ಮಕ್ಕಳಲ್ಲಿ ತರಕಾರಿ ಬಿತ್ತನೆ ಆಸಕ್ತಿ ಮೂಡಿಸಿದ ಶಿಕ್ಷಕರು


Team Udayavani, Nov 11, 2018, 10:47 AM IST

11-november-4.gif

ಕುಂಟಾರು: ಕುಂಟಾರು ಎ.ಯು.ಪಿ. ಶಾಲಾ ಮಕ್ಕಳಿಗೆ ಪಾಠದ ಜತೆಗೆ ತರಕಾರಿ ಬಿತ್ತನೆಯ ಬೋಧನೆಯೂ ಸಿಕ್ಕಿದೆ. ಇಂತಹ ಪ್ರಯೋಗಕ್ಕೆ ಮುಂದಾಗಿದ್ದು ಕುಂಟಾರು ಶಾಲಾ ಶಿಕ್ಷಕ – ಶಿಕ್ಷಕಿಯರು. ಮಕ್ಕಳಲ್ಲಿ ವಿಶಿಷ್ಟ ಅಭಿರುಚಿಯನ್ನು ಮೂಡಿಸಲು ಶಾಲಾ ವಠಾರದಲ್ಲಿ ತರಕಾರಿ ತೋಟವನ್ನು ನಿರ್ಮಾಣ ಮಾಡಲಾಗಿದೆ.

ಶಾಲೆಗೆ ಮೀಸಲಾಗಿರುವ ಸುಮಾರು 50 ಸೆಂಟ್ಸ್‌ ಜಾಗದಲ್ಲಿ ಈ ತರಕಾರಿ ತೋಟವನ್ನು ನಿರ್ಮಿಸಲಾಗಿದೆ. ಕಾರಡ್ಕ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಕೆಲಸವನ್ನು ಶಾಲೆಯ ಅಭಿವೃದ್ಧಿ ಕೆಲಸಕ್ಕೆ ಮೀಸಲಿಟ್ಟಿತ್ತು. ಈ ಮೂಲಕ ತರಕಾರಿ ತೋಟದ ಯೋಜನೆ ರೂಪುಗೊಂಡಿತು.

ತಡೆಬೇಲಿಯೂ ನಿರ್ಮಾಣ
ಉದ್ಯೋಗ ಖಾತರಿ ಯೋಜನೆಯ 100 ದಿನಗಳ ಕೆಲಸದಲ್ಲಿ ಶಾಲೆಯ ತರಕಾರಿ ತೋಟಕ್ಕೆ ಬೇಕಾದ ಸ್ಥಳವನ್ನು ಸಮತಟ್ಟು ಮಾಡಿ ಹದಗೊಳಿಸಲಾಯಿತು. ತರಕಾರಿ ಬೀಜಗಳನ್ನು ನೆಡಲು ಸಾಲುಗಳಲ್ಲಿ ಸಣ್ಣ ಗುಂಡಿಗಳನ್ನು ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲಾಯಿತು. ತೋಟದ ಸುತ್ತ ಪ್ರಾಣಿಗಳ ಹಾವಳಿ ತಪ್ಪಿಸಲು ಬೇಲಿ ಹಾಕಲಾಯಿತು.

ಇಲಾಖೆಯಿಂದ ಸಹಾಯಧನ
ಕೃಷಿ ಇಲಾಖೆಯಿಂದ 5,000 ರೂ. ಸಹಾಯಧನದ ಜತೆಗೆ ತೋಟಕ್ಕೆ ಬೇಕಾದ ಟೊಮೆಟೊ, ಬದನೆಕಾಯಿ, ಮೆಣಸು, ಬೆಂಡೆಕಾಯಿ ಲಭಿಸಿತು. ಇತರ ಬೀಜಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಯಿತು. ಜುಲೈ ತಿಂಗಳ ಕೊನೆ ವಾರದಲ್ಲಿ ಶಾಲಾ ಮಕ್ಕಳಿಂದ ಬೀಜ ಬಿತ್ತನೆ ಕಾರ್ಯ ನಡೆಸಲಾಯಿತು.

