ಧರ್ಮದ ಉದ್ದೇಶ ಸತ್ಯವನ್ನು ಬಯಲು ಮಾಡುವುದು: ಜೆ.ಆರ್.ಲೋಬೋ
Team Udayavani, Dec 7, 2018, 4:34 PM IST
ಧರ್ಮಸ್ಥಳ: ಗಾಂಧಿ ಚಿಂತನೆಗಳನ್ನು ಸಾಮಾಜಿಕ ಒಳಿತಿಗಾಗಿ ಮತ್ತೊಮ್ಮೆ ನೆನಪಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆದ 86ನೇ ಐತಿಹಾಸಿಕ ಸರ್ವಧರ್ಮ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿ, ‘ಧರ್ಮಗಳಲ್ಲಿ ಸಮನ್ವಯತೆ ಗಾಂಧೀಜಿಯ ಸಂದೇಶಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
ಶಾಂತಿಯನ್ನು ಅನುಸರಿಸಲು ಗಾಂಧೀಜಿಯವರು ಕಂಡುಕೊಂಡ ಮಾರ್ಗ ಧರ್ಮ. ಗಾಂಧೀಜಿಯ ಚಿಂತನೆಗಳು ಅವರ ಕಾಲಾವಧಿಯಂತೆ ಇಂದಿನ ನಮ್ಮ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ನಾವು ಕಾಣಬಹುದು. ಅವರ ಪ್ರಕಾರ ಹಿಂದುತ್ವ ಎಂದರೆ ಎಲ್ಲರನ್ನು ಒಳಗೊಂಡಿದ್ದು. ಅದು ಮುಸ್ಲಿಂ ವಿರೋಧಿ ಅಲ್ಲ. ಕ್ರೈಸ್ತ ವಿರೋಧಿ ಅಲ್ಲ ಎಂದರು.
ಯಾವುದೇ ಧರ್ಮದ ಉದ್ದೇಶ ಸತ್ಯವನ್ನು ಬಯಲು ಮಾಡುವುದಾಗಿದೆ. ಗಾಂಧೀಜಿಯವರು ಧರ್ಮಗಳಲ್ಲಿ ಅಡಗಿರುವ ಸತ್ಯಗಳ ಬಗ್ಗೆ ಅರಿತವರು.
ಒಬ್ಬ ಹಿಂದೂ ಉತ್ತಮ ಹಿಂದುವಾದರೆ, ಒಬ್ಬ ಮುಸಲ್ಮಾನ ಉತ್ತಮ ಮುಸಲ್ಮಾನನಾದರೆ, ಒಬ್ಬ ಕ್ರೈಸ್ತ ಉತ್ತಮ ಕ್ರೈಸ್ತನಾದರೆ ಅವರು ಇನ್ನೊಂದು ಧರ್ಮವನ್ನು ವಿರೋಧಿಸಲು ಸಾಧ್ಯವಿಲ್ಲ. ಪ್ರತೀ ಧರ್ಮವೂ ಅನೇಕತೆಯ ಸಿದ್ದಾಂತದ ಮೇಲೆ ನಿಂತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಇತರ ಧರ್ಮಗಳಿಗೂ ನೀಡಬೇಕು. ದೇಶದ ಒಗ್ಗಟ್ಟಿಗೆ ಮತ್ತು ಪುನರ್ ನಿರ್ಮಾಣಕ್ಕೆ ಎಲ್ಲಾ ಧರ್ಮದವರು ಇತರ ಧರ್ಮದವರನ್ನು ಗೌರವಿಸುವುದು ಅನಿವಾರ್ಯ ಎಂದರು.
ಗಾಂಧೀಜಿಯವರ ಮುಖ್ಯ ತತ್ವ ಅಹಿಂಸೆ. ಅವರ ಈ ತತ್ವ ಖಿಲಾಫತ್ ಚಳವಳಿಯಲ್ಲಿ ಮುಸ್ಲಿಂ ನಾಯಕರಿಗೆ ಶಾಂತಿಯನ್ನು ಪಾಲಿಸಲು ಪ್ರೇರಣೆಯಾಯಿತು. ಹಲವು ಧರ್ಮಗಳ ನೆಲೆಯಾದ ಭಾರತದಲ್ಲಿ ಜಾತ್ಯತೀತತೆ ದೇಶದ ಅಸ್ಮಿತೆ. ಧರ್ಮವು ಪ್ರತಿಯೊಬ್ಬನ ವೈಯಕ್ತಿಕ ವಿಚಾರ. ಗಾಂಧೀಜಿಯವರು ಎಲ್ಲಾ ಸಭೆಗಳಲ್ಲಿ ಪ್ರತಿಪಾದಿಸುತಿದ್ದ ಹಾಗೆ ನಾವು ಮೊದಲು ಭಾರತೀಯರು. ಆನಂತರ ಹಿಂದೂ, ಮುಸ್ಲಿಂ, ಕ್ರೈಸ್ತ. ಜೈನ, ಪಾರ್ಸಿ ಎಂದರು ಹೇಳುವ ಮೂಲಕ ಮಹಾತ್ಮನ ಸಂದೇಶವನ್ನು ಸಾರಿದರು.
ಧರ್ಮದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವುದು ಬೇಡ. ಧರ್ಮದ ಮೂಲಕ ಪ್ರೀತಿಯನ್ನು ಸಾರೋಣ. ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾರಿಸ್ ಸೋಕಿಲ
ಎಸ್.ಡಿ.ಎಂ ಕಾಲೇಜು ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