ಕೊಡಿಮರ ಸಾಗಿಸುವ ವಾಹನ ಸಾರಥಿ ಸಾಹಸ ವೈರಲ್‌


Team Udayavani, Dec 11, 2018, 3:50 AM IST

kodimara-10-12.jpg

ನಗರ: ಅಗಲ ಕಿರಿದಾದ ರಸ್ತೆ, ಬಲ ಭಾಗದಲ್ಲಿ ಕೆರೆ, ಎಡ ಭಾಗದಲ್ಲಿ ಹೊಳೆ, ಜತೆಗೆ ದೊಡ್ಡ ತಿರುವು. ಇಂತಹ ರಸ್ತೆಯಲ್ಲಿ ದೊಡ್ಡ ಭಾರದ ಮರವನ್ನು ತುಂಬಿಕೊಂಡ 18 ಚಕ್ರದ ಟ್ರೈಲರ್‌ ಅನ್ನು ಅದರ ಚಾಲಕ ಯಶಸ್ವಿಯಾಗಿ ಮುನ್ನಡೆಸುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಶೇಷ ನಡೆದಿರುವುದು ಬಡಗನ್ನೂರು ಗ್ರಾಮದ ಪಟ್ಟೆಯಲ್ಲಿ. ಅವಳಿ ವೀರ ಪುರುಷರಾದ ಕೋಟಿ – ಚೆನ್ನಯರು ಹಾಗೂ ತಾಯಿ ದೇಯಿ ಬೈದ್ಯೆತಿಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಕ್ಕೆ ಬಿಂಬಮರ ಮತ್ತು ಕೊಡಿ ಮರವನ್ನು ಮೆರವಣಿಗೆಯ ಮೂಲಕ ಸಾಗಿಸುವಾಗ ನಡೆದ ಘಟನೆಯಿದು. ಟ್ರೈಲರನ್ನು ಚಾಲನೆ ಮಾಡಿರುವುದು ನುರಿತ ಚಾಲಕ ಮಂಗಳೂರು ಪಣಂಬೂರು ನಿವಾಸಿ ದಿವಾಕರ ಪೂಜಾರಿ.

289ನೇ ಅನುಭವ
ದಿವಾಕರ ಪೂಜಾರಿ ಅವರು ರಾಜ್ಯ, ಹೊರ ರಾಜ್ಯಗಳಲ್ಲಿ 289 ದೈವ, ದೇವಸ್ಥಾನಗಳಿಗೆ ಕೊಡಿಮರ ಸಾಗಿಸಿ ಅನುಭವ ಇರುವ ಚಾಲಕ. ಈ ಸೇವೆಯನ್ನು ಭಕ್ತಿಯಿಂದ ಮಾಡಿರುವ ಅವರು ಕೋಟಿ – ಚೆನ್ನಯ ಮೂಲಸ್ಥಾನಕ್ಕೆ 28ನೇ ಕೊಡಿಮರ ಸಾಗಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎನ್ನುತ್ತಾರೆ. ದೈವಸ್ಥಾನ, ದೇವಸ್ಥಾನಗಳಿಗೆ ಉಚಿತವಾಗಿ ಟ್ರೈಲರ್‌ ಒದಗಿಸುವ ಮಾಲಕ ಮಾಜಿ ಸಚಿವ ನಾಗರಾಜ ಶೆಟ್ಟಿ ಅವರ ಭಕ್ತಿಯ ಸೇವೆಯನ್ನು ನೆನೆಯುತ್ತಾರೆ. ರಾಜ್ಯದೊಳಗೆ ದೇವಾಲಯಗಳಿಗೆ ಕೊಡಿಮರ ಕೊಂಡೊಯ್ಯುವ ಸಂದರ್ಭ ಉಚಿತ ವಾಹನದ ವ್ಯವಸ್ಥೆ ಮಾಡುವ ಇವರು ಹೊರರಾಜ್ಯಗಳಿಗೆ ಮಾತ್ರ ಲೋಡ್‌ ಆದ ಬಳಿಕದ ಖರ್ಚು ತೆಗೆದುಕೊಳ್ಳುತ್ತಾರೆ.

ಯಶಸ್ವಿ ಪಯಣ
ಪೊಳಲಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ ಸಹಿತ ಜಿಲ್ಲೆಯ-ಹೊರಜಿಲ್ಲೆಗಳ ದೇವಾಲಯದ ಕೊಡಿಮರ, ಮೈಸೂರು ಚಾಮುಂಡಿ ಬೆಟ್ಟ, ಆಂಧ್ರಪ್ರದೇಶದ ಶ್ರೀ ಶೈಲಂ ಮಹಾನಂದಿ ದೇವಾಲಯ, ಮಹಾರಾಷ್ಟ್ರ  ಜಿ.ಎಸ್‌.ಬಿ. ದೇವಾಲಯಗಳಿಗೆ ಕೊಡಿಮರ, ದೊಡ್ಡ ಗಾತ್ರದ ಶಿಲೆಗಳನ್ನು ಸಾಗಿಸಿದ ಹೆಗ್ಗಳಿಕೆ ದಿವಾಕರ ಪೂಜಾರಿ ಅವರದ್ದು. ಕಾರ್ಕಳದಿಂದ ಸಾವಿರ ಕಂಬ ಬಸದಿಗೆ ಗೊಮಟೇಶ್ವರ ಮೂರ್ತಿ ಕೊಂಡೊಯ್ದಿರುವುದು, ವಿವಿಧ ಕಡೆಗಳಿಗೆ ಸುಮಾರು 5 ರಥಗಳನ್ನು ವಾಹನದ ಸಾರಥಿಯಾಗಿ ಇವರು ಯಶಸ್ವಿಯಾಗಿ ಸಾಗಿಸಿದ್ದಾರೆ.

ರಿಸ್ಕ್ ಇದೆ
ಈ ಜವಾಬ್ದಾರಿಯಲ್ಲಿ ಸಾಕಷ್ಟು ರಿಸ್ಕ್ ಇದೆ. ವರ್ಷದಲ್ಲಿ 10 -20 ಕ್ಷೇತ್ರಗಳಿಗೆ ಕೊಡಿಮರಗಳನ್ನು ಸಾಗಿಸುತ್ತೇನೆ. ಎಷ್ಟೇ ಅನುಭವ ಇದ್ದರೂ ಟ್ರೇಲರ್‌ಗೆ ಲೋಡ್‌ ಮಾಡಿದ ಬಳಿಕ ದೈವ, ದೇವರ ಕಾರಣಿಕದಿಂದ ಯಶಸ್ಸು ಲಭಿಸುತ್ತದೆ. ಶ್ರದ್ಧೆ, ನಿಷ್ಠೆಯ ಜತೆಗೆ ಶುದ್ಧತೆಯ ವ್ರತವನ್ನು ಕೊಡಿಮರ ಸಾಗಿಸುವ ಸಂದರ್ಭ ಪಾಲಿಸುತ್ತೇನೆ. 
– ದಿವಾಕರ ಪೂಜಾರಿ, ಟ್ರೇಲರ್‌ ಚಾಲಕ

ಟಾಪ್ ನ್ಯೂಸ್

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ; ಪ್ರಕರಣ ದಾಖಲು

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.