ಕುಡಿಯುವ ನೀರು ಸರಬರಾಜು: ಕ್ರಮಕ್ಕೆ ಸೂಚನೆ


Team Udayavani, Feb 13, 2019, 6:47 AM IST

13-february-8.jpg

ಬಂಟ್ವಾಳ : ಕರೋಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ವಿದ್ಯುತ್‌ ಸರಬರಾಜು ಟವರ್‌ ಕುಸಿದಿದ್ದು, ಅದನ್ನು ಸ್ಥಳಾಂತ ರಿಸಿ ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದಕ್ಕೆ ತಡೆಯಾಜ್ಞೆ ತರಲಾ ಗಿದ್ದು, ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಸಮಸ್ಯೆ ಎದುರಾಗಿದೆ. ಅಧಿಕಾರಿ ವರ್ಗ ಸಮಸ್ಯೆಯನ್ನು ಪರಿಹರಿ ಸಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ತಾ.ಪಂ. ಸದಸ್ಯ ಉಸ್ಮಾನ್‌ ಕರೋಪಾಡಿ ಆರೋಪಿಸಿದರು.

ಅವರು ಫೆ. 12ರಂದು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದರು.

ಮೆಸ್ಕಾಂ ಕಾ.ನಿ. ಎಂಜಿನಿಯರ್‌ ಮತ್ತು ಜಿ.ಪಂ. ಸ.ಕಾ.ನಿ. ಎಂಜಿನಿಯರ್‌ ಮಾತುಕತೆ ನಡೆಸಿ ಪರ್ಯಾಯ ಕ್ರಮ ಮೂಲಕ ವಿದ್ಯುತ್‌ ಸರಬರಾಜು ಆಗು ವಂತೆ ಮಾಡಿ ಕುಡಿಯುವ ನೀರು ಸರಬರಾಜಿಗೆ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯ ನಿರ್ವ ಹಣಾಧಿಕಾರಿ ಸೂಚನೆ ನೀಡಿದರು.

ಕುಡಿಯುವ ನೀರು ಸರಬರಾಜಿಗೆ ಅಡ್ಡಿಯಾಗುವ ಸಮಸ್ಯೆ ಬಂದಾಗ ಅದನ್ನು ಆದ್ಯತೆಯಲ್ಲಿ ನಿವಾರಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಪೋಡಿಮುಕ್ತ ಗ್ರಾಮ
ತಾಲೂಕನ್ನು ಪೋಡಿಮುಕ್ತ ಗ್ರಾಮವಾಗಿ ಮಾಡಲಾಗಿದೆ ಎಂದು ಈ ಹಿಂದೆಯೇ ಘೋಷಿಸಿದ್ದರೂ ಸಮರ್ಪಕ ಪ್ರಗತಿ ಆಗಿಲ್ಲ. 94 ಸಿ ಜಮೀನು ಮಂಜೂರಾದರೂ ಅದರ ಫಲಾನುಭವಿಗೆ ಮತ್ತು ಅಕ್ರಮ-ಸಕ್ರಮ ಜಮೀನಿಗೆ ವಿಂಗಡಿಸಿ ನೀಡುವ ಪ್ರಕ್ರಿಯೆ ವಿಳಂಬದಿಂದ ಸಮಸ್ಯೆ ಎದುರಾಗಿದೆ ಎಂದು ಉಸ್ಮಾನ್‌ ಪ್ರಸ್ತಾವಿಸಿದರು.

ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಮಾಹಿತಿ ನೀಡಿ, ನಿಮ್ಮ ದೂರಿನ ಬಗ್ಗೆ ಪರಿಶೀಲನೆ ಮಾಡುತ್ತೇನೆ. ತಾಲೂಕಿನ 84 ಗ್ರಾಮಗಳಲ್ಲಿ 32 ಗ್ರಾಮಗಳು ಪೋಡಿಮುಕ್ತ ಆಗಿವೆೆ. ವಿವಿಧ ಕಾರಣಗಳಿಂದ ಸರ್ವೆಯರ್‌ಗಳನ್ನು ಇತರ ಕೆಲಸದಲ್ಲಿ ತೊಡಗಿಸಿದ್ದರಿಂದ ಭೂಮಿ ಅಳತೆ ಕೆಲಸ ವಿಳಂಬವಾಗಿದೆ ಎಂದರು.

ಪ್ರತ್ಯೇಕ ಗ್ರಾಮಕರಣಿಕ
ಒಬ್ಬರೇ ಗ್ರಾಮಕರಣಿಕರು ಕರಿಯಂಗಳ ಗ್ರಾ.ಪಂ. 5 ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದ್ದು, ಕರಿಯಂ ಗಳಕ್ಕೆ ಪ್ರತ್ಯೇಕ ಗ್ರಾಮ ಕರಣಿಕರನ್ನು ನೇಮಿಸಬೇಕು ಎಂದು ಯಶವಂತ ಪೂಜಾರಿ ಪೊಳಲಿ ಸಭೆಯಲ್ಲಿ ಪ್ರಸ್ತಾವಿಸಿದರು.

