ಕಡಬ: ಕೆಥೋಲಿಕ್ ಯುವ ಸಮ್ಮೇಳನಕ್ಕೆ ತೆರೆ
Team Udayavani, Nov 9, 2018, 3:02 PM IST
ಕಡಬ : ಇಲ್ಲಿನ ಜೋಕಿಮ್ಸ್ ಚರ್ಚ್ ಮೈದಾನದಲ್ಲಿ 4 ದಿನಗಳಿಂದ ನಡೆಯುತ್ತಿರುವ 9ನೇ ಜಿಲ್ಲಾ ಯುವ ಸಮಾವೇಶವು ಗುರುವಾರ ಮಧ್ಯಾಹ್ನ ವರ್ಣರಂಜಿತ ತೆರೆಕಂಡಿತು. ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ 124 ಚರ್ಚ್ ಘಟಕಗಳ ಯುವಕ, ಯುವತಿಯರು ಭಾಗವಹಿಸಿದ್ದರು.
ಮನಮುಟ್ಟಿದ ತರಬೇತಿಗಳು
ಸಮಾವೇಶದಲ್ಲಿ ಯುವ ಸಮುದಾಯದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಹಲವು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೌಲ್ಯಾಧಾರಿತ ಕುಟುಂಬ ಜೀವನ, ಸಮಾಜದ ಅಗತ್ಯಗಳಿಗೆ ಯುವಕರು ಸ್ಪಂದಿಸಬೇಕಾದ ಅನಿವಾರ್ಯತೆ, ಸಾಮರಸ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಯುವ ಸಮುದಾಯದ ಪಾತ್ರ, ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಕುರಿತು ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ| ಸ್ಟೀವನ್ ಕ್ವಾಡ್ರಸ್ ಹಾಗೂ ಪ್ರೊ| ಅಲ್ಲಿನ್ ಡೇಸಾ ತಂಡದವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನಡೆಸಿಕೊಟ್ಟರು. ವಂ| ಅನಿಲ್ ಡಿ’ಸೋಜಾ ಮತ್ತು ತಂಡದವರು ಕುಟುಂಬ ಜೀವನದ ಮಹತ್ವದ ಕುರಿತು ಯುವ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಪರಿಸರ ಸಂರಕ್ಷಣೆಗೆ ಆದ್ಯತೆ
‘ಗೋ ಗ್ರೀನ್’ ಹೆಸರಿನಲ್ಲಿ ಭಾರತೀಯ ಯುವ ಸಂಚಲನದ ನೇತೃತ್ವದಲ್ಲಿ ಆರಂಭಿಸಲಾಗಿರುವ ಪರಿಸರ ಸಂರಕ್ಷಣೆ ಅಭಿಯಾನದ ಮಹತ್ವವನ್ನು ಸಮಾವೇಶದಲ್ಲಿ ವಿಶೇಷವಾಗಿ ಕೈಗೆತ್ತಿಕೊಳ್ಳಲಾಗಿತ್ತು. ಯುವ ಸಮುದಾಯ ದಲ್ಲಿ ಪರಿಸರದ ಕುರಿತು ಅರಿವು ಮೂಡಿಸಿ, ಪರಿಸರ ಸಂರಕ್ಷಣೆಯ ವಿಚಾರವನ್ನು ಜಾಗೃತಗೊಳಿಸುವ ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರಾರ್ಥಿಗಳಿಗೆ ಕೇರಳದಿಂತ ತರಿಸಲಾಗಿದ್ದ ಕಾಗದದಿಂದ ತಯಾರಿಸಿದ ವಿಶೇಷ ಪರಿಸರ ಸ್ನೇಹಿ ಪೆನ್ಗಳನ್ನು ವಿತರಿಸಲಾಗಿತ್ತು. ಕಾಗದದ ಈ ಪೆನ್ ಒಳಗೆ ಮೊಳಕೆಯೊಡೆದು ಗಿಡವಾಗುವ ರೀತಿಯ ಬೀಜವನ್ನು ಹುದುಗಿಸಿಡಲಾಗಿದ್ದು, ಪೆನ್ನನ್ನು ಬಳಸಿ ಬಿಸಾಡಿದಾಗ ಆ ಬೀಜ ಮಣ್ಣಿಗೆ ಸೇರಿ ಮೊಳಕೆಯೊಡೆದು ಸಸಿಯಾಗುವ ಮೂಲಕ ಪ್ರಕೃತಿಗೆ ಕೊಡುಗೆ ನೀಡುವಂತೆ ತಯಾರಿಸಲಾಗಿತ್ತು.
ದೇಸೀ ಉಡುಪುಗಳ ಮೆರುಗು
ಬಹುತೇಕ ಶಿಬಿರಾರ್ಥಿಗಳು ಶಿಬಿರದ ಸಮಾರೋಪ ಸಮಾರಂಭದಲ್ಲಿ ದೇಸೀ ಉಡುಪುಗಳನ್ನು ಧರಿಸಿದ್ದರು. ಯುವಕರು ಬಿಳಿ ಪಂಚೆ, ಧೋತಿ ಉಟ್ಟು, ಅಂಗಿ ಧರಿಸಿದ್ದರೆ ಯುವತಿಯರು ಸೀರೆಯುಟ್ಟು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮೈದಾನದಲ್ಲಿ ರಚಿಸಲಾಗಿದ್ದ ಭಾರತ ದೇಶದ ಬೃಹತ್ ನಕಾಶೆಯೊಳಗೆ ರಾತ್ರಿ ವೇಳೆ ಮೊಂಬತ್ತಿಗಳನ್ನು ಹಚ್ಚಿ ‘ದೇಶವನ್ನು ಬೆಳಗಿಸೋಣ’ ಎನ್ನುವ ಸಂದೇಶದೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಶಿಬಿರವನ್ನು ಯಶಸ್ವಿಯಾಗಿ ಸಂಘಟಿಸಿದ ಭಾರತೀಯ ಕೆಥೋಲಿಕ್ ಯುವ ಸಂಚಲನದ ಪುತ್ತೂರು ವಲಯ ಹಾಗೂ ಕಡಬ ಘಟಕದ ಸದಸ್ಯರ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