ಮತ್ತೆ ಕಾಡಾನೆ ಕಾಟ: ನಿದ್ದೆಗೆಟ್ಟ ಕೃಷಿಕರು


Team Udayavani, Oct 17, 2018, 10:23 AM IST

17-october-2.gif

ಬೆಳ್ತಂಗಡಿ: ತಾಲೂಕಿನ ಅರಸಿನ ಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಹತ್ಯಡ್ಕ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಮತ್ತೆ ಕಾಡಾನೆ ಕಾಟ ಆರಂಭಗೊಂಡಿದ್ದು, ಗ್ರಾ.ಪಂ. ವತಿಯಿಂದ ಅಳವಡಿಸಿದ್ದ ಸೋಲಾರ್‌ ದೀಪಗಳ ಬ್ಯಾಟರಿ ಕದ್ದಿರುವುದೇ ಈ ತೊಂದರೆಗೆ ಪ್ರಮುಖ ಕಾರಣ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ. ಕೊಂಚ ನಿಟ್ಟುಸಿರು ಬಿಟ್ಟಿದ್ದ ಕೃಷಿಕರು ಮತ್ತೆ ಕಾಡಾನೆಗಳ ಕಾಟದಿಂದ ನಿದ್ದೆಗೆಟ್ಟಿದ್ದಾರೆ. ಕಿಡಿಗೇಡಿಗಳ ಸಣ್ಣ ಕೃತ್ಯವೊಂದು ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ. ಸಂಜೆ 6.30ರ ವೇಳೆಗೆ ಆನೆಗಳ ಕಾಟ ಆರಂಭಗೊಂಡರೆ, ರಾತ್ರಿ 1 ಗಂಟೆಯವರೆಗೂ ತೋಟದಲ್ಲೇ ಇರುತ್ತವೆ. ಬಳಿಕ ಗರ್ನಲ್‌ ಸ್ಫೋಟಿಸಿ ಆನೆಗಳನ್ನು ಹೆದರಿಸಿ ಓಡಿಸಬೇಕಾದ ಸ್ಥಿತಿ ಇದೆ.

ಅ. 13ರಂದು ಬಂದಿದ್ದವು
ಹತ್ಯಡ್ಕದ ಅನ್ನಪೂರ್ಣಾ ಫಾರ್ಮ್ಸ್ ಗೆ ಅ. 13ರಂದು ಆನೆಗಳು ಬಂದು ಹೋಗಿವೆ. 3 ವಾರಗಳಿಂದ ಈ ತೊಂದರೆ ಇದ್ದು, ಬಾಳೆ, ತೆಂಗು ತೋಟವನ್ನು ಹಾನಿ ಮಾಡುತ್ತಿವೆ. ಆನೆಗಳು ಒಮ್ಮೆ ನುಗ್ಗಿದರೆ ತೋಟದ ಚಿತ್ರಣವೇ ಬದಲಾಗುತ್ತದೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಬೇಲಿಗಳನ್ನೂ ನಾಶಪಡಿಸುತ್ತವೆ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.

ಕ್ರಮಕ್ಕೆ ಆಗ್ರಹ
ಹತ್ಯಡ್ಕ ಮೀಸಲು ಅರಣ್ಯ ಪ್ರದೇಶದ ಕೊಕ್ಕಡ-ಶಿಶಿಲ ರಸ್ತೆ ಬದಿಯ ಕೃಷಿಕರಿಗೆ ಕಾಡಾನೆಗಳು ತೊಂದರೆ ನೀಡುತ್ತಿವೆ. ಹೀಗಾಗಿ ಸೋಲಾರ್‌ ದೀಪಗಳ ದುರಸ್ತಿಗೆ ಸಂಬಂಧಪಟ್ಟವರು ಕ್ರಮ ಕೈಗೊಂಡು ಕಿಡಿಗೇಡಿಗಳ ವಿರುದ್ಧವೂ ಕ್ರಮ ಜರಗಿಸಬೇಕಿದೆ ಎಂದು ಕೃಷಿಕರು ಆಗ್ರಹಿಸಿದ್ದಾರೆ.

