಲವೂ ಭರ್ತಿಯಾಗಿವೆ. ಹಾವೇರಿ, ವಿಜಯಪುರ, ದಾವಣಗೆರೆ, ಬೆಳಗಾವಿ ಹೀಗೆ ದೂರದ ಊರುಗಳಿಂದ ನಿಯೋಜನೆಗೊಂಡ ಸಿಬಂದಿಯೇ ಜಾಸ್ತಿ ಇದ್ದಾರೆ. ಅವರಿಗೆ ಬೆಳ್ಳಾರೆ ಆಸುಪಾಸಿನಲ್ಲಿ ಹೆಚ್ಚಿನ ಬಾಡಿಗೆ ಮನೆ, ಸರಕಾರಿ ವಸತಿಗಳು ಲಭ್ಯವಿಲ್ಲದ ಕಾರಣ ಸುಬ್ರಹ್ಮಣ್ಯ, ಪುತ್ತೂರು, ಸುಳ್ಯದಂತಹ ದೂರದ ಊರುಗಳಲ್ಲಿ ಉಳಿದುಕೊಂಡು ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಠಾಣೆಯಲ್ಲಿ ಸರಿಯಾದ ಶೌಚಾಲಯವಿಲ್ಲ, ವಿಶ್ರಾಂತಿ ಕೊಠಡಿಯಿಲ್ಲ. ಇರುವ ಕೊಠಡಿಯಲ್ಲೇ ಆಹಾರ ತಯಾರಿಸುವ ಪರಿಸ್ಥಿತಿ ಇಲ್ಲಿದೆ. ಪೋಲೀಸರ ವಸತಿಗೃಹಕ್ಕಾಗಿ ಅನೇಕ ಮನವಿಗಳನ್ನು ಇಟ್ಟಿದ್ದರೂ ಕಡತಗಳು ವಿಲೇವಾರಿಯಾಗಲೂ ಮೀನ-ಮೇಷ ಎಣಿಸಲಾಗುತ್ತಿದೆ.

ಲಾಕಪ್‌ ಇಲ್ಲದ ಠಾಣೆ 
ಎಲ್ಲ ಕಡೆಯೂ ಪೊಲೀಸ್‌ ಠಾಣೆಗಳಲ್ಲಿ ಲಾಕಪ್‌ ಇದ್ದೇ ಇರುತ್ತದೆ. ಆದರೆ, ಬೆಳ್ಳಾರೆ ಠಾಣೆಯಲ್ಲಿ ಆ ವ್ಯವಸ್ಥೆ ಇಲ್ಲ. ಲಾಕಪ್‌ ಗಳಿಗಾಗಿ ಬೇರೆ ಠಾಣೆಗಳನ್ನು ಅವಲಂಬಿಸಬೇಕಾಗಿದೆ. ಬೇರೆ ಠಾಣೆಗಳಲ್ಲಿ ಲಾಕಪ್‌ಗ್ಳು ಖಾಲಿ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಸಾಕ್ಷ್ಯದ ವಸ್ತುಗಳು, ಅಪಘಾತಗೊಂಡ ವಾಹನಗಳು ಹಾಗೂ ಸಿಬಂದಿಯ ವಾಹನಗಳನ್ನ ಠಾಣೆಯ ಆವರಣದಲ್ಲಿ ಇಡಲೂ ಜಾಗವಿಲ್ಲದಂತಾಗಿದೆ.

 ಬಾಲಚಂದ್ರ ಕೋಟೆ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.