ಮುರ ಜಂಕ್ಷನ್ಗೆ ಬೇಕು ಪ್ರಯಾಣಿಕರ ತಂಗುದಾಣ
Team Udayavani, Dec 19, 2018, 3:12 PM IST
ಕಬಕ : ಕಬಕ ಗ್ರಾ.ಪಂ. ಹಾಗೂ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ಮುರ ಜಂಕ್ಷನ್ನಲ್ಲಿ ಸೂಕ್ತ ಪ್ರಯಾಣಿಕರ ತಂಗುದಾಣವಿಲ್ಲದೆ ಜನ ಪರದಾಟ ನಡೆಸುವಂತಾಗಿದೆ. ಇಲ್ಲಿ ಹಳೆಯದಾದ ಚಿಕ್ಕ ಬಸ್ ತಂಗುದಾಣ ಇತ್ತಾದರೂ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಅದು ರಸ್ತೆಗಿಂತ ತೀರಾ ಕೆಳ ಮಟ್ಟಕ್ಕೆ ಹೋಗಿದ್ದು, ಮಳೆಗಾಲದಲ್ಲಿ ತಂಗುದಾಣದ ಒಳಗೆ ನೀರು ತುಂಬಿ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಅದು ಈಗ ಪ್ರಯಾಣಿಕರ ಉಪಯೋಗಕ್ಕೆ ಬರುತ್ತಿಲ್ಲ.
ದಿನ ನಿತ್ಯ ಕೆದಿಲ, ಪಟ್ನೂರು, ಕಲ್ಲೇಗ, ಕಲೆಂಬಿ, ಪೋಳ್ಯ, ಶಾಂತಿನಗರ, ಪಲ್ಲತಾರು, ಬನಾರಿ ಭಾಗದ ಜನರು ಮಂಗಳೂರು, ವಿಟ್ಲ, ಕಾಸರಗೋಡು ಮುಂತಾದ ಕಡೆಗಳಿಗೆ ಪ್ರಯಾಣಿಸಲು ಮುರ ಜಂಕ್ಷನ್ ಅವಲಂಬಿಸುತ್ತಾರೆ. ಮುರ ಜಂಕ್ಷನ್ ರಸ್ತೆ ಮೂಲಕ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಕಬಕ – ಸುರತ್ಕಲ್ ರಾಜ್ಯ ಹೆದ್ದಾರಿಗಳಲ್ಲಿ ಚಲಿಸುವ ನೂರಾರು ಸರಕಾರಿ ಹಾಗೂ ಖಾಸಗಿ ಬಸ್ಗಳು, ಇತರ ಸಾರ್ವಜನಿಕ ವಾಹನಗಳಿಗಾಗಿ ಇಲ್ಲಿ ರಸ್ತೆ ಬದಿಯಲ್ಲಿ ಕಾಯಬೇಕಾಗುತ್ತದೆ.
ವೃದ್ಧರು, ಗರ್ಭಿಣಿಯರು, ಚಿಕಿತ್ಸೆಗೆ ತೆರಳುವ ರೋಗಿಗಳು, ಚಿಕ್ಕ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ತತ್ಕ್ಷಣ ಇಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