ಹೊಸ ಮಾದರಿ: ಹೊಸ ಶೌಚಾಲಯಕ್ಕೆ ಎರಡು ಇಂಗುಗುಂಡಿ!


Team Udayavani, Nov 20, 2018, 2:45 AM IST

ingu-gundi-19-11.jpg

ವಿಶೇಷ ವರದಿ: ಸುಳ್ಯ: ವಿಶ್ವ ಶೌಚಾಲಯ ದಿನಚಾರಣೆ ಪ್ರಯುಕ್ತ ಹೊಸ ಮಾದರಿಯ ಶೌಚಾಲಯ ನಿರ್ಮಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಅದರ ಪ್ರಕಾರ ಶೌಚಾಲಯ ಕಟ್ಟುವ ವೇಳೆ ಒಂದು ಇಂಗುಗುಂಡಿ ಬದಲು ಇನ್ನೂ ಮುಂದೆ ಎರಡು ಇಂಗು ಗುಂಡಿ ನಿರ್ಮಿಸಬೇಕಿದೆ..! ಸ್ವಚ್ಛತೆಯ ದೃಷ್ಟಿಯಲ್ಲಿಟ್ಟುಕೊಂಡು ಈ ಪರಿಕಲ್ಪನೆ ಜಾರಿ ಮಾಡಿದೆ. ಪ್ರತಿ ಶೌಚಾಲಯಕ್ಕೆ ಇನ್ನು ಎರಡು ಗುಂಡಿ ನಿರ್ಮಿಸಲು ಪ್ರೋತ್ಸಾಹ ನೀಡುವಂತೆ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ. ಶೌಚ ಗುಂಡಿ ತುಂಬಿ, ಅದರಿಂದ ತ್ಯಾಜ್ಯ ಹೊರ ಬಂದು ಪರಿಸರ ಮಾಲಿನ್ಯಕ್ಕೆ ಕಾರಣ ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಕಾರಣದಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ.

ಎರಡು ಇಂಗುಗುಂಡಿ ಸ್ವರೂಪ
ಈಗಿನ ನಿರ್ಮಾಣದಲ್ಲಿ ಶೌಚಾಲಯಕ್ಕೆ ಒಂದು ಇಂಗುಗುಂಡಿ ಇರುತ್ತದೆ. ಹೊಸ ಮಾದರಿಯ ಶೌಚಾಲಯದಲ್ಲಿ ಎರಡು ಇಂಗುಗುಂಡಿ ಇರಲಿದೆ. 4 ಅಡಿ ಅಗಲ, ಆಳದ ಎರಡು ಗುಂಡಿ ನಿರ್ಮಿಸಬೇಕು. ಎರಡು ಇಂಗುಗುಂಡಿ ಮಧ್ಯೆ1 ಮೀ.ನಷ್ಟು ಅಂತರ ಇರಬೇಕು. ಒಂದು ಅಡಿ ಉದ್ದ ಮತ್ತು ಅಗಲದ ಛೇಂಬರ್‌ ನಿರ್ಮಿಸಬೇಕು. ಛೇಂಬರ್‌ನಿಂದ 4 ಇಂಚಿನ ಪಿವಿಸಿ ಪೈಪುಗಳನ್ನು ವೈ ಆಕಾರದಲ್ಲಿ 2 ಗುಂಡಿಗಳಿಗೆ ಇಳಿಜಾರಾಗಿ ಜೋಡಿಸಬೇಕು. ಈ ಎರಡು ಹೊಂಡಗಳನ್ನು ಗಾಳಿಯಾಡದಂತೆ ಸಿಮೆಂಟ್‌ ಮುಚ್ಚಳ ಅಳವಡಿಸಬೇಕು. ಶೌಚ ಕೋಣೆ, ಬಾಗಿಲು ನಿರ್ಮಿಸಿ ಶೌಚ ಪ್ಯಾನ್‌ ಅನ್ನು ಪಿವಿಸಿ ಪೈಪು ಮೂಲಕ ಛೇಂಬರ್‌ಗೆ ಜೋಡಿಸಬೇಕಿದೆ. ಈ ಎರಡು ಹೊಂಡಗಳು ಕುಡಿಯುವ ನೀರಿನ ಬಳಕೆಯಿಂದ 3 ಮೀ.ದೂರದಲ್ಲಿ ಇರಬೇಕು.