5 ಮಂದಿ ಗ್ರಾಮಕರಣಿಕರು ಬಂಟ್ವಾಳಕ್ಕೆ ನಿಯುಕ್ತಿ ಆಗಿದ್ದು, ಅವರಲ್ಲಿ ಒಬ್ಬರನ್ನು ವಿಸ್ತಾರ ವ್ಯಾಪ್ತಿಯುಳ್ಳ ಕರಿಯಂಗಳಕ್ಕೆ ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ತಿಳಿಸಿದರು.

ಸರಕಾರಿ ಜಮೀನು, ಶ್ಮಶಾನ, ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಜಮೀನು ಹಂಚಿಕೆ ಬಗ್ಗೆ ಗಡಿ ಗುರುತು ತೋರಿಸಲು ಗ್ರಾಮ ಕರಣಿಕರು ನಿರಾಕರಿಸುತ್ತಾರೆ. ನಮಗೆ ತಹಶೀಲ್ದಾರ್‌ ನಿರ್ದೇಶನ ನೀಡಿದರೆ ಮಾತ್ರ ಅಳತೆ ಸಾಧ್ಯ ಎಂದು ಹೇಳುತ್ತಾರೆ.

ಆದರೆ 94 ಸಿ ಸಹಿತ ಇತರ ಉದ್ದೇಶದಲ್ಲಿ ಗಡಿ ಗುರುತು ತೋರಿಸುತ್ತಾರೆ ಎಂದು ಇಡ್ಕಿದು ತಾ.ಪಂ. ಸದಸ್ಯೆ ಬಿ. ವನಜಾಕ್ಷಿ ಆರೋಪಿಸಿದರು. ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ ನಮ್ಮ ಗ್ರಾಮದಲ್ಲಿಯೂ ಅದೇ ಸಮಸ್ಯೆ ಇದೆ ಎಂದರು.

ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅವರು ಅನುಮತಿ ನೀಡಿದರೆ ಗ್ರಾಮ ಕರಣಿಕರಿಗೆ ಕರ್ತವ್ಯ ನಿರ್ವಹಿಸಲು ಆದೇಶಿಸಬಹುದು. ಸದ್ಯ ಸರ್ವೆಯರ್‌ಗಳ ಸಹಾಯದಿಂದ ಅಳತೆ ಗಡಿ ಗುರುತಿಗೆ ತುರ್ತು ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಹಶೀಲ್ದಾರ್‌ ಹೇಳಿದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳ ಬಗ್ಗೆ ಸರಿಯಾದ ಸ್ಪಂದನವಿಲ್ಲ. ಆರೋಗ್ಯ ಕೇಂದ್ರ ಸಿಬಂದಿ ಅಸ್ಥೆ ವಹಿಸುವುದಿಲ್ಲ ಎಂದು ಬಿ. ವನಜಾಕ್ಷಿ ತಿಳಿಸಿದರು.

ಪಿಲಾತಬೆಟ್ಟು ಸದಸ್ಯ ರಮೇಶ ಕುಡುಮೇರು ಮಾತನಾಡಿ, ನೂತನ ಗ್ರಾ.ಪಂ.ಗೆ ಪೀಠೊಪಕರಣ ಒದಗಿಸುವ ಬಗ್ಗೆ ಆದೇಶವಾಗಿದ್ದು, ಅದನ್ನು ಸ್ವೀಕರಿಸಿ ಬಿಲ್‌ ಪಾವತಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯ ನಿರ್ವಹಣಾಧಿಕಾರಿ ಅವರು ಸಂಬಂಧಪಟ್ಟ ಪಿಡಿಒಗೆ ಸೂಚನೆ ನೀಡುವುದಾಗಿ ತಿಳಿಸಿದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಜಿ.ಪಂ. ಸದಸ್ಯರಾದ ಮಂಜುಳಾ ಮಾಧವ ಮಾವೆ, ರವೀಂದ್ರ ಕಂಬಳಿ, ಎಂ. ತುಂಗಪ್ಪ ಬಂಗೇರ ಉಪಸ್ಥಿತರಿದ್ದರು. ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಸಮನ್ವಯತೆ
ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಇದರಿಂದ ಹೆಚ್ಚಿನ ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹಾರ ಕಾಣುತ್ತವೆ. ಸರಕಾರ ದಿಂದ ಆಗಬೇಕಾದ, ನಿರ್ದೇಶನ ಪಡೆಯಬೇಕಾದ ವಿಚಾರ ಬಂದಾಗ ನಮ್ಮ ಜತೆ ಚರ್ಚಿಸಿ.
– ಕೆ. ಚಂದ್ರಹಾಸ ಕರ್ಕೇರ
ಅಧ್ಯಕ್ಷರು, ತಾ.ಪಂ. ಬಂಟ್ವಾಳ

ಸಮಸ್ಯೆ ಪರಿಹರಿಸಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಸಮಸೆಗಳಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು. ಮೆಸ್ಕಾಂ ಜನಸಂಪರ್ಕ ಸಭೆಗೆ ಜನಪ್ರತಿನಿಧಿಗಳನ್ನು ಕರೆದು ಸಮಸ್ಯೆ ಪರಿಹಾರ ಆಗ‌ಬೇಕು.
– ಅಬ್ಟಾಸ್‌ ಅಲಿ
ಉಪಾಧ್ಯಕ್ಷರು, ತಾ.ಪಂ. ಬಂಟ್ವಾಳ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.