ಉತ್ತಮ ಫ‌ಸಲು
ಬೀಜ ಬಿತ್ತನೆ ಅನಂತರ ತೋಟಕ್ಕೆ ಸೊಪ್ಪು, ಹಟ್ಟಿ ಗೊಬ್ಬರ ವನ್ನು ಗ್ರಾಮಸ್ಥರು ಸಹಿತ ಶಾಲಾ ಮಕ್ಕಳು, ಸಿಬಂದಿ ಹಾಕಿದರು. ದಿನನಿತ್ಯ ನೀರು ಹಾಕುತ್ತಿದ್ದುದರಿಂದ ತರಕಾರಿ ಗಿಡಗಳು ಉತ್ತಮವಾಗಿ ಬೆಳೆದವು. ಅಷ್ಟರಲ್ಲಿ ರೋಗ ಬಾಧೆ ಎದುರಾದ ಕಾರಣ ಅನಿವಾರ್ಯವಾಗಿ ಔಷಧ ಸಿಂಪಡಿಸಲಾಯಿತು. ರೋಗ ಹತೋಟಿಗೆ ಬಂದಾಗ, ಮತ್ತೆ ಕೋಳಿ ಗೊಬ್ಬರವನ್ನು ತೋಟಕ್ಕೆ ಹಾಕಲಾಯಿತು. ಚಿಗುರೊಡೆದ ಗಿಡಗಳು ಮತ್ತಷ್ಟು ಹುಲುಸಾಗಿ ಬೆಳೆದವು. ಪ್ರಸ್ತುತ ಉತ್ತಮ ಫ‌ಸಲು ಲಭಿಸುತ್ತಿದೆ.

ಬಾಳೆ ಫ‌ಸಲು ನಿರೀಕ್ಷೆಯಲ್ಲಿ
ತರಕಾರಿ ತೋಟದಲ್ಲಿ ತರಕಾರಿ ಮಾತ್ರವಲ್ಲದೆ ಬಾಳೆಗಿಡಗಳನ್ನು ಕೂಡ ಬೆಳೆಯಲಾಗುತ್ತಿದೆ. ಸುಮಾರು 50 ಬಾಳೆ ಗಿಡಗಳನ್ನು ನೆಡಲಾಗಿದೆ. ಮುಂಬರುವ ವರ್ಷದಲ್ಲಿ ಫ‌ಸಲು ಬರಬಹುದು ಎನ್ನುವ ನಿರೀಕ್ಷೆ ಇರಿಸಲಾಗಿದೆ. ಮಕ್ಕಳಲ್ಲಿ ಸ್ವಾವಲಂಬನೆ ಬೆಳೆಸುವುದಕ್ಕೋಸ್ಕರ ತರಕಾರಿ ತೋಟ ಪ್ರಾರಂಭಿಸಲಾಯಿತು. ಶಾಲೆಯ ತರಕಾರಿ ವೆಚ್ಚ ಕಡಿಮೆಯಾಗಿದೆ. ಮಕ್ಕಳಿಗೆ ವಿಷರಹಿತ ತರಕಾರಿ ಸೇವನೆ ನಡೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳುತ್ತಾರೆ ಶಾಲಾ ಶಿಕ್ಷಕ-ಶಿಕ್ಷಕಿಯರು.

ಮಕ್ಕಳಿಂದ ತರಕಾರಿ ಕೊಯ್ಲು
ತರಕಾರಿ ತೋಟದಲ್ಲಿ ಬದನೆಕಾಯಿ, ಮುಳ್ಳುಸೌತೆ, ಬೆಂಡೆಕಾಯಿ, ಚೀನಿ ಕಾಯಿ, ಕುಂಬಳಕಾಯಿ, ಟೊಮೆಟೊ, ಬಸಳೆ, ಹರಿವೆ, ಅಲಸಂಡೆ, ಮೆಣಸು, ತೊಂಡೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ವಾರದಲ್ಲಿ 2 ದಿನ ಶಾಲಾ ಮಕ್ಕಳು ಸೇರಿ ತರಕಾರಿ ಕೊಯ್ಲು ಮಾಡುತ್ತಿದ್ದಾರೆ. ಅದನ್ನು ಶಾಲೆಯ ಮಧ್ಯಾಹ್ನದ ಊಟಕ್ಕೆ ಬಳಸುತ್ತಾರೆ. ಇಂತಹ ಅದ್ಭುತ ಕಾರ್ಯಕ್ಕೆ ಶಾಲೆಯ ವ್ಯವಸ್ಥಾಪಕರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘ, ಕೃಷಿ ಇಲಾಖೆಯವರು ಸಹಕಾರ ನೀಡಿದ್ದಾರೆ.

ಸ್ವಾವಲಂಬನೆ‌ ಉದ್ದೇಶ
ಶಾಲಾ ಮಕ್ಕಳಲ್ಲಿ ಸ್ವಾವಲಂಬನೆ ಬೆಳೆಸುವುದು ಈ ತರಕಾರಿ ತೋಟದ ಉದ್ದೇಶವಾಗಿದೆ. ಶಾಲೆಯ ಎಲ್ಲ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಪೋಷಣೆಯ ಕಾರ್ಯವನ್ನೂ ಅವರು ನಡೆಸುತ್ತಾರೆ. ಉತ್ತಮ ಫ‌ಸಲು ಬರುತ್ತಿದೆ. ತರಕಾರಿಗಳನ್ನು ಮಕ್ಕಳ ಭೋಜನಕ್ಕೆ ಬಳಸಲಾಗುತ್ತಿದೆ.
– ಪ್ರಶಾಂತ್‌
ಮುಖ್ಯೋಪಾಧ್ಯಾಯರು

ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.