ಪರಿಕಲ್ಪನೆಯ ಉದ್ದೇಶ
ಈ ಪರಿಕಲ್ಪನೆಯಡಿ ತ್ಯಾಜ್ಯ ಭೂಮಿಯಲ್ಲೇ ಉಳಿಯದೆ ಅದನ್ನು ಗೊಬ್ಬರ ರೂಪದಲ್ಲಿ ಮರು ಬಳಸುವ ಬಗ್ಗೆ ಯೋಜನೆಯಿದೆ. ಒಂದು ಹೊಂಡ ತುಂಬಿದ ಅನಂತರ ಇನ್ನೊಂದು ಹೊಂಡ ಬಳಕೆ ಮಾಡುವುದಾಗಿದೆ. ಒಂದು ಹೊಂಡ ಭರ್ತಿ ಆದಾಗ ಪಿಟ್‌ಗೆ ಮೊಹರು ಹಾಕಿ, ಇನ್ನೊಂದನ್ನು ಬಳಕೆಗೆ ತರಲಾಗುತ್ತದೆ. ಮೊಹರು ಮಾಡಿದ ಗುಂಡಿಯೊಳಗಿನ ಅಂಶಗಳು ಆಮ್ಲಜನಕರಹಿತ ಜೀರ್ಣಕ್ರಿಯೆ ಮೂಲಕ ವಿಭಭಜನಗೊಳ್ಳುತ್ತವೆ. ತುಂಬಿದ ಹೊಂಡದಿಂದ ಸಕ್ಕಿಂಗ್‌ ಯಂತ್ರದ ಮೂಲಕ ತ್ಯಾಜ್ಯ ಹೊರ ತೆಗೆದು ಅದನ್ನು ಮರು ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ.

ನಿರ್ಮಾಣಕ್ಕೆ ಬೇಕಾದ ಸಾಮಗ್ರಿ
ಹೊಸ ಆದರಿಯ ಶೌಚಗುಂಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಇಟ್ಟಿಗೆಗಳು ಅಥವಾ ಸಿಮೆಂಟ್‌ ರಿಂಗ್‌ಗಳು, ಮರಳು, ಸಿಮೆಂಟ್‌, ಸಿಮೆಂಟ್‌ ಅಥವಾ ತಗಡಿನ ಶೀಟ್‌, ಬಾಗಿಲು, ಕಬ್ಬಿಣ, ಜಲ್ಲಿಕಲ್ಲು, 4 ಇಂಚಿನ ಪಿವಿಸಿ ಪೈಪ್‌ (5 ಅಡಿ) ಇತ್ಯಾದಿಗಳು.

ಹೊಸ ಮಾದರಿಗೆ ಪ್ರೋತ್ಸಾಹ
ಕೇಂದ್ರ ಸರಕಾರದ ಸ್ವಚ್ಛ ಭಾರತ ಪರಿಕಲ್ಪನೆಯಡಿ ಎರಡು ಇಂಗುಗುಂಡಿ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ವಿಶ್ವ ಶೌಚಾಲಯ ದಿನಾಚರಣೆಯಂದು ಹೊಸ ಮಾದರಿ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಶೌಚಾಲಯ ನಿರ್ಮಿಸುವವರು ಹೊಸ ಮಾದರಿ ಬಳಸಲು ಪ್ರೋತ್ಸಾಹ ನೀಡಲಾಗುವುದು.
– ಭವಾನಿಶಂಕರ ಎನ್‌, ಸಹಾಯಕ ನಿರ್ದೇಶಕ, ಗ್ರಾಮೀಣ ಉದ್ಯೋಗ, ತಾ.ಪಂ. ಸುಳ್ಯ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.