ಅಪರಾಧ ನಿಯಂತ್ರಿಸಲು ಸ್ವಯಂ ಜಾಗೃತಿ ಅತ್ಯಗತ್ಯ


Team Udayavani, Dec 18, 2018, 4:20 AM IST

aparadha-18-12.jpg

ಸವಣೂರು: ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗುವುದು ಅವಶ್ಯ. ಪ್ರತಿಯೊಂದು ವಿಚಾರದಲ್ಲೂ ಮುಂಜಾಗರೂಕತೆ ವಹಿಸುವುದು ಮುಖ್ಯ ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್‌. ಈರಯ್ಯ ಹೇಳಿದರು. ಅವರು ಸೋಮವಾರ ಸವಣೂರು ವಿನಾಯಕ ಸಭಾಭವನದಲ್ಲಿ ದ.ಕ. ಜಿಲ್ಲಾ ಪೊಲೀಸ್‌, ಬೆಳ್ಳಾರೆ ಪೊಲೀಸ್‌ ಠಾಣೆ ವತಿಯಿಂದ ನಡೆಯುತ್ತಿರುವ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.

ಮನೆ ಬಿಟ್ಟು ದೂರ ಹೋಗುತ್ತಿರುವ ಸಂದರ್ಭದಲ್ಲಿ ಪಕ್ಕದ ಮನೆ ಹಾಗೂ ಬೀಟ್‌ ಪೊಲೀಸರಿಗೆ ಮಾಹಿತಿ ನೀಡಬೇಕು. ಹೊಸ ತಂತ್ರಜ್ಞಾನದ ಲಾಕ್‌ಗಳನ್ನು ಬಳಸಬೇಕು. ಬ್ಯಾಂಕ್‌ ಅಧಿಕಾರಿಗಳೆಂದು ಕರೆಮಾಡಿ ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು ಖಾತೆಗೆ ಕನ್ನ ಹಾಕಿ ವಂಚಿಸುವ ಜಾಲವಿದ್ದು, ಯಾವುದೇ ಕಾರಣಕ್ಕೂ ಯಾರಿಗೂ ಪಾಸ್‌ವರ್ಡ್‌ಗಳನ್ನು ನೀಡಬಾರದು. ಎಲ್ಲರೂ ತಮ್ಮ ರಕ್ಷಣೆಯ ಕುರಿತು ಸ್ವಯಂ ಜಾಗರೂಕತೆ ವಹಿಸುವುದು ಆವಶ್ಯ. ಕಾನೂನು ಪಾಲನೆ ಹಾಗೂ ನಿಯಮಗಳನ್ನು ಪಾಲಿಸಿದರೆ ಅವಘಡಗಳನ್ನು ತಪ್ಪಿಸಬಹುದು ಎಂದರು.

ಸಾರ್ವಜನಿಕರ ಸಹಕಾರ ಮುಖ್ಯ
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಮಾತನಾಡಿ, ಬೆಳ್ಳಾರೆ ಠಾಣೆ ಆದ ಬಳಿಕ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ. ಆದರೂ ಸೋಲಾರ್‌ ಕಳ್ಳತನ ಪ್ರಕರಣ ನಡೆದಿದೆ. ಇಲಾಖೆಯ ಜತೆ ಸಾರ್ವಜನಿಕರೂ ಸಹಕಾರ ನೀಡುವುದರಿಂದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಸಾಧ್ಯ ಎಂದರು. ಸವಣೂರು ಪ.ಪೂ. ಕಾಲೇಜಿನ ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ, ಪ್ರೌಢಶಾಲಾ ಶಿಕ್ಷಕ ರಘು ಬಿ.ಆರ್‌. ಮಾತನಾಡಿದರು.

ಸಭೆಗೂ ಮುನ್ನ ಸವಣೂರು ಪ.ಪೂ. ಕಾಲೇಜು ಬಳಿಯಿಂದ ಚಾಪಳ್ಳ ಮಸೀದಿಯ ವರೆಗೆ ಸವಣೂರು ಪ.ಪೂ. ಕಾಲೇಜು, ಪ್ರೌಢಶಾಲೆ, ಸ.ಹಿ.ಪ್ರಾ. ಶಾಲೆಯ ಒಟ್ಟು 400 ಮಕ್ಕಳಿಂದ ಅಪರಾಧ ತಡೆ ಜಾಗೃತಿಯ ಫಲಕಗಳನ್ನು ಹಿಡಿದು ಜಾಥಾ ನಡೆಯಿತು. ಮೂರು ಸಂಸ್ಥೆಗಳ ಶಿಕ್ಷಕರು ಪಾಲ್ಗೊಂಡಿದ್ದರು.
ಹೆಡ್‌ ಕಾನ್‌ಸ್ಟೆಬಲ್‌ ಬಾಲಕೃಷ್ಣ ಕೊಪ್ಪ, ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳಾದ ಪ್ರವೀಣ್‌ ಬಾರ್ಕಿ, ಮಂಜುನಾಥ ಎಚ್‌.ಎಸ್‌., ಮಂಜುನಾಥ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್‌ ಭಂಡಾರಿ ಸಹಕರಿಸಿದರು. ಸವಣೂರು ಬೀಟ್‌ ಪೊಲೀಸ್‌ ಕೃಷ್ಣಪ್ಪ ಸ್ವಾಗತಿಸಿ, ಪೊಲೀಸ್‌ ಹಾಲೇಶ್‌ ಎಚ್‌. ಗೌಡ್ರ ವಂದಿಸಿದರು.

