ಸಮಸ್ಯೆಗಳ ಸುಳಿಯಲ್ಲಿ ಬಿ.ಸಿ. ರೋಡ್‌ ಇಂದಿರಾ ಕ್ಯಾಂಟೀನ್‌


Team Udayavani, Nov 13, 2018, 2:10 AM IST

indira-canteen-12-11.jpg

ಬಂಟ್ವಾಳ: ಬಿ.ಸಿ. ರೋಡ್‌ನ‌ಲ್ಲಿ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್‌ ಅಂತಿಮ ಹಂತಕ್ಕೆ ಬರುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್ನಿಲ್ಲದ ಗೊಂದಲಗಳಿಂದ ವಿವಾದ ಕೇಂದ್ರವಾಗಿ ಮುಂದುವರಿದಿದೆ. ಆಡಳಿತ ಮತ್ತು ಜನಪ್ರತಿನಿಧಿಗಳ ನಡುವಿನ ಬಿಗುಮಾನ, ಪರಸ್ಪರ ಸಂವಹನದ ಕೊರತೆ, ಇಚ್ಛಾಶಕ್ತಿ ಕೊರತೆ ಒಟ್ಟು ಸಮಸ್ಯೆಗೆ ಕಾರಣ ಎಂಬುದಾಗಿ ತರ್ಕಿಸಲಾಗಿದೆ.

ಪ್ರಗತಿಗೆ ಗ್ರಹಣ
ಕ್ಯಾಂಟೀನ್‌ ನಿರ್ಮಾಣದ ಆರಂಭದ ಕಾಮಗಾರಿ ಭರದಿಂದ ನಡೆಯಿತಾದರೂ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಕಾರಣಕ್ಕಾಗಿ ಒಮ್ಮೆ ನಿಲುಗಡೆಯ ಹಂತಕ್ಕೆ ಬಂದಿತ್ತು. ಚುನಾವಣೆ ಬಳಿಕ ಕಾಮಗಾರಿ ಪ್ರಗತಿಗೆ ಗ್ರಹಣ ಹಿಡಿದಿದೆ. ನ. 3ರಂದು ಕ್ಯಾಂಟೀನ್‌ ಸುತ್ತಲೂ ಕಂಪೌಂಡ್‌ ನಿರ್ಮಾಣದ ಕೆಲಸ ದಿಢೀರನೆ ಆರಂಭವಾಗಿತ್ತು. ಬಿ.ಸಿ. ರೋಡ್‌ ಮಿನಿ ವಿಧಾನಸೌಧ ಕಟ್ಟಡದ ಕಂಪೌಂಡಿಗೆ ಸಮಾನವಾಗಿ ಸುತ್ತುಗೋಡೆ ನಿರ್ಮಿ ಸುವ ಬದಲು ಅದರ ವ್ಯಾಪ್ತಿ ಮೀರಿ ಹೆಚ್ಚು ಸ್ಥಳವನ್ನು ಅತಿಕ್ರಮಿಸುವಂತೆ ನಿರ್ಮಾಣ ಸಂದರ್ಭ ಸಾರ್ವಜನಿಕರು ತಡೆ ಒಡ್ಡಿದ್ದರು.

