362 ಫಲಾನುಭವಿಗಳ ಮನ್ನಾ ಹಣ ಪಾವತಿಗೆ ಬಾಕಿ


Team Udayavani, Dec 14, 2018, 9:20 AM IST

loan.jpg

ಸುಳ್ಯ: ಈ ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ ಘೋಷಿಸಿದ 50 ಸಾವಿರ ರೂ. ರೈತ ಬೆಳೆ ಸಾಲ ಮನ್ನಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 362 ಫಲಾನುಭವಿಗಳ ಮನ್ನಾ ಹಣ ಸಹಕಾರ ಬ್ಯಾಂಕ್‌ಗಳಿಗೆ ಪಾವತಿ ಆಗಿಲ್ಲ!

ಜಿಲ್ಲೆಯಲ್ಲಿ 64,767 ಫಲಾನುಭವಿಗಳ ಪೈಕಿ 64,405 ಮಂದಿಯ ಮನ್ನಾ ಹಣ ಪಾವತಿಯಾಗಿದೆ. ಅಪೆಕ್ಸ್‌ ಬ್ಯಾಂಕ್‌ ಮೂಲಕ ಡಿಸಿಸಿ ಬ್ಯಾಂಕ್‌ಗೆ, ಅಲ್ಲಿಂದ ಫಲಾನುಭವಿ ರೈತ ಖಾತೆ ಹೊಂದಿರುವ ಸಹಕಾರಿ ಸಂಘಕ್ಕೆ ಜಮೆಗೊಂಡಿದೆ. ಇದರಲ್ಲಿ 362 ಫಲಾನುಭವಿಗಳ ಹಣ ಸಹಕಾರ ಬ್ಯಾಂಕುಗಳಿಗೆ ಬಿಡುಗಡೆಯಾಗಲು ಬಾಕಿ ಇದೆ.

ಅರ್ಹರ ವಿವರ
ಮಂಗಳೂರು ತಾಲೂಕಿನಲ್ಲಿ 3,809 ಮಂದಿ ರೈತರ 17.29 ಕೋ.ರೂ., ಬಂಟ್ವಾಳದಲ್ಲಿ 14,992 ರೈತರ 68.08 ಕೋ.ರೂ., ಬೆಳ್ತಂಗಡಿಯಲ್ಲಿ 15,389 ರೈತರ 69.88 ಕೋ.ರೂ., ಪುತ್ತೂರಿನಲ್ಲಿ 17,309 ರೈತರ 78.61 ಕೋ.ರೂ., ಸುಳ್ಯದಲ್ಲಿ 13,268 ರೈತರ 60.24 ಕೋ.ರೂ. ಸಾಲ ಮನ್ನಾಕ್ಕೆ ಅರ್ಹತೆ ಹೊಂದಿತ್ತು.

ಪಾವತಿ ವಿವರ
ಮಂಗಳೂರು ತಾಲೂಕಿನಲ್ಲಿ 3,788 ರೈತರ 17.19 ಕೋ.ರೂ., ಬಂಟ್ವಾಳದಲ್ಲಿ 14,909 ರೈತರ 67.67 ಕೋ.ರೂ., ಬೆಳ್ತಂಗಡಿಯಲ್ಲಿ 15303 ರೈತರ 69.45 ಕೋ.ರೂ., ಪುತ್ತೂರಿನಲ್ಲಿ 17,213 ರೈತರ 78.12 ಕೋ.ರೂ., ಸುಳ್ಯದಲ್ಲಿ 13,192 ರೈತರ 59.87 ಕೋ.ರೂ.ಸಾಲ ಮನ್ನಾ ಹಣ ಪಾವತಿಸಲಾಗಿದೆ ಎಂದು ಸಹಕಾರಿ ಸಂಘದ ನಿರೀಕ್ಷಕ ಕಚೇರಿ ಮಾಹಿತಿ ನೀಡಿದೆ.