12 ದೀಪಗಳ ಅಳವಡಿಕೆ
ಅರಸಿನಮಕ್ಕಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2016-17ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಆನೆಗಳ ಕಾಟ ತಪ್ಪಿಸುವ ನಿಟ್ಟಿನಲ್ಲಿ 12 ಸೋಲಾರ್‌ ದೀಪಗಳನ್ನು ಅಳವಡಿಸಲಾಗಿತ್ತು. ಒಂದು ದೀಪಕ್ಕೆ ಒಟ್ಟು 24 ಸಾವಿರ ರೂ.ವೆಚ್ಚವಾಗಿತ್ತು. ಈ ದೀಪಗಳು ಸಂಜೆಯಾಗುತ್ತಿದ್ದಂತೆ ಉರಿಯುತ್ತಿದ್ದು, ಬೆಳಗ್ಗೆ ಆರುತ್ತಿದ್ದವು. ಕಾಡಾನೆಗಳು ಆಗಮಿಸುವ ಪ್ರದೇಶದಲ್ಲಿ ಈ ದೀಪಗಳನ್ನು ಅಳವಡಿಸಲಾಗಿದ್ದು, ದೀಪದ ಪ್ರಕಾಶಕ್ಕೆ ಆನೆಗಳು ಆಗಮಿಸುತ್ತಿರಲಿಲ್ಲ. ಇನ್ನೂ ಒಂದೆರಡು ದೀಪಗಳನ್ನು ಅಳವಡಿಸುತ್ತಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಆದರೂ ದೀಪಗಳ ಅಳವಡಿಕೆ ಬಳಿಕ ಆನೆಗಳ ಕಾಟ ಇರಲಿಲ್ಲ. ಆದರೆ ಈಗ ಕೆಲವೊಂದು ದೀಪಗಳು ಉರಿಯದೆ ಆನೆಗಳ ಕಾಟ ಮತ್ತೆ ಆರಂಭಗೊಂಡಿದೆ.

ದೂರು ನೀಡಲಾಗಿದೆ
ಒಟ್ಟು 12 ಸೋಲಾರ್‌ ದೀಪಗಳಲ್ಲಿ ಒಂದು ದೀಪದ ಬ್ಯಾಟರಿ ಕದ್ದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಂಡು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದೇವೆ. ಸೋಲಾರ್‌ ದೀಪ ಅಳವಡಿಕೆಯಿಂದ ದೊಡ್ಡ ಪರಿಣಾಮ ಬೀರಿಲ್ಲ. ಆನೆಗಳ ಕಾಟ ನಿರಂತರವಾಗಿದೆ.
ಕೆ. ವೆಂಕಪ್ಪ ಗೌಡ ಪಿಡಿಒ, 
  ಅರಸಿನಮಕ್ಕಿ ಗ್ರಾ.ಪಂ.

3 ವಾರಗಳಿಂದ ಉಪಟಳ
ಕಳೆದೆರಡು ವರ್ಷಗಳ ಹಿಂದೆ ಸೋಲಾರ್‌ ದೀಪ ಅಳವಡಿಸಿದ ಬಳಿಕ ಆನೆಗಳ ಕಾಟವಿರಲಿಲ್ಲ. ಆದರೆ ಕಳೆದ ಮೂರು ವಾರಗಳಿಂದ ನಿರಂತರವಾಗಿ ಕಾಟ ನೀಡುತ್ತಿದ್ದು, ತೋಟವನ್ನು ಸಂಪೂರ್ಣ ನಾಶ ಮಾಡಿವೆ. ಕೆಲವೊಂದು ಸೋಲಾರ್‌ ದೀಪಗಳು ಉರಿಯದೆ ಈ ತೊಂದರೆ ಆರಂಭಗೊಂಡಿದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಲಿ ಎಂಬುದು ನಮ್ಮ ಆಗ್ರಹ.  
 – ಶ್ರೀಧರ್‌, ಸುಬ್ರಹ್ಮಣ್ಯ,
  ಕೃಷಿಕರು, ಹತ್ಯಡ್ಕ

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.