ಹರಿಹರ: ಸಂಗಮ ಕ್ಷೇತ್ರದಲ್ಲಿ ಇಂದು ತೀರ್ಥೋದ್ಭವ
Team Udayavani, Oct 17, 2018, 10:50 AM IST
ಸುಬ್ರಹ್ಮಣ್ಯ : ಐತಿಹಾಸಿಕ ಪುಣ್ಯಕ್ಷೇತ್ರ ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನವು ಪುರಾತನವಾಗಿದ್ದು, ಶನಿ ಪೂಜೆಗೆ ಪ್ರಸಿದ್ಧಿ ಪಡೆದಿದೆ. ಪಕ್ಕದಲ್ಲೆ ಪುಣ್ಯ ನದಿ ಹರಿಯುತ್ತಿದ್ದು, ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗುವ ವೇಳೆ ಇಲ್ಲಿಯೂ ತೀರ್ಥೋದ್ಭವ ಆಗುತ್ತದೆ ಎಂಬ ನಂಬಿಕೆಯಿದೆ. ತುಲಾ ಸಂಕ್ರಮಣ ದಿನವಾದ ಬುಧವಾರ (ಅ. 17) ನೂರಾರು ಭಕ್ತರು ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನ ನೆರವೇರಿಸಲಿದ್ದಾರೆ.
ದೇವಸ್ಥಾನ ಪೂರ್ವ ದಿಕ್ಕಿನಲ್ಲಿರುವ ಸಿದ್ಧ ಪರ್ವತದಿಂದ ಕೋಟಿ ತೀರ್ಥ ಎಂದು ನದಿ ಹರಿಯುತ್ತಿದೆ. ಈ ನದಿ ದೇವಸ್ಥಾನದ ಎದುರು ಸಂಗಮಗೊಂಡು ಅಘನಾಶಿನಿಯಾಗಿ ಮುಂದೆ ಹರಿಯುತ್ತದೆ. ಅಘನಾಶಿನಿ ಎಂಬಲ್ಲಿ ತೀರ್ಥೋದ್ಭವ ಆಗುತ್ತದೆ.
ತಲಕಾವೇರಿಯ ತೀಥೋದ್ಭವ ಸಮಯದಲ್ಲಿ ಇಲ್ಲಿಯೂ ನದಿಗೆ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸುತ್ತಾರೆ. ನೂರಾರು ಭಕ್ತರು ನದಿಗೆ ಬಾಗಿನ ಅರ್ಪಿಸುತ್ತಾರೆ. ಬಳಿಕ ಸ್ನಾನ ಪೂರೈಸುತ್ತಾರೆ. ಇದರಿಂದ ದುರಿತಗಳು ದೂರವಾಗಿ, ಚರ್ಮವ್ಯಾಧಿ ಇತ್ಯಾದಿಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ. ಪುಣ್ಯಸ್ನಾನದ ಬಳಿಕ ಹರಿಹರೇಶ್ವರ ದೇವಸ್ಥಾನದಲ್ಲಿ ಶನಿಪೂಜೆ ನೆರವೇರಿಸಿದರೆ ಶನಿದೋಷ ಪರಿಹಾರವಾಗಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ. ಈ ಪುಣ್ಯ ಕ್ಷೇತ್ರ ದಲ್ಲಿ ಪಿಂಡ ಪ್ರದಾನವೂ ನಡೆಯುತ್ತದೆ.
ಹರಿ ಹರರು ಒಂದೇ ಬಿಂಬದಲ್ಲಿ ಸಂಕಲ್ಪಗೊಂಡ ವಿಶಿಷ್ಟ ಕ್ಷೇತ್ರವಿದು. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ. ಮೂರು ಗ್ರಾಮಗಳ ಕೂಡುಗಟ್ಟಿನ ಭಕ್ತರ ಆರಾಧ್ಯ ದೈವ. ಈ ದೇಗುಲ ಸುಮಾರು 800 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡಿದೆ. 2003ರಲ್ಲಿ ಈ ದೇವಸ್ಥಾನದ ಅಭಿವೃದ್ಧಿ ನಡೆದು ಬ್ರಹ್ಮಕಲಶೋತ್ಸವ ನಡೆದಿದೆ. ಈಗಿನ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತಷ್ಟು ವೇಗ ಸಿಕ್ಕಿದ್ದು, ಕಲಾ ಮಂದಿರ ನಿರ್ಮಾಣಗೊಳ್ಳುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಅಷ್ಟಬಂಧ ಬ್ರಹ್ಮಕಲಶ ನಡೆಯಲಿದ್ದು, ಭರದ ಸಿದ್ಧತೆಗಳು ಆಗುತ್ತಿವೆ, ಕೂಡುಗಟ್ಟಿನ ಭಕ್ತರು ಸಮಿತಿಗಳನ್ನು ರಚಿಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರೋಗ ನಿವಾರಣೆ
ತಲಕಾವೇರಿ ಹಾಗೂ ಇಲ್ಲಿ ಏಕಕಾಲಕ್ಕೆ ತೀರ್ಥೋದ್ಭವ ಆಗುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ತುಲಾ ಸಂಕ್ರಮಣದಂದು ತೀರ್ಥೋದ್ಭವ ಆಚರಣೆ ನಡೆಸುತ್ತೇವೆ. ನದಿಗೆ ಪೂಜೆ ನಡೆದು, ಬಾಗಿನ ಅರ್ಪಣೆಯ ಬಳಿಕ ಭಕ್ತರು ಪುಣ್ಯಸ್ನಾನ ನೆರವೇರಿಸುವರು. ಶನಿದೋಷ ನಿವಾರಣೆಯ ಜತೆಗೆ ರೋಗ – ರುಜಿನಗಳು ದೂರವಾಗುತ್ತವೆ.
– ಸುಬ್ರಹ್ಮಣ್ಯ ನರಸಿಂಹ ಭಟ್, ಅರ್ಚಕರು
ಪುಣ್ಯ ಸ್ನಾನ
ಪ್ರಶಾಂತ ವಾತಾವರಣದಲ್ಲಿ ನಿರ್ಮಾಣಗೊಂಡಿರುವ ಶ್ರೀ ಕ್ಷೇತ್ರವು ಶನಿಪೂಜೆಗೆ ಪ್ರಸಿದ್ಧಿ ಪಡೆದಿದೆ. ಕೂಡುಗಟ್ಟಿನ ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದೀಗ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆಯುತ್ತಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವ ನಡೆಯುವ ಘಳಿಗೆಯಲ್ಲಿ ಇಲ್ಲಿಯೂ ತೀರ್ಥೋದ್ಭವ ಆಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗಾಗಮಿಸಿ ಪುಣ್ಯ ಸ್ನಾನ ಮಾಡಿ, ಕೃತಾರ್ಥರಾಗುತ್ತಾರೆ.
– ರಾಮಕೃಷ್ಣ ಕುಧ್ಕುಳಿ,
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