ತಿಂಗಳಾಡಿ, ಮಾಡಾವು: ವಿದ್ಯುತ್‌ ಕೈಕೊಟ್ಟರೆ ನೋ ಸಿಗ್ನಲ್‌!


Team Udayavani, Nov 11, 2018, 11:02 AM IST

11-november-5.gif

ಕೆಯ್ಯೂರು: ಪುತ್ತೂರು ತಾಲೂಕಿನಾದ್ಯಂತ ಬಿಎಸ್ಸೆನ್ನೆಲ್‌ ಮೊಬೈಲ್‌ ನೆಟ್‌ವರ್ಕ್‌ ಸಂಪೂರ್ಣ ಹದಗೆಟ್ಟಿದೆ. ಸಮಸ್ಯೆಯನ್ನು ಸರಿಪಡಿಸಲು ನಿಗಮದ ಅಧಿಕಾರಿಗಳು ಸೋತಿದ್ದಾರೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಟವರ್‌ನಲ್ಲಿ ಸಮಸ್ಯೆಯಾದರೆ ಅಧಿಕಾರಿಗಳಿಗೆ ಆನ್‌ಲೈನ್‌ ಮೂಲಕವೇ ಸಂದೇಶ ಬರುವ ವ್ಯವಸ್ಥೆಯಿದೆ. ಆದರೂ ನೆಟ್‌ ವರ್ಕ್‌ ಸಮಸ್ಯೆ ಸರಿಪಡಿಸಿ ಎಂದು ಗ್ರಾಹಕರು ಎಷ್ಟು ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿದ್ರೆಯಲ್ಲಿರುವಂತಿದೆ.

ವಿದ್ಯುತ್‌ ಕೈಕೊಟ್ಟರೆ!
ಕೆದಂಬಾಡಿ ಗ್ರಾಮದ ತಿಂಗಳಾಡಿ ಮತ್ತು ಕೆಯ್ಯೂರು ಗ್ರಾಮದ ಮಾಡಾವು ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಬಿಎಸ್ಸೆನ್ನೆಲ್‌ ಸಿಮ್‌ ಬಳಕೆದಾರರು ಇದ್ದಾರೆ. ಮಾಡಾವಿನಲ್ಲಿ ಒಂದು ಟವರ್‌ ಇದೆ. ಇದು ಕೆಯ್ಯೂರು ಪ್ರದೇಶಕ್ಕೆ ನೆಟ್‌ ವರ್ಕ್‌ ಒದಗಿಸುತ್ತದೆ. ತಿಂಗಳಾಡಿಯಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದು ಒಂದೇ ಟವರ್‌. ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವ ಕಾರಣ ಈ ಟವರ್‌ ನಿಂದ ಒಂದು ಕಿ.ಮೀ.  ದೂರಕ್ಕೂ ನೆಟ್‌ವರ್ಕ್‌ ಸರಿಯಾಗಿ ಸಿಗುವುದಿಲ್ಲ. ಕಳೆದ ಕೆಲವು ತಿಂಗಳಿಂದ ಈ ಎರಡೂ ಟವರ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಇದೆ. ವಿದ್ಯುತ್‌ ಕೈಕೊಟ್ಟಾಗಲೆಲ್ಲ ಪೂರ್ತಿ ನೆಟ್‌ ವರ್ಕ್‌ ಆಫ್ ಆಗುತ್ತಿತ್ತು. ಈ ಕುರಿತು ಗ್ರಾಹಕರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ತಾತ್ಕಾಲಿಕವಾಗಿ ಸರಿಯಾಗಿತ್ತು. ಕೆಲವು ದಿನಗಳಿಂದ ಮತ್ತೆ ಅದೇ ಸಮಸ್ಯೆ ಕಾಡುತ್ತಿದೆ.

ಆಧುನಿಕ ದಿನಗಳಲ್ಲಿ ಪ್ರತಿಯೊಂದು ವ್ಯವಹಾರವೂ ಮೊಬೈಲ್‌ ಮೂಲಕವೇ ಆಗುತ್ತಿದೆ. ಹಣ ಕಳುಹಿಸುವಲ್ಲಿಂದ ಹಿಡಿದು ದಾಖಲೆಗಳನ್ನು ಸರಿಪಡಿಸುವವರೆಗೆ ಎಲ್ಲದಕ್ಕೂ ಮೊಬೈಲ್‌ ಅವಲಂಬನೆ ಇದೆ. ತಿಂಗಳಾಡಿಯಲ್ಲಿರುವ ಮೊಬೈಲ್‌ ಟವರ್‌ 3ಜಿ ನೆಟ್‌ವರ್ಕ್‌ ಹೊಂದಿದ್ದು, ಗ್ರಾಮೀಣ ಜನರಿಗೆ ಪ್ರಯೋಜನಕಾರಿಯೂ ಆಗಿದೆ. ಆದರೆ, ಎರಡು ತಿಂಗಳಿಂದ ನೆಟ್‌ವರ್ಕ್‌ ಸರಿಯಾಗಿ ಸಿಗದೆ ಹಾಗೂ ವಿದ್ಯುತ್ತಿಲ್ಲದೇ ಇರುವಾಗ ಪೂರ್ತಿಯಾಗಿ ಕೈಕೊಟ್ಟು ತೊಂದರೆಯಾಗುತ್ತಿದೆ.

ಜನರೇಟರ್‌ ಹಾಕುವವರೇ ಇಲ್ಲ!
ಪ್ರತಿಯೊಂದು ಟವರ್‌ಗೂ ಜನರೇಟರ್‌ ವ್ಯವಸ್ಥೆ ಇದೆ. ತಿಂಗಳಾಡಿ, ಮಾಡಾವು ಟವರ್‌ಗೂ ಜನರೇಟರ್‌ ಇದೆ. ಆದರೆ ವಿದ್ಯುತ್‌ ಹೋದಾಗ ಜನರೇಟರ್‌ ಚಾಲೂ ಮಾಡುವವರೇ ಇಲ್ಲ. ತಿಂಗಳಾಡಿ ಟವರ್‌ನಿಂದ 100 ಮೀಟರ್‌ ದೂರದಲ್ಲಿ, ಮಾಡಾವು ಟವರ್‌ನಿಂದ 500 ಮೀಟರ್‌ ದೂರದಲ್ಲಿ ಬಿಎಸ್ಸೆನ್ನೆಲ್‌ ಎಕ್ಸ್‌ಚೇಂಜ್‌ ಕೇಂದ್ರವಿದ್ದರೂ ಅಲ್ಲಿನ ಸಿಬಂದಿಗೆ ಟವರ್‌ನ ಬಗ್ಗೆ ಕಾಳಜಿಯೇ ಇಲ್ಲ ಎನ್ನುವುದು ಗ್ರಾಹಕರ ಆರೋಪ. ಕರೆಂಟ್‌ ಇದ್ದರೆ ನೆಟ್‌ವರ್ಕ್‌, ಇಲ್ಲದಿದ್ದರೆ ಇಲ್ಲ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ. ಹೀಗಾಗಿ, ಗ್ರಾಹಕರು ಅನ್ಯ ಕಂಪೆ‌ನಿಗಳಿಗೆ ಪೋರ್ಟ್‌ ಆಗಲು ಮುಂದಾಗಿದ್ದಾರೆ.

ಸರಿಪಡಿಸುತ್ತಿಲ್ಲ
ವಿದ್ಯುತ್‌ ಕೈಕೊಟ್ಟರೆ ಸಿಗ್ನಲ್‌ ಕೂಡ ಆಫ್ ಆಗುವ ಸಮಸ್ಯೆ ಹಿಂದೊಮ್ಮೆ ಇತ್ತು. ಈಗ ಒಂದು ತಿಂಗಳಿಂದ ಮತ್ತೆ ಸಮಸ್ಯೆಯಾಗುತ್ತಿದೆ. ಟವರ್‌ನಲ್ಲಿರುವ ದೋಷದ ಕುರಿತು ಅಧಿಕಾರಿಗಳಿಗೆ ನಾವು ಹೇಳಬೇಕಾಗಿಲ್ಲ. ಅವರಿಗೆ ತಾನಾಗಿಯೇ ತಿಳಿಯುತ್ತದೆ. ಆದರೂ ಸರಿಪಡಿಸುತ್ತಿಲ್ಲ.
– ರಫೀಕ್‌ ನಂಜೆ
ವ್ಯಾಪಾರಿ

ಗೋಪಾಲಕೃಷ್ಣ ಸಂತೋಷ್‌ನಗರ 

ಟಾಪ್ ನ್ಯೂಸ್

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.