ಕೊಳ್ತಿಗೆ ದುರಂತ: ಕಂಬನಿ
ಕೊಳ್ತಿಗೆಯಲ್ಲಿ ಇಬ್ಬರು ಮಕ್ಕಳು ತೊಟ್ಟಿಯ ನೀರಿಗೆ ಬಿದ್ದು ಮೃತಪಟ್ಟಿ ರುವುದನ್ನು ಪ್ರಸ್ತಾವಿಸಿದ ಪಿಎಸ್‌ಐ ಈರಯ್ಯ ಅವರು, ಕೆಲ ದಿನಗಳ ಹಿಂದೆ ಪೆರ್ಲಂಪಾಡಿ ಶಾಲಾ ವಾರ್ಷಿಕೋತ್ಸವ ಸಂಧರ್ಭದಲ್ಲಿ ಶಾಲಾ ನಾಯಕಿ ಪ್ರಜ್ಞಾ ಅವಳಿಂದ ಧ್ವಜವಂದನೆ ಸ್ವೀಕರಿಸಿದ್ದು ತನ್ನ ವೃತ್ತಿ ಜೀವನದಲ್ಲಿ ಪಡೆದ ಶಿಸ್ತಿನ ವಂದನೆಯಾಗಿತ್ತು. ಆಕೆ ಧೈರ್ಯಶಾಲಿಯಾಗಿದ್ದಳು. ಉಜ್ವಲ ಭವಿಷ್ಯ ಹೊಂದಬೇಕಿದ್ದ ಇಬ್ಬರು ಪುಟಾಣಿಗಳು ಜೀವ ಕಳೆದುಕೊಂಡಿದ್ದು ಬೇಸರದ ವಿಚಾರ ಎಂದು ಕಂಬನಿ ಮಿಡಿದರು. ವಿದ್ಯಾರ್ಥಿಗಳು ಯಾವುದೇ ಕೆಲಸಕ್ಕೂ ತೊಡಗುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕು. ಕೆರೆ, ಬಾವಿ, ಹೊಳೆ ಸಹಿತ ಅಪಾಯಕಾರಿ ಸ್ಥಳಗಳಿಗೆ ಹಿರಿಯರು ಜತೆಗಿಲ್ಲದೆ ಹೋಗಬಾರದು. ಅಜಾಗರೂಕತೆ ಹಾಗೂ ಸಾಹಸ ಪ್ರವೃತ್ತಿ ಕೆಲವೊಮ್ಮೆ ಪ್ರಾಣಕ್ಕೆ ಎರವಾಗುತ್ತಗೆ ಎಂದರು.

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

ಕೂಜಿಮಲೆಗೆ ಭೇಟಿ ನೀಡಿದ್ದು 4 ನಕ್ಸಲರು: ಸಶಸ್ತ್ರಧಾರಿ ತಲಾ ಇಬ್ಬರು ಮಹಿಳೆಯರು,ಪುರುಷರ ಸಂಚಾರ

ಕೂಜಿಮಲೆಗೆ ಭೇಟಿ ನೀಡಿದ್ದು 4 ನಕ್ಸಲರು: ಸಶಸ್ತ್ರಧಾರಿ ತಲಾ ಇಬ್ಬರು ಮಹಿಳೆಯರು,ಪುರುಷರ ಸಂಚಾರ

Arecanut Market  ಅಡಿಕೆ ಧಾರಣೆ ಏರಿಕೆ :170ಕ್ಕೆ ತಲುಪಿದ ಕೊಕ್ಕೊ

Arecanut Market ಅಡಿಕೆ ಧಾರಣೆ ಏರಿಕೆ :170ಕ್ಕೆ ತಲುಪಿದ ಕೊಕ್ಕೊ

Belthangady ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Belthangady ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Bus ಕಿಟಕಿಯಿಂದ ಇಳಿಯಲು ಯತ್ನಿಸಿದ್ದ‌ ವ್ಯಕ್ತಿ ರಸ್ತೆಗೆ ಬಿದ್ದು ಸಾವು

Bus ಕಿಟಕಿಯಿಂದ ಇಳಿಯಲು ಯತ್ನಿಸಿದ್ದ‌ ವ್ಯಕ್ತಿ ರಸ್ತೆಗೆ ಬಿದ್ದು ಸಾವು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.