362 ಮಂದಿಗೆ ಬಾಕಿ
ಮಂಗಳೂರು ತಾಲೂಕಿನಲ್ಲಿ 21 ರೈತರ 10.61 ಲ.ರೂ., ಬಂಟ್ವಾಳದಲ್ಲಿ 83 ರೈತರ 41.78 ಲ.ರೂ., ಬೆಳ್ತಂಗಡಿಯಲ್ಲಿ 86 ರೈತರ 42.87 ಲ. ರೂ., ಪುತ್ತೂರಿನಲ್ಲಿ 96 ರೈತರ 48.25 ಲ. ರೂ., ಸುಳ್ಯದಲ್ಲಿ 76 ರೈತರ 36.96 ಲ. ರೂ. ಸಾಲ ಮನ್ನಾ ಹಣ ಪಾವತಿಗೆ ಬಾಕಿ ಇದೆ.

ಹೊಸ ಸಾಲಕ್ಕೆ ಸಮಸ್ಯೆ
ಜಿಲ್ಲೆಯಲ್ಲಿ ಒಟ್ಟು 362 ರೈತರ ಸಾಲ ಮನ್ನಾ ಮೊತ್ತ ಪಾವತಿಯಾಗಲು ಬಾಕಿ ಇದೆ. ಜಿಲ್ಲಾ ಸಹಕಾರ ಸಂಘಗಳ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಸರಕಾರದಿಂದ ಎಲ್ಲ ಹಣ ಬಿಡುಗಡೆ ಆಗಿದ್ದು, ಅಪೆಕ್ಸ್‌ ಬ್ಯಾಂಕ್‌ನಿಂದ ಸಹಕಾರ ಬ್ಯಾಂಕ್‌ಗಳಿಗೆ ಬಿಡುಗಡೆ ಬಾಕಿ ಇದೆ. ಮನ್ನಾ ಆದ ಹಣ ಖಾತೆಗೆ ಜಮೆ ಆಗದೆ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಅಳಲು ಫಲಾನುಭವಿ ಕೃಷಿಕರದು. ಸರಕಾರ ಸಾಲ ಮನ್ನಾ ಮಾಡಿದ ಮೇಲೆ ಫಲಾನುಭವಿ ಖಾತೆಗೆ ಹಣ ಪಾವತಿ ಆದ ಅನಂತರವೇ ನಾವು ಹೊಸ ಸಾಲ ಕೊಡಬಹುದು. ಇಲ್ಲದಿದ್ದರೆ ಅಷ್ಟು ಫಂಡ್‌ ಬೇಕಲ್ಲವೇ ಎನ್ನುವುದು ಸಹಕಾರ ಬ್ಯಾಂಕ್‌ನ ಅಭಿಪ್ರಾಯ.

ಬಿಡುಗಡೆಗೆ ಆಗಿದೆ
ಸರಕಾರದಿಂದ ಎಲ್ಲ ಹಣ ಬಿಡುಗಡೆಗೊಂಡಿದೆ. ಅಪೆಕ್ಸ್‌ ಬ್ಯಾಂಕ್‌ಗೆ ಬಂದಿದೆ. ಡಿಸಿಸಿ ಬ್ಯಾಂಕ್‌, ಸಹಕಾರ ಸಂಘಗಳಿಂದ ಒಂದು ವರದಿ ಕಳುಹಿಸಿದ ತತ್‌ಕ್ಷಣ ಸಹಕಾರಿ ಬ್ಯಾಂಕ್‌ಗಳಿಗೆ ಪಾವತಿ ಆಗಲಿದೆ. ಸಣ್ಣ ಮೊತ್ತವಷ್ಟೆ ಬಾಕಿ ಇದೆ.
ಬಿ.ಕೆ. ಸಲೀಂ,ಜಿಲ್ಲಾ ಉಪನಿಬಂಧಕ ಸಹಕಾರಿ ಸಂಘ, ಮಂಗಳೂರು

 ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.