ಅನಂತರ ಪೌರಾಡಳಿತ ಇಲಾಖೆಗೆ ಸಂಬಂಧಿಸಿ ಮಂಗಳೂರಿನಿಂದ ಬಂದಿದ್ದ ಪಿ.ಡಿ. ಅವರು ಇಲ್ಲಿನ ಪ್ರತಿರೋಧ ಕಂಡು ಹಿಂದೆ ಹೋಗಿದ್ದರು. ಪುರಸಭೆ ಮುಖ್ಯಾಧಿಕಾರಿಗೆ ಇದು ಸಮಸ್ಯೆಯಾಗಿಯೇ ಉಳಿದಿದೆ. ಮೇಲಧಿಕಾರಿಗಳಿಂದ ತತ್‌ಕ್ಷಣ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಮುಕ್ತಾಯ ಮಾಡುವಂತೆ ಒತ್ತಡ ಹೆಚ್ಚುತ್ತಿದ್ದು, ಸ್ಥಳದಲ್ಲಿ ಕಾಮಗಾರಿ ನಡೆಸುವುದೇ ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅಧಿಕಾರಿಗಳ ಮಟ್ಟದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ. ನ.10ರಂದು ಪುರಸಭೆಯಿಂದ ಕಂಪೌಂಡ್‌ ನಿರ್ಮಿಸುವ ಮತ್ತೂಂದು ಪ್ರಯತ್ನವೂ ವಿಫಲವಾಗಿತ್ತು. ಮಾತ್ರವಲ್ಲ ಅನಂತರ ನಡೆದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗೆ ಪ್ರಶ್ನೆಗಳ ಸುರಿಮಳೆ ಎದುರಾಗಿತ್ತು.

ಸಮಸ್ಯೆ ಏನು ?
ಬಿ.ಸಿ. ರೋಡ್‌ ಮಿನಿ ವಿಧಾನಸೌಧ ಬಳಿಯಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳವಿಲ್ಲ. ಅಲ್ಲಿಯೇ ಕ್ಯಾಂಟೀನ್‌ ನಿರ್ಮಾಣ ಆಗಿದ್ದು, ಅದರ ಕಂಪೌಂಡ್‌ ವಿಸ್ತರಿಸಿ ರಸ್ತೆ ಅತಿಕ್ರಮಣ ಇಲ್ಲಿನ ಸಮಸ್ಯೆಯಾಗಿದೆ. ರಾಜಮಾರ್ಗದಲ್ಲಿ ಈ ರೀತಿಯ ಕಂಪೌಂಡ್‌ ನಿರ್ಮಾಣ ಬೇಡ ಎನ್ನುವುದು ಸಾರ್ವಜನಿಕ ವಾದವಾಗಿದೆ.

ಯಾವುದೇ ಕಟ್ಟಡ ನಿರ್ಮಾಣಕ್ಕೆ ಮೊದಲು ಅದಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿ, ನೀಲಿ ನಕಾಶೆ, ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಇತ್ಯಾದಿ ಪಡೆಯಬೇಕು. ಆದರೆ ಕ್ಯಾಂಟೀನ್‌ ನಿರ್ಮಾಣಕ್ಕೆ ಇದಾವುದೂ ಇಲ್ಲ ಎನ್ನುವುದು ಪುರಸಭಾ ಸದಸ್ಯ ರೊಬ್ಬರು ತಿಳಿಸಿದ್ದಾರೆ. ಸರಕಾರಿ ಇಲಾಖೆಯಿಂದ ನಿರ್ಮಿಸುವ ಸಾರ್ವಜನಿಕ ಕಟ್ಟಡಗಳಿಗೆ  ಅನುಮತಿ ಪಡೆದುಕೊಳ್ಳುವ ಕ್ರಮವಿಲ್ಲ. ಉದಾಹರಣೆಗೆ ಮಿನಿ ವಿಧಾನಸೌಧ ಸಹಿತ ಇತ್ತೀಚಿನ ಸರಕಾರಿ ಪ್ರಾಯೋಜಿತ ಕೆಲವು ಕಟ್ಟಡಗಳಿಗೆ ಅನುಮತಿ ನೀಡುವಂತೆ ಅರ್ಜಿಯೂ ಸಲ್ಲಿಕೆಯಾಗದೆ ಕಟ್ಟಡ ನಿರ್ಮಾಣ ಆಗಿದೆ. ಅದು ಹಿಂದಿನಿಂದ ನಡೆದು ಬಂದ ಪದ್ಧತಿ. ಇದನ್ನು ಯಾವುದೇ ವ್ಯವಸ್ಥೆ ಪ್ರಶ್ನಿಸುವುದಿಲ್ಲ ಎನ್ನುವುದು ಅಧಿಕಾರಿಯೊಬ್ಬರ ಮಾತು. ಬಿ.ಸಿ. ರೋಡ್‌ ನಗರ ಕೇಂದ್ರದಲ್ಲಿ ಕಡಿಮೆ ಮೊತ್ತದಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಶೀಘ್ರ ಅನುಷ್ಠಾನ ಆಗಬೇಕು ಎಂಬುದು ಜನಸಾಮಾನ್ಯರ ಅಪೇಕ್ಷೆ. ಸರಕಾರ ನೀಡುವ ಸೌಲಭ್ಯವನ್ನು ಜನರಿಗೆ ಮುಟ್ಟಿಸುವ ಕ್ರಮ ಅಧಿಕಾರಿಗಳ ಮಟ್ಟದಿಂದಲೇ ಆಗಬೇಕು.

ಅತಿಕ್ರಮಿಸದಂತೆ ಸೂಚನೆ
ನಾನು ಕಳೆದ ಮಾರ್ಚ್‌ನಲ್ಲಿ ಬೈಂದೂರಿಗೆ ವರ್ಗಾವಣೆಗೊಂಡು ಹೋಗಿದ್ದು, ಪುನಃ  ಬಂಟ್ವಾಳ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಇಂದಿರಾ ಕ್ಯಾಂಟೀನ್‌ ಗೋಡೆ ಮತ್ತಿತರ ನಿರ್ಮಾಣಗಳು ಆಗಿದ್ದವು. ಅದು ಪೌರಾಡಳಿತಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಜಮೀನು ಮಂಜೂರಾತಿ ಅರ್ಜಿ ಸಲ್ಲಿಸಲ್ಪಟ್ಟಿದೆಯೇ ಎಂಬುದು ತಿಳಿದಿಲ್ಲ. ಸರಕಾರದ ಮಟ್ಟದಲ್ಲಿ ಆಗಬೇಕಾದ ಕಾನೂನು ಕ್ರಮಗಳು ನಡೆದಿದೆಯೇ ಎಂಬ ಪರಿಶೀಲನೆ ನಡೆಸಿಲ್ಲ. ಜಮೀನು ಅತಿಕ್ರಮಿಸದಂತೆ ಸೂಚನೆ ನೀಡಿದ್ದೇನೆ.
– ಪುರಂದರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್‌

ಸೂಚನೆಯಂತೆ ಕ್ರಮ
ಇಂದಿರಾ ಕ್ಯಾಂಟೀನ್‌ ಕಾಮಗಾರಿ ಪೂರ್ತಿ ಮಾಡಲು ಇಲಾಖೆಯಿಂದ ಸೂಚನೆ ಬಂದಿರುವ ಪ್ರಕಾರ ಕಂಪೌಂಡ್‌ ನಿರ್ಮಿಸಲು ಕ್ರಮ ಕೈಗೊಂಡಿದೆ. ಅದಕ್ಕೆ ತಡೆ ಒಡ್ಡಿದ್ದು, ಪೌರಾಡಳಿತ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೈರ್ಮಲ್ಯದ ಉದ್ದೇಶದಿಂದ ಕ್ಯಾಂಟೀನ್‌ ಆವರಣ ಗೋಡೆ ನಿರ್ಮಿಸಲು ಯೋಜಿಸಿದ್ದು ಹೌದು. ಸರಕಾರದ ಯೋಜನೆಯಾದ ಕಾರಣ ಸೂಚನೆ ಪಾಲಿಸುವುದು ಕರ್ತವ್ಯ ಆಗಿದೆ. ಹಿರಿಯ ಅಧಿಕಾರಿಗಳಿಗೆ ಇಲ್ಲಿನ ಬೆಳವಣಿಗೆ ಬಗ್ಗೆ ತಿಳಿಸಲಾಗಿದೆ. ಮುಂದಿನ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. 
– ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

— ರಾಜಾ ಬಂಟ್ವಾಳ

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.