ಬಿಸಿಲೆ ಘಾಟಿ : ಮಧ್ಯ ರಾತ್ರಿ ಕಾಡಾನೆ ದಾಳಿ, ಇಬ್ಬರು ಬಚಾವ್
Team Udayavani, Oct 30, 2018, 10:49 AM IST
ಸುಬ್ರಹ್ಮಣ್ಯ : ಇಲ್ಲಿನ ಬಿಸಿಲೆ ಘಾಟಿಯ ಕುಲ್ಕುಂದ ಗೇಟಿನ ಬಳಿ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ್ದು, ವಾಹನದಲ್ಲಿದ್ದ ಇಬ್ಬರು ಅಪಾಯದಿಂದ ಪಾರಾದ ಘಟನೆ ಮಂಗಳವಾರ ನಸುಕಿನ ವೇಳೆ ನಡೆದಿದೆ.
ಸೋಮವಾರಪೇಟೆ ಮೂಲದ ಹಮೀದ್ ಮತ್ತು ಅಬ್ದುಲ್ ಸಲೀಂ ಆನೆ ದಾಳಿಗೆ ಒಳಗಾಗಿ ಪರಾರಿಯಾದವರು.
ಇವರಿಬ್ಬರು ಸೋಮವಾರಪೇಟೆಯಿಂದ ಹಸಿ ಮೀನು ತರಲು ಮಂಗಳೂರಿಗೆ ಬರುತ್ತಿದ್ದರು. ಕುಲ್ಕುಂದ ದೇವರ ಗುಡ್ಡ ಬಳಿ ಬರುವಾಗ ತಿರುವಿನಲ್ಲಿ ಕಾಡಾನೆ ಮರಿ ಸಹಿತವಾಗಿ ಇವರ ಮಹಿಂದ್ರಾ ಜೀತೊ ವಾಹನದ ಮೇಲೆ ದಾಳಿ ಮಾಡಿದೆ. ವಾಹನದ ಮುಂಭಾಗದ ಕನ್ನಡಿಯ ಮೇಲೆ ಆನೆ ಸೊಂಡಿಲಿನ ಪ್ರಹಾರ ನಡೆಸಿದೆ. ಕನ್ನಡಿ ಪುಡಿ ಪುಡಿಯಾಗಿದೆ.ಆ ವೇಳೆ ಆನೆಯ ಮರಿ ಕೂಗಿದ್ದರಿಂದ ಆನೆ ವಾಹನ ಬಿಟ್ಟು ಕಾಡು ಸೇರಿದೆ.
ದಾರಿಯಲ್ಲಿ ಬರುತ್ತಿದ್ದ ಬೇರೊಂದು ವಾಹನವೇರಿ ಹಮೀದ್ ಮತ್ತು ಸಲೀಮ್ ಅಲ್ಲಿಂದ ಮಂಗಳೂರು ತಲುಪಿದ್ದಾರೆ . ಬೆಳಿಗ್ಗೆ ವಾಹನವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಗೆ ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